Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಕೇಂದ್ರಕ್ಕೆ ನೀಟ್‌ ನಡೆಸುವ ಸಾಮರ್ಥ್ಯವೇ ಇಲ್ಲ”– ಸಚಿವ ಶರಣಪ್ರಕಾಶ್ ಪಾಟೀಲ್

Spread the love

ಡಾ। ಶರಣಪ್ರಕಾಶ್ ಪಾಟೀಲ್‌ ಎಂದರೆ ಸಾಮಾನ್ಯವಾಗಿ ವಿವಾದಗಳಿಗೆ ಸಿಲುಕದ ಸಂಭಾವಿತ ರಾಜಕಾರಣಿ ಎಂದೇ ಪರಿಚಿತರು. ಈ ಹೆಗ್ಗಳಿಕೆಗೆ ತಕ್ಕಂತೆಯೇ ಇದೆ ಅವರ ಬೆಳವಣಿಗೆ. ಯುವ ಕಾಂಗ್ರೆಸ್‌, ಜಿಲ್ಲಾ ಪಂಚಾಯಿತಿ ಹಂತದಿಂದ ರಾಜಕಾರಣ ಆರಂಭಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೆರಳಲ್ಲೇ ಬೆಳೆದು ನಾಲ್ಕನೇ ಬಾರಿಗೆ ಶಾಸಕರಾದವರು. ವೈದ್ಯಕೀಯ ಪದವೀಧರರೂ ಆದ ಅವರು ಎರಡನೇ ಬಾರಿ ವೈದ್ಯಕೀಯ ಶಿಕ್ಷಣ ಖಾತೆ ಜವಾಬ್ದಾರಿ ಹೊತ್ತಿದ್ದಾರೆ. ಹೀಗೆ ಸಂಭಾವಿತ ಸಚಿವರೆನಿಸಿದ ಶರಣ ಪ್ರಕಾಶ್‌ ಪಾಟೀಲ್ ಅವರೊಂದಿಗೆ ಇತ್ತೀಚೆಗೆ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಮತ್ತೊಬ್ಬ ಸಚಿವರು ಹೊಯ್ ಕೈ ನಡೆಸಿದರೂ ಎಂಬ ವದಂತಿ ಹಬ್ಬಿತ್ತು. ಇದು ನಿಜವಾ?, ಈವರೆಗಿನ ಇಲಾಖಾ ಸಾಧನೆಯೇನು? ಭವಿಷ್ಯದ ಯೋಜನೆ, ಯುವನಿಧಿ ಯಶಸ್ಸು ಹಾಗೂ ರಾಜಕೀಯ ಮಹತ್ವಾಕಾಂಕ್ಷೆಗಳ ಬಗ್ಗೆ ”ಕನ್ನಡಪ್ರಭ” ಜತೆ ಮುಖಾಮುಖಿಯಾಗಿದ್ದಾರೆ .
ಬೋಸುರಾಜು ಅವರು ಹಿರಿಯರು. ಅವರೊಂದಿಗೆ ನನಗೆ ಹೇಗೆ ಭಿನ್ನಾಭಿಪ್ರಾಯ ಇರಲು ಸಾಧ್ಯ? ಶಾಸಕರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬುದಷ್ಟೇ ನನ್ನ ಸಿದ್ಧಾಂತ. -ಅದಕ್ಕಾಗಿಯೇ ರಾಷ್ಟ್ರೀಯ ಉತ್ಸವಗಳ ಸಮಯದಲ್ಲಿ ಮಾತ್ರ ರಾಯಚೂರಿಗೆ ಹೋಗ್ತೀರಾ? ಉಸ್ತುವಾರಿ ಸಚಿವರು ಹೀಗೆ ಮಾಡಿದರೆ ಹೇಗೆ?

ಹಾಗೇನೂ ಇಲ್ಲ. ರಾಯಚೂರು ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ರಾಯಚೂರಿನಲ್ಲಿ ಎರಡು ಜಿಟಿಟಿಸಿ ಕಾಲೇಜು, ಕ್ಯಾನ್ಸರ್‌ ಆಸ್ಪತ್ರೆ, ಕಿದ್ವಾಯಿ ಘಟಕ ಹೀಗೆ ಸಾಕಷ್ಟು ಕೆಲಸ ಮಾಡಿದ್ದೇವೆ.
2013-18ರಲ್ಲಿ ನಾವೇ ಪ್ರತಿ ಜಿಲ್ಲೆಯಲ್ಲೂ ಒಂದು ವೈದ್ಯಕೀಯ ಕಾಲೇಜು ತರಬೇಕು ಎಂಬ ನೀತಿ ಮಾಡಿದ್ದೆವು. ಅದರಂತೆ ಈಗಾಗಲೇ 22 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿದ್ದೇವೆ. ಚಿಕ್ಕಬಳ್ಳಾಪುರ ಹಾಗೂ ಕನಕಪುರದಲ್ಲೂ ಮಾಡುತ್ತಿದ್ದೇವೆ. 2016ರಲ್ಲೇ ಕಲಬುರಗಿ, ಮೈಸೂರು ಹಾಗೂ ಬೆಳಗಾವಿಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿಸಿದ್ದೆ. ಕಳೆದ ಐದು ವರ್ಷ ಯಾವುದೇ ಪ್ರಗತಿ ಆಗಿರಲಿಲ್ಲ. ಇದೀಗ ಎಲ್ಲವನ್ನೂ ಒಂದೊಂದಾಗಿ ಪೂರ್ಣಗೊಳಿಸುತ್ತಿದ್ದೇವೆ. ಹೊಸ ಸೂಪರ್‌ಸ್ಪೆಷಾಲಿಟಿ, ಟ್ರಾಮಾ ಕೇಂದ್ರಗಳ ಮೂಲಕ ರಾಜ್ಯಾದ್ಯಂತ ಜನರಿಗೆ ಸೂಪರ್‌ಸ್ಪೆಷಾಲಿಟಿ ಚಿಕಿತ್ಸೆ ತಲುಪಿಸುವ ಮಹತ್ವದ ಕೆಲಸ ಆಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *