Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹುಲಿ ಓಡಾಟ: ಅರಣ್ಯ ಇಲಾಖೆಯಿಂದ ಹಳ್ಳಿಗಳ ಜನರಿಗೆ ಎಚ್ಚರಿಕೆ.

Spread the love

ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಚಿಕ್ಕಡಿಗನಹಳ್ಳಿ ಗ್ರಾಮದಲ್ಲಿ ಹುಲಿ ಮರಿಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದ್ದು, ಇದೀಗ ತಾಯಿ ಹುಲಿ ಹಾಗೂ ಮತ್ತೆರಡು ಮರಿಗಳಿಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದೆ.

ತಾಯಿ ಹುಲಿ ಮೂರು ಮರಿಗಳೊಂದಿಗೆ ಆಗಾಗ್ಗೆ ಗ್ರಾಮಸ್ಥರ ಕಣ್ಣಿಗೆ ಬೀಳುತ್ತಿತ್ತು. ಇದು ವ್ಯಾಪಕ ಭಯ ಮತ್ತು ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು,

ಬಳಿಕ ಅರಣ್ಯ ಇಲಾಖೆಯು ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಇದರಂತೆ ಒಂದು ಗಂಡು ಮರಿಯನ್ನು ಸೆರೆಹಿಡಿಯಲಾಗಿದ್ದು, ತಾಯಿ ಹುಲಿ ಮತ್ತು ಅದರ ಉಳಿದ ಎರಡು ಮರಿಗಳನ್ನು ಪತ್ತೆಹಚ್ಚಲು ಹುಡುಕಾಟ ಮುಂದುವರೆದಿದೆ.

ತಾಯಿ ಹುಲಿ ಹಾಗೂ ಮರಿ ಹುಲಿಗಳಿಗಾಗಿ ಬಿಲ್ಕೆರೆ, ಚಿಕ್ಕಡಿಗನಹಳ್ಳಿ ಮತ್ತು ಇಲವಾಲ ಹೋಬಳಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ.

ಈ ನಡುವೆ ದೊಡ್ಡಕಾಡನಹಳ್ಳಿ, ರತ್ನಳ್ಳಿ, ಹೊಸಕಮನಕೊಪ್ಪಲು, ಹಳೆಕಮನಕೊಪ್ಪಲು ಮತ್ತು ಎರಪ್ಪನಕೊಪ್ಪಲು ಸೇರಿದಂತೆ ಹತ್ತಿರದ ಹಳ್ಳಿಗಳಲ್ಲಿ ಹುಲಿ ಮತ್ತು ಅದರ ಮರಿಗಳು ಓಡಾಡುತ್ತಿರುವುದಾಗಿ ಹೇಳಲಾಗುತ್ತಿದ್ದು, ಕಾರ್ಯಾಚರಣೆ ಮುಗಿಯುವವರೆಗೆ ಅರಣ್ಯ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಲು ಮತ್ತು ಜಾಗರೂಕರಾಗಿರಲು ಅರಣ್ಯ ಇಲಾಖೆ ಸ್ಥಳೀಯ ನಿವಾಸಿಗಳಿಗೆ ಮನವಿ ಮಾಡಿದೆ


Spread the love
Share:

administrator

Leave a Reply

Your email address will not be published. Required fields are marked *