Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೇವಾಸ್ಥಾನ ಕಳಸ ಸ್ಥಾಪನೆ ವೇಳೆ ದುರಂತ! ಕ್ರೇನ್‌ ಮೇಲಿಂದ ಬಿದ್ದು ಒಬ್ಬ ದುರ್ಮರಣ

Spread the love

ಹಾವೇರಿ : ದೇವಾಸ್ಥಾನದ ಕಳಸ ಸ್ಥಾಪನೆ ವೇಳೆ ದುರ್ಘಟನೆಯೊಂದು ನಡೆದಿದ್ದು. ದೇವಾಲಯದ ಗೋಪುರದ ಮೇಲೆ ಕಳಸ ಸ್ಥಾಪನೆ ಮಾಡಲು ಕ್ರೇನ್​ ಮೂಲಕ ಗೋಪುರ ತುತ್ತತುದಿಗೆ ಹೋಗುವ ವೇಳೆ ಕ್ರೇನ್​ನ ಬಕೆಟ್​ ಮುರಿದು ಓರ್ವ ಸಾವನ್ನಪ್ಪಿದ್ದು. ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಹಾವೇರಿಯ ಶೇಷಗಿರಿ ಗ್ರಾಮದಲ್ಲಿರುವ ಗಂಗಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣದ ವೇಳೆ ಅವಘಡ ನಡೆದಿದ್ದು. ಕ್ರೇನ್​ ಮೂಲಕ ಕಳಸ ಸ್ಥಾಪನೆಗೆ ಎಂದು ದೇವಾಲಯದ ಮೇಲೆ ಏರುವಾಗ ಕ್ರೇನ್​ ಬಕೆಟ್​ ಕಟ್​ ಆಗಿ ಅಪಘಡ ಸಂಭವಿಸಿದೆ. ಕ್ರೇನ್​​ ಮೇಲಿಂದ ಬಿದ್ದು ಗ್ರಾಮದ ಮಂಜುನಾಥ ಪಾಟೀಲ (48) ಎಂಬಾತ ಮೃತ ಪಟ್ಟಿದ್ದು. ಮಂಜು ಬಡಿಗೇರ್​ ಎಂಬಾತ ಗಾಯಗೊಂಡಿದ್ದಾನೆ.ಗಾಯಾಳುವನ್ನು ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು. ಆಡೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love
Share:

administrator

Leave a Reply

Your email address will not be published. Required fields are marked *