ಬಳ್ಳಾರಿಯಲ್ಲಿ ದುರ್ಘಟನೆ: ಕೃಷಿಹೊಂಡದಲ್ಲಿ ಬಿದ್ದು 13 ವರ್ಷದ ಬಾಲಕ ಸಾವು

ಬಳ್ಳಾರಿ: ಕೃಷಿಹೊಂಡದಲ್ಲಿಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಗ್ರಾಮದಲ್ಲಿ ನಡೆದಿದೆ.ವೀರೇಶ್ (13) ಮೃತ ಬಾಲಕ. ಕುರಿ ಮೇಯಿಸಿಲು ಹೋಗಿದ್ದ ವೀರೇಶ್ ನೀರು ಕುಡಿಯಲು ಹೋಗಿ ಆಯತಪ್ಪಿ ಕೃಷಿಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ.
ಸದ್ಯ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಾಲಕ ವೀರೇಶ್ ಮೃತದೇಹವನ್ನು ಕೃಷಿ ಹೊಂಡದಿಂದ ಹೊರತೆಗೆದಿದ್ದಾರೆ. ಘಟನೆ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.