Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದಲ್ಲಿ ಸಂಚಾರ ನಿಯಮ ಉಲ್ಲಂಘನೆ: ₹12,000 ಕೋಟಿ ದಂಡ, ವಸೂಲಾದದ್ದು ಕೇವಲ ₹3,000 ಕೋಟಿ!”

Spread the love

ಬೆಂಗಳೂರು : ಬೆಂಗಳೂರು ನಗರ ಸೇರಿದಂತೆ ದೇಶದ ನಗರಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇದಕ್ಕೆ ಕಾರಣನೂ ಇದೆ, ಒಂದೆಡೆ ಟ್ರಾಫಿಕ್ ಜಾಮ್, ಇನ್ನೊಂದೆಡೆ ಧಾವಂತ. ಪ್ರತಿಯೊಬ್ಬರೂ ತಮ್ಮ ಒಂದಲ್ಲಾ ಒಂದು ರೀತಿಯಲ್ಲಿ ದೇಶದಲ್ಲಿ ವಾಹನ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಲೇ ಇದ್ದಾರೆ.

ಕಳೆದ ವರ್ಷ(2024)ದಲ್ಲಿ ಭಾರತ ದೇಶದಲ್ಲಿ ಸಂಚಾರಿ ನಿಯಮ ಕಾನೂನು ಉಲ್ಲಂಘನೆ ಮಾಡಿದಂತಹ ವಾಹನಗಳಿಗೆ ₹12,000 ಕೋಟಿ ದಂಡ ವಿಧಿಸಲಾಗಿದೆ. ಆದರೆ ಇದರಲ್ಲಿ ಕೇವಲ ₹3,000 ಕೋಟಿ ಮಾತ್ರ ವಸೂಲಾಯಿತು ಎಂದು ಕಾರ್ಸ್‌ 24 ಬಿಡುಗಡೆ ಮಾಡಿರುವ ವರದಿಯಲ್ಲಿ ಬಹಿರಂಗಪಡಿಸಿದೆ. 2024ರಲ್ಲಿ ಒಟ್ಟು 8 ಕೋಟಿ ಚಲನ್‌ಗಳನ್ನು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ನೀಡಲಾಗಿದೆ. ಅವುಗಳಲ್ಲಿ ಶೇಕಡಾ 55% ರಷ್ಟು ದಂಡಗಳು ನಾಲ್ಕು ಚಕ್ರ ವಾಹನಗಳಿಗೆ ಮತ್ತು ಶೇಕಡಾ 45% ದ್ವಿಚಕ್ರ ವಾಹನಗಳಿಗೆ ವಿಧಿಸಲ್ಪಟ್ಟಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಗುರುಗ್ರಾಮವೊಂದರಲ್ಲಿಯೇ ದಿನಕ್ಕೆ 10ಲಕ್ಷ ದಂಡ ಸಂಗ್ರಹ

ದಿ ಗ್ರೇಟ್ ಇಂಡಿಯನ್ ಚಲನ್ ಕ್ರೈಸಿಸ್ ಎಂಬ ಶೀರ್ಷಿಕೆಯಡಿಯಲ್ಲಿ ಈ ವರದಿಯ ಬಿಡುಗಡೆ ಮಾಡಲಾಗಿದ್ದು, ಗುರುಗ್ರಾಮವೊಂದರಲ್ಲಿಯೇ ದಿನಕ್ಕೆ ₹10 ಲಕ್ಷ ದಂಡ ಸಂಗ್ರಹವಾಗುತ್ತಿದೆ ಎಂದು ತಿಳಿಸಿದೆ. ಇದು ನಮ್ಮ ವ್ಯವಸ್ಥೆಯನ್ನು ಎತ್ತಿತೋರಿಸುತ್ತಿದೆ ಎಂದು ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. ನೋಯ್ಡಾದಲ್ಲಿ ಒಂದು ತಿಂಗಳಲ್ಲಿ 3 ಲಕ್ಷ ರೂಪಾಯಿಗಳಿಗೂ ಹೆಚ್ಚು ಚಲನ್ ಗಳನ್ನು ನೀಡಲಾಗಿದೆ. ಇವುಗಳಲ್ಲಿ ಹೆಚ್ಚು ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿರುವುದಾಗಿದೆ.

ಬೆಂಗಳೂರಿನ ದ್ವಿಚಕ್ರ ವಾಹನದ ಮೇಲೆ ₹2.91 ಲಕ್ಷ ದಂಡ ಬಾಕಿ ಇದೆ. ಪೊಲೀಸರ ಉಪಸ್ಥಿತಿಯನ್ನು ಲೆಕ್ಕಿಸದೇ ಸಂಚಾರ ನಿಯಮಗಳನ್ನು ಪಾಲಿಸುವುದಾಗಿ ಶೇಕಡಾ 43.9 ರಷ್ಟು ಜನರು ಹೇಳಿದರೆ, ಶೇಕಡಾ 31.2 ರಷ್ಟು ಜನರು ತಮ್ಮ ಚಾಲನೆಯನ್ನು ಸರಿಹೊಂದಿಸುವ ಮೊದಲು ಆಗಾಗ್ಗೆ ಪೊಲೀಸರ ಉಪಸ್ಥಿತಿಯನ್ನು ನೋಡಿಕೊಳ್ಳುತ್ತಾರೆ, ಇನ್ನು ಸುಮಾರ್ 17.6 ರಷ್ಟು ಜನರು ದಂಡವನ್ನು ತಪ್ಪಿಸಿಕೊಳ್ಳಲು ಸರಿಯಾಗಿ ವಾಹನ ಚಾಲನೆ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಯಾವ ಪ್ರಕರಣ ಹೆಚ್ಚು ದಾಖಲಾಗುತ್ತಿವೆ?

ಓವರ್ ಲೋಡ್ ಟ್ರಕ್ ಗಳಿಂದ ಹಿಡಿದು ಹೆಲ್ಮೆಟ್ ರಹಿತ ವಾಹನ ಚಾಲನೆ ಮುಂತಾದ ಪ್ರಕರಣಗಳು ಸಾಕಷ್ಟು ಹೆಚ್ಚಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಗುರುಗ್ರಾಮವೊಂದರಲ್ಲಿಯೇ ಸ್ಥಳೀಯ ಆಡಳಿತವು ಸಂಚಾರ ದಂಡದ ಮೂಲಕ ದಿನಕ್ಕೆ 10 ಲಕ್ಷ ರೂಪಾಯಿಗಳನ್ನು ಸಂಗ್ರಹಿಸುತ್ತಿತ್ತು. ಪ್ರತಿದಿನ 4,500 ಕ್ಕೂ ಹೆಚ್ಚು ಚಲನ್ ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ. ಮೂಲಭೂತ ಸುರಕ್ಷತಾ ಮಾನದಂಡಗಳನ್ನು ಸಹ ಸಾಮೂಹಿಕವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂಬ ಅಂಶವನ್ನು ಇದು ಸೂಚಿಸುತ್ತದೆ ಎಂದು ಹೇಳಲಾಗಿದ್ದು, ದಂಡ ಪಾವತಿಸದ ಬಾಕಿಯನ್ನು ಪಡೆಯುವುದೇ ಇದೀಗ ಪೊಲೀಸರಿಗೆ ತಲೆನೋವಿನ ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *