Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಧ್ಯರಾತ್ರಿ ಶೆಡ್ ಗೆ ನುಗ್ಗಿ ಲಕ್ಷ ಬೆಲೆಬಾಳುವ ಜಾನುವಾರು ಕದಿಯುತ್ತಿದ್ದ ಖದೀಮರು

Spread the love

ಬೆಂಗಳೂರು ಗ್ರಾಮಾಂತರ: ಅದು ಹೇಳಿ ಕೇಳಿ ಕಳೆದ ಯುಗಾದಿ ಹೊಸತೊಡಕಿನ ಸಮಯ ವರ್ಷದಿಂದ ಕಷ್ಟಾಪಟ್ಟು ದುಡಿದಿದ್ದ ಜಾನುವಾರುಗಳನ್ನ ಖದೀಮರು ಒಂದೇ ರಾತ್ರಿಯಲ್ಲಿ ಖದ್ದು ಎಸ್ಕೇಪ್ ಆಗಿದ್ರು. ಇನ್ನೂ ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಗಳ ಎಡೆಮುರಿಕಟ್ಟಿದ್ದು, ಸಿಸಿ ಕ್ಯಾಮರಾ ಮುಂದೆ ಡ್ಯಾನ್ಸ್ ಮಾಡಿ ಪೋಸ್ ಕೊಟ್ಟಿದ್ದವನ ಬ್ಯಾಕ್ ಅನ್ನೆ ಪಂಕ್ಚರ್ ಮಾಡಿದ್ದಾರೆ.
ಮಧ್ಯರಾತ್ರಿ ಸಮಯ ಊರೆಲ್ಲ ಮಲಗಿರುವಾಗಲೆ ರಾಜಾರೋಷವಾಗಿ ಗೂಡ್ಸ್ ವಾಹನದಲ್ಲಿ ಬಂದಿರುವ ಖದೀಮರು ಕ್ಷಣ ಮಾತ್ರದಲ್ಲೆ ಶೆಡ್ ನ ಬೀಗ ಹೊಡೆದು ಲಕ್ಷ ಲಕ್ಷ ಬೆಲೆ ಬಾಳುವ ಹಂದಿ ಮತ್ತು ಕುರಿಗಳನ್ನ ಖದ್ದು ಎಸ್ಕೇಪ್ ಆಗಿದ್ರು. ಅಲ್ಲದೆ ಎಸ್ಕೇಪ್ ಆಗುವ ವೇಳೆ ಗೇಟ್ ನ ಮುಂಬಾದ ಸಿಸಿ ಕ್ಯಾಮರಾ ಮುಂದೆಯೆ ಚಡ್ಡಿ ಅಲ್ಲಾಡಿಸಿ ಚಕಮ್ ನೀಡಿದ್ದು ಇದೀಗ ಈ ರೀತಿ ಕಳ್ಳತನ ಮಾಡಿದ್ದ ಅಂಬರೀಶ್, ಶೇಖಪ್ಪ, ಮತ್ತು ಯಲ್ಲಪ್ಪ ಅನ್ನೂ ಮೂವರು ಆರೋಫಿಗಳ ಹೆಡೆಮುರಿಕಟ್ಟಿದ್ದಾರೆ.

ಹೌದು ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬೈರಸಂದ್ರ ಗ್ರಾಮದ ದಿವಾಕರ್ ಅನ್ನೂ ಈ ರೈತ ಶೆಡ್ಗಳಿಗೆ ಕಳೆದ ಮಾರ್ಚ್ ನಲ್ಲಿ ತಡರಾತ್ರಿ ಎಂಟ್ರಿಕೊಟ್ಟಿದ್ದ ಖದೀಮರು ಕ್ಷಣ ಮಾತ್ರದಲ್ಲೆ ಲಕ್ಷ ಲಕ್ಷ ಬೆಲೆ ಬಾಳುವ ಹಂದಿಗಳನ್ನ ಖದ್ದು ಎಸ್ಕೇಪ್ ಆಗಿದ್ರು. ಜೊತೆಗೆ ಅಂದು ಶೆಡ್ಗೆ ಅಡ್ಡಲಾಗಿಟ್ಟಿದ್ದ ಗೂಡ್ಸ್ ವಾಹನವನ್ನ ಸಹ ಹಳ್ಳಕ್ಕೆ ತಳ್ಳೀದ್ದ ಖದೀಮರು ಆರು ಏಳು ಲಕ್ಷ ಬೆಲೆ ಬಾಳ್ತಿದ್ದ ಜಾನುವಾರುಗಳನ್ನ ಖದ್ದೋಗಿ ರೈತರಿಗೆ ಶಾಕ್ ನೀಡಿದ್ರು,

ಹೀಗಾಗೆ ಅಂದು ರೈತ ನೀಡಿದ್ದ ದುರಿನ ಮೆರೆಗೆ ಪ್ರಕರಣ ದಾಖಲಿಸಿಕೊಂಡು ತನಿಕೆ ನಡೆಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಇದೀಗ ಅಂದು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಅಂಬರೀಶ್, ಶೇಖಪ್ಪ, ಮತ್ತು ಯಲ್ಲಪ್ಪ ಅನ್ನೂ ಮೂವರು ಆರೋಫಿಗಳನ್ನ ಬಂದಿಸಿ ಜೈಲಿಗಟ್ಟಿದ್ದಾರೆ.

ಬಂದಿತ ಮೂವರು ಆರೋಪಿಗಳು ಉತ್ತರ ಕರ್ನಾಟಕ ಮೂಲದವರಾಗಿದ್ದು ಸಂತೆಯ ಸೋಗಿನಲ್ಲಿ ಬೆಂಗಳೂರು ಅಕ್ಕ ಪಕ್ಕದ ಜಿಲ್ಲೆಗಳ ರೈತರ ಶೆಡ್ಗಳಿಗೆ ಬಂದು ರಾತ್ರೋ ರಾತ್ರಿ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಆರೋಪಿಗಳ ವಿರುದ್ದ ಈಗಾಗಲೆ ಹಲವು ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಕಲಾಗಿದ್ದು ಹಲವು ಬಾರಿ ಕಳ್ಳತನ ಕೃತ್ಯಗಳನ್ನ ಎಸಗಿರುವುದು ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.

ಇನ್ನೂ ಬಂಧಿತ ಮೂರು ಜನ ಆರೋಪಿಗಳಲ್ಲಿ ಓರ್ವ ಖದ್ದ ನಂತರ ಸಿಸಿ ಕ್ಯಾಮರಾ ಮುಂದೆ ಡ್ಯಾನ್ಸ್ ಮಾಡುವ ಚಾಳಿಯನ್ನ ಹೊಂದಿದ್ದು ಆರೋಪಿಗಳ ಬಂದನದಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಒಟ್ಟಾರೆ ಮೈ ಕೈ ಎಲ್ಲಾ ಗಟ್ಟಿ ಮುಟ್ಟಾಗಿದ್ರು ದುಡಿದು ತಿನ್ನೋದನ್ನ ಬಿಟ್ಟು ಸುಲಭವಾಗಿ ಹಣ ಮಾಡಿ ಬಿಸಿ ಬಿಸಿ ಬಿರಿಯಾನಿ ತಿಂದವರಿಗೆ ಇದೀಗ ಪೊಲೀಸರು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯಲು ಕಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *