ಅಡಿಕೆ ಮರಕ್ಕೆ ಕಟ್ಟಿ ಇರುವೆಬಿಟ್ಟು ಚಿತ್ರಹಿಂಸೆ-ಕ್ರೂರ ವಿಡಿಯೋ ವೈರಲ್

ದಾವಣಗೆರೆ : ಅಸಭ್ಯ ವರ್ತನೆ ಮಾಡುತ್ತಿದ್ದ, ಕಳವು ಮಾಡಿದ್ದಾನೆಂಬ ವಿಚಾರಕ್ಕೆ ಅಪ್ರಾಪ್ತ ಬಾಲಕನೊಬ್ಬನಿಗೆ ಕಿಡಿಗೇಡಿ ಯುವಕರು ಅಡಕೆ ಮರಕ್ಕೆ ಕಟ್ಟಿ ಹಾಕಿ, ಚಿತ್ರಹಿಂಸೆ ನೀಡಿದ ಘಟನೆ ಚನ್ನಗಿರಿ ತಾ. ನಲ್ಲೂರು ಗ್ರಾಮದಲ್ಲಿ ವರದಿಯಾಗಿದೆ.
ಚನ್ನಗಿರಿ ತಾ. ನಲ್ಲೂರು ಸಮೀಪದ ಅಸ್ತಾಫನಹಳ್ಳಿಯಲ್ಲಿ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕನು ಕಿಡಿಗೇಡಿಗಳಿಂದ ಇನ್ನಿಲ್ಲದ ಚಿತ್ರಹಿಂಸೆ ಅನುಭವಿಸಿದ ವೀಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಅಪ್ರಾಪ್ತನನ್ನು ಅರೆಬೆತ್ತಲೆ ಮಾಡಿ, ಚಡ್ಡಿಯಲ್ಲಿ ಅಡಿಕೆ ಮರಕ್ಕೆ ಕಟ್ಟಿ ಹಾಕಿದ್ದ ಕಿಡಿಗೇಡಿಗಳು ಗರಿಗಳಲ್ಲಿ ಇದ್ದಂತಹ ಕೆಂಪು ಇರುವೆ, ಗೊದ್ದಗಳನ್ನು ಮರಕ್ಕೆ ಹಿಮ್ಮುಖವಾಗಿ ಕೈಕಟ್ಟಿದ್ದ ಅಪ್ರಾಪ್ತನ ತಲೆ, ಮೈಮೇಲೆ, ಗುಪ್ತಾಂಗಗಳಿಗೆ ಬಿಟ್ಟು, ಆತ ಚೀರುವುದು, ಅಳುವುದನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿಯುತ್ತಾ, ವಿಕೃತವಾಗಿ ನಗುವ ದೃಶ್ಯಗಳು ಎಂತಹವರ ಆಕ್ರೋಶಕ್ಕೆ ಗುರಿಯಾಗುವಂತಿವೆ.