Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಈ ಬಾರಿ ಸ್ನಾನ ಮಾಡಿದ್ರೆ ಪುಣ್ಯ ಬರಲ್ಲ ರೋಗ ಬರುತ್ತೆ

Spread the love

ಮೈಸೂರು : ತ್ರಿವೇಣಿ ಸಂಗಮದಲ್ಲಿ ಈ ಬಾರಿ ಕುಂಭ ಸ್ನಾನ ಮಾಡಿದ್ರೆ ಚರ್ಮ ರೋಗ ಬರುತ್ತದೆ. ಟಿ. ನರಸೀಪುರದಲ್ಲಿ ಇದೇ ತಿಂಗಳ 11, 12,13 ರಂದು ಅದ್ಧೂರಿ ಕುಂಭ ಮೇಳ ನಡೆಯಲಿದೆ. ಕಾವೇರಿ, ಕಪಿಲಾ, ಸ್ಪಟಿಕ ಸರೋವರ ಮೂರು ನದಿ ಸೇರುವ ತ್ರಿವೇಣಿ ಸಂಗಮ.ನದಿ ಜೊತೆಗೆ ಕಲುಷಿತ ನೀರು ಸಂಗಮಗೊಳ್ಳುತ್ತಿದೆ. ಕಲುಷಿತ ನೀರನಲ್ಲೂ ಸ್ನಾನ ಮಾಡಿದ್ರೆ ಪುಣ್ಯನಾ..?, ಕುಂಭಮೇಳದಲ್ಲಿ ಪುಣ್ಯಸ್ನಾನಕ್ಕೆ ಸಹಸ್ರಾರು ಭಕ್ತರು ಬರಲಿದ್ದಾರೆ. ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡಲು ಬರುವ ಭಕ್ತಾದಿಗಳಿಗೂ ಅನಾರೋಗ್ಯದ ಭೀತಿ ಎದುರಾಗಿದೆ.

ತ್ರಿವೇಣಿ ಸಂಗಮದಲ್ಲಿ ಈ ಬಾರಿ ಕುಂಭ ಸ್ನಾನ ಮಾಡಿದ್ರೆ ಚರ್ಮ ರೋಗ ಬರುತ್ತದೆ. ಟಿ. ನರಸೀಪುರದಲ್ಲಿ ಇದೇ ತಿಂಗಳ 11, 12,13 ರಂದು ಅದ್ಧೂರಿ ಕುಂಭ ಮೇಳ ನಡೆಯಲಿದೆ. ಕಾವೇರಿ, ಕಪಿಲಾ, ಸ್ಪಟಿಕ ಸರೋವರ ಮೂರು ನದಿ ಸೇರುವ ತ್ರಿವೇಣಿ ಸಂಗಮ ಕಲುಷಿತಗೊಂಡ ಕಪಿಲೆ ಸೇರುವ ತ್ರಿವೇಣಿ ಸಂಗಮದಲ್ಲಿ ಅದ್ಧೂರಿ ಕುಂಭಮೇಳ ನಡೆಯಲಿದೆ. ನಂಜನಗೂಡಿನಲ್ಲಿ ಕಪಿಲಾ ನದಿ ಕಲುಷಿತಗೊಳ್ಳುತ್ತಿದೆ. ನಂಜನಗೂಡಿನಲ್ಲಿ ಕಲುಷಿತಗೊಂಡು ತ್ರಿವೇಣಿಯಲ್ಲಿ ಕಪಿಲೆ ಸಂಗಮಗೊಳ್ಳುತ್ತಿದೆ. ದಕ್ಷಿಣ ಕಾಶಿ ನಂಜನಗೂಡು ನಂಜುಂಡೇಶ್ವರ ದೇವಾಲಯದ ಬಳಿ ತ್ಯಾಜ್ಯ, ಚರಂಡಿ ನೀರು ನದಿಗೆ ಸೇರುತ್ತಿದೆ.

ಸ್ನಾನಘಟ್ಟದ ಹದಿನಾರು ಕಾಲು ಮಂಟಪದ ಬಳಿ ತ್ಯಾಜ್ಯದೊಂದಿಗೆ ನದಿ ಹರಿಯುತ್ತಿದೆ. ಕೊಳಚೆ ನೀರಿನೊಂದಿಗೆ ಹರಿಯುತ್ತಿರುವ ಕಪಿಲಾ ನದಿಯಿಂದ ಚರ್ಮರೋಗದ ಆತಂಕ ಉಂಟಾಗಿದೆ. ಕೊಳಚೆ ನೀರು ನದಿ ಸೇರದಂತೆ ತಡೆಗಟ್ಟುವಂತೆ ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.ಕೊಳಚೆ ನೀರು ನದಿ ಸೇರುವುದನ್ನ ತಡೆಗಟ್ಟುವ ನಂಜನಗೂಡು ನಗರಸಭೆ ನಿರ್ಲಕ್ಷ್ಯ ವಹಿಸಿದೆ. ನಗರಸಭೆ ಅಧಿಕಾರಿಗಳು, ತಾಲ್ಲೂಕು ಆಡಳಿತ, ಚುನಾಯಿತ ಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *