ಉಗ್ರರ ಕರಿನೆರಳು- ಅಮರಾನಾಥ್ ಯಾತ್ರೆಯಲ್ಲಿ ಬಂದೋಬಸ್ತ್

ಶ್ರೀನಗರ:ಜುಲೈ ತಿಂಗಳಲ್ಲಿ ಪ್ರಾರಂಭವಾಗಲಿರುವ ಅಮರನಾಥ ಯಾತ್ರೆಗಾಗಿ 42,000 ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗಳನ್ನೊಳಗೊಂಡ 580 ತುಕಡಿಗಳನ್ನು ನಿಯೋಜಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
48 ಕಿಲೋ ಮೀಟರ್ ದೂರದ ಈ ಯಾತ್ರೆಯಲ್ಲಿ ಯಾತ್ರಾರ್ಥಿಗಳ ಭದ್ರತಾ ದೖಷ್ಠಿಯಿಂದ 580 ತುಕಡಿಗಳನ್ನು ನಿಯೋಜಿಸಲು ಆದೇಶಿಸಿದ್ದು, 424 ತುಕಡಿಗಳನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ.
ಆಪರೇಷನ್ ಸಿಂಧೂರ ಸಮಯದಲ್ಲಿ ಸ್ಥಳಾಂತರಗೊಂಡ ಸುಮಾರು 80 ತುಕಡಿ ಸೇರಿದಂತೆ ಉಳಿದ ತುಕಡಿಗಳನ್ನು ಸೇರಿಸಿ, ಅಮರನಾಥ ಯಾತ್ರಾ ಮಾರ್ಗ, ಮತ್ತು ಶ್ರೀನಗರ ಸೇರಿದಂತೆ ಮತ್ತಿತರ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗುತ್ತದೆ.
ಸೆಂಟ್ರಲ್ ಕಮಾಂಡ್ ಮೂಲಕ ದಿನದ 24 ಗಂಟೆಗಳ ಕಾಲ ಮೇಲ್ವಿಚಾರಣೆ ಮಾಡಲಾಗುತ್ತದೆ. ಪಹಲ್ಗಾಮ್-ಸೋನ್ಮಾರ್ಗ್ನಲ್ಲಿ ಪ್ರವಾಸಿಗರ ಸಂಚಾರದ ಎಲ್ಲಾ ಸಾರಿಗೆ ಶಿಬಿರಗಳಲ್ಲಿ ಬಿಗಿ ಭದ್ರತೆ ಇರುತ್ತದೆ. ಡ್ರೋನ್ಗಳ ಮೂಲಕ ಕಣ್ಗಾವಲನ್ನು ಮತ್ತಷ್ಟು ಹೆಚ್ಚಿಸಲಾಗುವುದು.
ಪಹಲ್ಗಾಂ ದಾಳಿಯಿಂದ ಅಮರನಾಥ ಯಾತ್ರೆಯ ಮೇಲೆ ಪರಿಣಾಮ?
ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಭಕ್ತರು ಅಮರನಾಥ ಯಾತ್ರೆಗೆ ಬರುತ್ತಾರೆ. ಇದು ಅಮರನಾಥ ಯಾತ್ರೆಯ ಮೇಲೆ ಮಾತ್ರವಲ್ಲದೆ ವೈಷ್ಣೋದೇವಿ ಧಾಮ ಯಾತ್ರೆಯ ಮೇಲೂ ಪರಿಣಾಮ ಬೀರಬಹುದು. ಅಮರನಾಥ ಯಾತ್ರೆಯು ಸಮುದ್ರ ಮಟ್ಟದಿಂದ ಸುಮಾರು 13,000 ಅಡಿ ಎತ್ತರದಲ್ಲಿರುವ ಪವಿತ್ರ ಗುಹೆಗೆ ಎರಡು ಮಾರ್ಗಗಳಿವೆ. ಮೊದಲ ಮಾರ್ಗವು ದಕ್ಷಿಣ ಕಾಶ್ಮೀರದ ಗಂದೇರ್ಬಲ್ ಜಿಲ್ಲೆಯ ಬಾಲ್ಟಾಲ್ನಿಂದ ಮತ್ತು ಎರಡನೆಯದು ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ನಿಂದ ಪ್ರಾರಂಭವಾಗುತ್ತದೆ. ಇದೀಗ ಪಹಲ್ಗಾಮ್ ಹೆಸರೇ ಜನರನ್ನು ಭಯಭೀತಗೊಳಿಸಿದೆ.