Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಹಾರಾಷ್ಟ್ರದಲ್ಲಿ ಭಯಾನಕ ಕಾಯಿಲೆ: ಕೂದಲು, ಉಗುರು ಕಳೆದುಕೊಳ್ಳುತ್ತಿರುವ ಗ್ರಾಮಸ್ಥರು

Spread the love

ಮುಂಬೈ: ಮಹಾರಾಷ್ಟ್ರದಲ್ಲಿ ವಿಚಿತ್ರ ಮತ್ತು ಭಯಾನಕ ಕಾಯಿಲೆಯೊಂದು ಹರಡಿದ್ದು ಜನ ಬೆಚ್ಚಿಬಿದ್ದಿದ್ದಾರೆ. ಇಲ್ಲಿನ ಜನರಿಗೆ ಏಕಾಏಕಿ ತಲೆ ಕೂದಲು ಉದುರುತ್ತಿದ್ದು ಬೆರಳಿನ ಉಗುರುಗಳು ಕಿತ್ತಿಕೊಂಡು ಬರುತ್ತಿವೆ. ಜನ ಇದನ್ನು ಸಾಮಾನ್ಯ ಎಂದು ಭಾವಿಸಿದರೂ ಕೆಲ ತಿಂಗಳುಗಳಿಂದ ಈ ಸಮಸ್ಯೆ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಆತಂಕಗೊಂಡಿದ್ದಾರೆ.
ಹೌದು ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಶೇಗಾಂವ್‌ನ ಹಲವಾರು ಹಳ್ಳಿಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ. ಡಿಸೆಂಬರ್ 2024ರ ಆರಂಭದಲ್ಲಿ ಬಾಂಡ್‌ಗಾಂವ್ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುಮಾರು 300 ಜನರಿಗೆ ಏಕಾಏಕಿ ಕೂದಲು ಉದುರಲು ಆರಂಭಿಸಿದೆ. ಮೊದಲಿಗೆ ಜನರು ಇದು ಸಾಮಾನ್ಯ ಕೂದಲು ಉದುರುವಿಕೆ ಸಮಸ್ಯೆ ಎಂದು ಭಾವಿಸಿದ್ದರು.
ಆದರೆ ಈ ಘಟನೆ ನೂರಾರು ಜನರಿಗೆ ಏಕಕಾಲದಲ್ಲಿ ಸಂಭವಿಸಿದಾಗ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಇದಾಗಿ ಕೆಲವು ತಿಂಗಳುಗಳ ನಂತರ ಮತ್ತೊಂದು ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಇಲ್ಲಿನ ಜನರಿಗೆ ಈಗ ತಲೆ ಕೂದಲ ಜೊತೆಗೆ ಉಗುರುಗಳು ಉದುರಲು ಪ್ರಾರಂಭಿಸಿವೆ. ಇದರಿಂದಾಗಿ ಇಡೀ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಉಗುರು ಉದುರುವಿಕೆಯಿಂದ ಹೆಚ್ಚಿದ ಕಳವಳ

ಡಿಸೆಂಬರ್ ಕೊನೆಯ ವಾರದಲ್ಲಿ ಜನರಿಗೆ ಕೂದಲು ಉದುರುವಿಕೆ ಪ್ರಾರಂಭವಾಯಿತು. ಕಳೆದ ಕೆಲವು ದಿನಗಳಿಂದ ಉಗುರುಗಳು ಸಹ ಉದುರಲು ಪ್ರಾರಂಭಿಸಿವೆ ಎಂದು ಬಾಂಡ್‌ಗಾಂವ್‌ನ ಸರಪಂಚ್ ರಾಮೇಶ್ವರ್ ಧಾರ್ಕರ್ ಹೇಳಿದ್ದಾರೆ. ಈ ಸಮಸ್ಯೆ ಕ್ರಮೇಣ ಖಟ್ಖೇರ್, ಭೋಂಗಾವ್ ಮತ್ತು ಇತರ ಗ್ರಾಮಗಳಿಗೂ ಹರಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಜಿಲ್ಲಾ ಆರೋಗ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ವೈದ್ಯರ ತಂಡ ಹಳ್ಳಿಗಳನ್ನು ತಲುಪಿ ತನಿಖೆ ಪ್ರಾರಂಭಿಸಿದೆ. ಪ್ರಾಥಮಿಕ ತನಿಖೆಯಲ್ಲಿ 29 ಜನರಲ್ಲಿ ಉಗುರು ಬಿದ್ದು ವಿರೂಪಗೊಂಡಿರುವುದು ದೃಢಪಟ್ಟಿದೆ. ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಹೆಚ್ಚಿನ ಪರೀಕ್ಷೆಗಾಗಿ ಶೇಗಾಂವ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಹೆಚ್ಚುವರಿ ಸೆಲೆನಿಯಮ್ ಈ ಕಾಯಿಲೆಗೆ ಕಾರಣ

ದೇಹದಲ್ಲಿ ಹೆಚ್ಚುವರಿ ಸೆಲೆನಿಯಂ ಇರುವುದರಿಂದ ಈ ಕಾಯಿಲೆ ಉಂಟಾಗಬಹುದು ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ. ಸೆಲೆನಿಯಮ್ ಒಂದು ಸೂಕ್ಷ್ಮ ಪೋಷಕಾಂಶವಾಗಿದ್ದು, ಇದು ದೇಹದಲ್ಲಿ ಸಣ್ಣ ಪ್ರಮಾಣದಲ್ಲಿದ್ದರೆ ಪ್ರಯೋಜನಕಾರಿಯಾಗಿದೆ. ಆದರೆ ಅದು ಅಧಿಕವಾದರೆ ಹಾನಿಕಾರಕವಾಗಿದೆ.

ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಅಮೋಲ್ ಗೀತೆ ಮಾತನಾಡಿ, ಸೆಲೆನಿಯಂ ಮಟ್ಟ ಹೆಚ್ಚಾಗುವುದು ಕೂದಲು ಮತ್ತು ಉಗುರು ಉದುರುವಿಕೆಗೆ ಕಾರಣವಾಗಿರಬಹುದು. ಇದಿನ್ನು ದೃಢವಾಗಬೇಕಿದೆ. ಹೀಗಾಗಿ ಬಾಧಿತ ಜನರನ್ನು ವಿಶೇಷ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ ಎಂದಿದ್ದಾರೆ.

ಪಡಿತರ ಗೋಧಿಯಿಂದ ಕಾಯಿಲೆ

ಆಘಾತಕಾರಿ ವಿಷಯವೆಂದರೆ ಈ ರೋಗ ಸರ್ಕಾರದ ಪಡಿತರ ಮೂಲಕ ಒದಗಿಸುವ ಗೋಧಿಯಿಂದ ಬಂದರಬಹುದು ಎಂದು ಹೇಳಲಾಗುತ್ತಿದೆ. ಪಂಜಾಬ್ ಮತ್ತು ಹರಿಯಾಣದಿಂದ ಈ ಗ್ರಾಮಗಳಿಗೆ ಕಳುಹಿಸಲಾದ ಗೋಧಿಯಲ್ಲಿ ಸ್ಥಳೀಯ ಗೋಧಿಗಿಂತ 600 ಪಟ್ಟು ಹೆಚ್ಚಿನ ಸೆಲೆನಿಯಮ್ ಮಟ್ಟವಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ಕಾರಣಕ್ಕಾಗಿ ಈ ಗೋಧಿ ಈ ರೋಗದ ಮೂಲ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಇಲ್ಲಿಯವರೆಗೆ ಲಭ್ಯವಿರುವ ಮಾಹಿತಿಯಿಂದ ಇದು ವೈರಸ್ ಅಲ್ಲದಿರಬಹುದು ಆದರೆ ಹೆಚ್ಚಿನ ಸಂಖ್ಯೆಯ ಜನರ ಮೇಲೆ ಪರಿಣಾಮ ಬೀರುತ್ತಿರುವ ಸೆಲೆನಿಯಮ್ ವಿಷತ್ವದ ಪ್ರಕರಣವಾಗಿರಬಹುದು ಎಂದು ಹೇಳಲಾಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *