Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತುಮಕೂರಿನಲ್ಲಿ ಷೇರು ಮಾರುಕಟ್ಟೆ ಹೆಸರಲ್ಲಿ ಬೃಹತ್ ಸೈಬರ್ ವಂಚನೆ: ನಿರ್ವಾಹಕನಿಗೆ ₹15.31 ಲಕ್ಷದ ವಂಚನೆ; ಲಾಭದ ಆಮಿಷಕ್ಕೆ ಬಲಿಯಾದ ಶರತ್‌ ಬಾಬು

Spread the love

ತುಮಕೂರು:’ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು’ ಎಂಬ ಆಮಿಷಕ್ಕೆ ಒಳಗಾಗಿ ನಗರದ ಸಿದ್ಧಗಂಗಾ ಬಡಾವಣೆ ನಿವಾಸಿ, ಖಾಸಗಿ ಕಂಪನಿಯೊಂದರ ನಿರ್ವಾಹಕ ಶರತ್‌ ಬಾಬು ಎಂಬುವರು ₹15.31 ಲಕ್ಷ ಕಳೆದುಕೊಂಡಿದ್ದಾರೆ.

ಫೇಸ್‌ ಬುಕ್‌ನಲ್ಲಿ ಷೇರು ಮಾರುಕಟ್ಟೆ ಜಾಹೀರಾತು ವೀಕ್ಷಿಸಿ ಅದರಲ್ಲಿನ ಲಿಂಕ್‌ ಕ್ಲಿಕ್‌ ಮಾಡಿದ್ದಾರೆ.

ಆರೋಪಿಗಳು ಫೇಸ್‌ಬುಕ್‌ನಲ್ಲಿ ವಾಟ್ಸ್‌ ಆಯಪ್‌ ಗ್ರೂಪ್‌ ಲಿಂಕ್‌ ಕಳುಹಿಸಿ, ‘ಪ್ಯೂರ್‌ ಫೋಕಸ್‌’, ‘ವಿಐಪಿ ಸರ್ವೀಸ್‌ 359’ ಗ್ರೂಪ್‌ಗಳಿಗೆ ಶರತ್‌ ಅವರನ್ನು ಸೇರ್ಪಡೆ ಮಾಡಿದ್ದಾರೆ. ಇದಾದ ಬಳಿಕ ಶರತ್‌ ‘ಯು ಪ್ರೊ’ ಆಯಪ್‌ ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ.

‘ನಾವು ಹೇಳಿದಂತೆ ಹಣ ವರ್ಗಾಯಿಸಿದರೆ ಅದನ್ನು ನಾವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಿಮಗೆ ಲಾಭ ನೀಡಲಾಗುವುದು’ ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಶರತ್‌, ಮೊದಲ ಹಂತದಲ್ಲಿ ₹4.70ಲಕ್ಷ ವರ್ಗಾಯಿಸಿದ್ದಾರೆ. ವಾಪಸ್‌ ಕೇಳಿದಾಗ ‘ನೀವು ಇದುವರೆಗೆ ಹೂಡಿಕೆ ಮಾಡಿದ ಹಣಕ್ಕೆ ಶೇ200ರಷ್ಟು ಲಾಭ ಬಂದಿದೆ. ಸದರಿ ಹಣ ಪಡೆಯಲು ₹8.60ಲಕ್ಷ ಸೇವಾ ಶುಲ್ಕ ನೀಡಬೇಕು’ ಎಂದಿದ್ದಾರೆ. ಶರತ್‌ ಅಷ್ಟೂ ಹಣ ವರ್ಗಾವಣೆ ಮಾಡಿದ್ದಾರೆ.

ಮತ್ತೊಮ್ಮೆ ಹೂಡಿಕೆ ಮಾಡಿದ ಹಣ ಕೇಳಿದಾಗ ಇನ್ನೂ ₹3ಲಕ್ಷ ನೀಡಿದರೆ ಪೂರ್ತಿ ಹಣ ನೀಡಲಾಗುವುದು ಎಂದು ಹೇಳಿದ್ದಾರೆ. ಇದರಿಂದ ಅನುಮಾನ ಬಂದು ಸ್ನೇಹಿತರ ಬಳಿ ವಿಚಾರಿಸಿದಾಗ ಮೋಸ ಹೋದ ವಿಷಯ ಗೊತ್ತಾಗಿದೆ. ಲಾಭದ ಹೆಸರಿನಲ್ಲಿ ವಂಚಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *