ಪರಮಿಟ್ ಇಲ್ಲದೇ ಸಾಗಣೆ: ನಕಲಿ ಆದೇಶ ತೋರಿಸಿ ಎಸ್ಕೇಪ್ ಆದ ಚಾಲಕ

ಪಾಟ್ನಾ: ಕಳ್ಳರು ಹೆಚ್ಚು ಬುದ್ಧಿವಂತರಾ, ಪೊಲೀಸರು ಹೆಚ್ಚು ಬುದ್ಧಿವಂತರಾ ಎಂದು ಯಾರಾದರೂ ಕೇಳಿದರೆ ಅದಕ್ಕೆ ನೇರವಾಗಿ ಉತ್ತರಿಸೋದು ಕಷ್ಟ. ಏಕೆಂದರೆ, ಒಂದೊಂದು ಕೇಸ್ ನಲ್ಲಿ ಒಂದೊಂದು ಥರ ಇರುತ್ತೆ. ಕೆಲವು ಕೇಸ್ ಗಳಲ್ಲಿ ಕಳ್ಳರು ಪೊಲೀಸರಿಗಿಂತ ಚಾಣಾಕ್ಷತನ ಉಪಯೋಗಿಸಿರುತ್ತಾರೆ.
ಇನ್ನೂ ಕೆಲವು ಕೇಸ್ ಗಳಲ್ಲಿ ಪೊಲೀಸರು, ಐನಾತಿ ಬುದ್ಧಿವಂತಿಕೆ ತೋರಿ ಅವರನ್ನು ಹಿಡಿದಿರುತ್ತಾರೆ. ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ, ಮಧ್ಯಪ್ರದೇಶದಲ್ಲಿ ಪರ್ಮಿಟ್ ಇಲ್ಲದೇ ಅದಿರನ್ನು ಸಾಗಿಸುತ್ತಿದ್ದ ಲಾರಿ ಚಾಲಕನೊಬ್ಬ ಪೊಲೀಸರು ಸೀಜ್ ಮಾಡಿದ್ದ ತನ್ನ ಲಾರಿಯನ್ನು ಬಿಡಿಸಿಕೊಳ್ಳಲು, ಲಾರಿ ಬಿಡುಗಡೆಯ ಆದೇಶಗಳನ್ನೇ ನಕಲಿಯಾಗಿ ಸೃಷ್ಟಿಸಿ, ಅದಕ್ಕೆ ಅಧಿಕಾರಿಗಳ ನಕಲಿ ಸಹಿಗಳು, ನಕಲಿ ಮೊಹಲು (ಸೀಲ್) ಹಾಕಿದ್ದಾನೆ. ಅವುಗಳನ್ನೇ ಪೊಲೀಸರಿಗೆ ತೋರಿಸಿ ಲಾರಿ ಬಿಡಿಸಿಕೊಂಡು ಎಸ್ಕೇಪ್ ಆಗಿದ್ದಾನೆ.ಈ ಪುಣ್ಯಾತ್ಮನ ಹೆಸರು ಸಿದ್ದಾರ್ಥ್ ಪಾಲ್. ಈತ ಉತ್ತರ ಪ್ರದೇಶದ ಮಿರ್ಜಾಪುರ್ ಜಿಲ್ಲೆಯ ಜರವನ್ ಪಹ್ರಾ ಎಂಬ ಹಳ್ಳಿಯವನು. ಆತ ಇತ್ತೀಚೆಗೆ, ತನ್ನ ಲಾರಿಯಲ್ಲಿ ಸಾಮಗ್ರಿಗಳನ್ನು ತುಂಬಿಕೊಂಡು ಹೋಗುತ್ತಿದ್ದ. ಮಾರ್ಗ ಮಧ್ಯೆ ಮೈನಿಂಗ್ ಇನ್ಸ್ ಪೆಕ್ಟರ್ ಈ ಲಾರಿಯನ್ನು ತಡೆದು ತಪಾಸಣೆ ನಡೆಸಿದ್ದಾರೆ.ಈ ಲಾರಿಯಲ್ಲಿ ಮೈನಿಂಗ್ ಅದಿರು ಇದ್ದು ಅದನ್ನು ಸಾಗಿಸಲು ಈತನಿಗೆ ಯಾವುದೇ ಪರ್ಮಿಟ್ ಇರಲಿಲ್ಲ. ಹಾಗಾಗಿ, ಈತನ ಲಾರಿಯನ್ನು ಸೀಝ್ ಮಾಡಿ, ಅದನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿದ್ದರು ಆತ ಮೈನಿಂಗ್ ಇನ್ಸ್ ಪೆಕ್ಟರ್. ಹಾಗೂ ಸಿದ್ದಾರ್ಥ್ ಪಾಲ್ ಗೆ ಲಾರಿ ಮಾಲೀಕರ ಬಳಿಯಿಂದ ಪರ್ಮಿಟ್ ಪ್ರಮಾಣಪತ್ರವನ್ನು ತೆಗೆದುಕೊಂಡು ಬಂದು ತೋರಿಸಿದರೆ ಲಾರಿಯನ್ನು ಬಿಡುತ್ತೇವೆಂದು ಸೂಚಿಸಿದ್ದರು.”ಆಯ್ತು..” ಅಂತ ಹೇಳಿ ಹೋಗಿದ್ದ ಸಿದ್ದಾರ್ಥ್, ಅದೇ ರಾತ್ರಿ ಹೊತ್ತಿಗೆ ಪೊಲೀಸ್ ಠಾಣೆಗೆ ಹಾಜರಾಗಿ, ಮೈನಿಂಗ್ ಅಧಿಕಾರಿಯರಿಂದ ತನಗೆ ಟ್ರಕ್ ರಿಲೀಸ್ ಅಪ್ಪಣೆ ಸಿಕ್ಕಿದೆ ಎಂದು ಹೇಳಿ ಅದಕ್ಕೆ ಸಂಬಂಧಿಸಿದ ಆದೇಶದ ಪ್ರತಿ ತೋರಿಸಿದ. ಅದರಲ್ಲಿ ಮೈನಿಂಗ್ ಇನ್ಸ್ ಪೆಕ್ಟರ್ ನ ಸಹಿ ಹಾಗೂ ಮೊಹರು ಇದ್ದಿದ್ದರಿಂದ ಸ್ಟೇಷನ್ ನಲ್ಲಿದ್ದ ಪೊಲೀಸ್ ಸಿಬ್ಬಂದಿಯು ಅದನ್ನು ನಂಬಿ, ಠಾಣೆಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಲಾರಿಯನ್ನು ಬಿಟ್ಟುಕಳಿಸಿದ್ದಾರೆ.ಲಾರಿಯನ್ನು ಹಿಡಿದಿದ್ದ ಮೈನಿಂಗ್ ಇನ್ಸ್ ಪೆಕ್ಟರ್ ಗೆ ಮರುದಿನ ಈ ವಿಚಾರ ಗೊತ್ತಾಗಿದೆ. ಕೂಡಲೇ ಆತ ನ್ಯಾಯಾಲಯದ ಮೊರೆ ಹೋಗಿದ್ದಾರೆ. “ಲಾರಿಯ ಮಾಲೀಕರಿಂದ ತಮಗೆ ಲಾರಿಯನ್ನು ಬಿಡುಗಡೆ ಮಾಡಬೇಕೆಂದು ಅರ್ಜಿ ಸಲ್ಲಿಸಿ, ಅದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ನೀಡಿದ ನಂತರವೇ ನಾವು ಅದನ್ನು ಪರಿಶೀಲಿಸಿ ಲಾರಿಯನ್ನು ರಿಲೀಸ್ ಮಾಡಲು ಆದೇಶ ಪತ್ರ ನೀಡಬೇಕು. ಇದು ಪದ್ಧತಿ. ಆದರೆ, ತನ್ನನ್ನು ಲಾರಿ ಮಾಲೀಕ ಅರ್ಜಿಯನ್ನೇ ನೀಡಿಲ್ಲ. ಹಾಗಿರುವಾಗ ಲಾರಿಯನ್ನು ಬಿಡುಗಡೆಗೊಳಿಸಲು ಆರೋಪಿ ಸಿದ್ದಾರ್ಥ್ ಪಾಲ್, ಪೊಲೀಸ್ ಠಾಣೆಗೆ ಸಲ್ಲಿಸಿರುವ ಆದೇಶದ ಪ್ರತಿ ಸಂಪೂರ್ಣವಾಗಿ ನಕಲಿ (ಫೇಕ್)” ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಹಾಗಾಗಿ, ಈಗ ಲಾರಿ ಚಾಲಕ ಸಿದ್ದಾರ್ಥ್ ಮೇಲೆ ಕೇಸ್ ಜಡಿಯಲಾಗಿದೆ.
ಹಿಂದೆಯೂ ಇಂಥ ಘಟನೆಯಾಗಿದ್ದವು!
ಇಂಥ ಘಟನೆಗಳು ಭಾರತದಲ್ಲಿ ಕಾಲಾನುಕ್ರಮದಲ್ಲಿ ಜರುಗಿದೆ. 1990ರಲ್ಲಿ ತಮಿಳುನಾಡಿನ ಖತರ್ನಾಕ್ ಕಳ್ಳರು, ಸುಪ್ರೀಂ ಕೋರ್ಟೇ ತಮಗೆ ಬೇಲ್ ನೀಡಿದೆ ಎಂದು ಸುಪ್ರೀಂ ಕೋರ್ಟ್ ನ ನಕಲಿ ಆದೇಶಗಳನ್ನು ಸೃಷ್ಟಿಸಿ ಜಾಮೀನು ಪಡೆದುಕೊಂಡಿದ್ದರು. ಕಳೆದ ವರ್ಷ ಡಿಸೆಂಬರ್ ನಲ್ಲಿ ಹೈದರಾಬಾದ್ ನ ಚಂಚಲಗೂಡ ಜೈಲಿನಲ್ಲಿದ್ದ ವಿಚಾರಣಾಧೀನ ಖೈದಿಯೊಬ್ಬ, ನಕಲಿ ಜಾಮೀನು ಆದೇಶ ಪ್ರತಿಯನ್ನು ತೋರಿಸಿ ಜೈಲಿನಿಂದ ರಾಜಾರೋಷವಾಗಿ ಹೊರನಡೆದಿದ್ದ.
ನಕಲಿ ದಾಖಲೆಗಳನ್ನು ನೀಡಿ
ಆರೋಪಿಗಳ ಜಾಮೀನಿಗಾಗಿ ನಕಲಿ ದಾಖಲೆಗಳನ್ನು ನೀಡಿ, ಜಾಮೀನು ಪಡೆದಿರುವ ಪ್ರಕರಣಗಳು ನಡೆದಿದ್ದವು. ಅವುಗಳ ರದ್ದು ಕೋರಿ ಸಂಬಂಧಿಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ. ಸೂರಜ್ ಗೋವಿಂದರಾಜು ಅವರುಳ್ಳ ಪೀಠ, ಈ ಮಾರ್ಗಸೂಚಿಗಳನ್ನು ನೀಡಿ ಅರ್ಜಿಗಳನ್ನು ಇತ್ಯರ್ಥಪಡಿಸಿತ್ತು.