ಕರ್ನಾಟಕ ಕರಾವಳಿಯಲ್ಲಿ ತಪಮಾನ ಏರಿಕೆ-ಮೀನುಗಾರರಿಗೆ ಬರೆ; ಮೀನುಗಳ ಬೆಲೆ ಹೆಚ್ಚಳ

ಕುಂದಾಪುರ: ಮತ್ಸತ್ರ್ಯಕ್ಷಾಮ, ಅವೈಜ್ಞಾನಿಕ ಮೀನುಗಾರಿಕೆಯಿಂದ ಈಗಾಗಲೇ ನಲುಗಿರುವ ಮೀನುಗಾರರಿಗೆ ತಾಪಮಾನ ಏರಿಕೆ ಗಾಯದ ಮೇಲೆ ಬರೆ ಏಳೆದಂತಾಗಿದೆ. ತಾಪಮಾನ 40 ಡಿಗ್ರಿ ಮೀರಿರುವ ಹಿನ್ನೆಲೆಯಲ್ಲಿ ಕಡಲಿಗಿಳಿಯದ ಸ್ಥಿತಿ ನಿರ್ಮಾಣಗೊಂಡಿದೆ. ಮಂಗಳೂರು, ಮಲ್ಪೆ, ಗಂಗೊಳ್ಳಿ, ಭಟ್ಕಳ ಸಹಿತ ಪ್ರಮುಖ ಬಂದರುಗಳಲ್ಲಿಅರ್ಧಕ್ಕರ್ಧ ಬೋಟ್ಗಳು ದಡದಲ್ಲಿ ಲಂಗರು ಹೂಡಿವೆ. ಆಗಸ್ಟ್ ಬಳಿಕ ಆರಂಭವಾಗುವ ಮೀನುಗಾರಿಕೆ ಡಿಸೆಂಬರ್ ಜನವರಿಯಲ್ಲಿ ಸ್ವಲ್ಪ ಕಡಿಮೆ ಆಗುತ್ತವೆ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿಎರಡನೇ ಹಂತದಲ್ಲಿ ಮೀನುಗಾರಿಕೆಗೆ ಸುಗ್ಗಿ ಕಾಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ ನಾಡದೋಣಿಗಳಿಗೆ ಮೀನೇ ಇಲ್ಲದ ಸ್ಥಿತಿ ಉದ್ಭವಿಸಿದ್ದರೆ ಆಳಸಮುದ್ರದ ಬೋಟ್ಗಳಿಗೆ ತಾಪಮಾನ ಹೊಡೆತ ನೀಡಿದೆ. ಸುಮಾರು 27 ಡಿಗ್ರಿ ಸೆಲ್ಸಿಯಸ್ನಿಂದ 32 ಡಿಗ್ರಿ ಸೆಲ್ಸಿಯಸ್ ವಾತಾವರಣದ ಉಷ್ಣತೆ ಮೀನುಗಳಿಗೆ ಅನುಕೂಲಕರ. ಪ್ರಸಕ್ತ ತಾಪಮಾನ 40 ಡಿಗ್ರಿ ಮೀರಿರುವುದರಿಂದ ಮೀನುಗಳ ಲಭ್ಯತೆ ಕುಂಠಿತವಾಗಿದೆ. ತಾಪಮಾನದಿಂದ ರಕ್ಷಿಸಿಕೊಳ್ಳಲು ಮೀನುಗಳು ಸಮುದ್ರದ ಆಳಕ್ಕೆ ತೆರಳುವುದರಿಂದ ಮೀನು ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ. ಮತ್ಸೊತ್ರ್ಯೕದ್ಯಮಕ್ಕೆ ಹೊಡೆತ
ಕರ್ನಾಟಕದ ಕರಾವಳಿಯಲ್ಲಿ ಹೆಚ್ಚುತ್ತಿರುವ ತಾಪಮಾನವು ಮೀನುಗಾರಿಕೆ ಉದ್ಯಮದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಮೀನುಗಾರಿಕೆಯ ಈ ಅವಧಿಯಲ್ಲಿ ಶೇಕಡಾ 80ರಷ್ಟು ಮೀನುಗಾರಿಕಾ ದೋಣಿಗಳು ತೀರದಲ್ಲಿ ಲಂಗರು ಹೂಡಿವೆ. ಇತರ ರಾಜ್ಯಗಳಿಂದ ಮೀನು ಆಮದನ್ನು ಅವಲಂಬಿಸಬೇಕಾಗಿ ಬಂದಿದೆ. ಆಳ ಸಮುದ್ರದ ಟ್ರಾಲರ್ಗಳಲ್ಲಿ ಹಿಂದೆ 12 ದಿನಗಳ ಕಾಲ ಉಳಿಯುತ್ತಿದ್ದ ಐಸ್ ಬ್ಲಾಕ್ಗಳು ಈಗ 7-8 ದಿನಗಳಲ್ಲೇ ಕರಗುತ್ತಿವೆ. ಇದರಿಂದಾಗಿ ಬೋಟ್ಗಳು ಬೇಗನೆ ದಡಕ್ಕೆ ಮರಳಬೇಕಾಗುತ್ತದೆ. ದರ ಏರಿಕೆ
ಮಂಗಳೂರು ಬಂದರಿನಲ್ಲಿಮೀನಿನ ಕೊರತೆ ಎದುರಾಗಿದ್ದು ವ್ಯಾಪಾರಿಗಳು ಗಂಗೊಳ್ಳಿ, ಕಾರವಾರ ಮತ್ತು ಅಂಕೋಲಾದಿಂದ ಹಾಗೂ ಒಡಿಶಾ, ಮುಂಬಯಿ, ಗೋವಾ, ರತ್ನಗಿರಿ, ವಿಶಾಖಪಟ್ಟಣ ಮತ್ತು ಕೇರಳದಿಂದ ಮೀನುಗಳನ್ನು ಆಮದು ಮಾಡಿಕೊಳ್ಳಲು ಮುಂದಾಗಿದ್ದಾರೆ. ವಿಶ್ವ ಮೀನುಗಾರಿಕೆ ಮೇಲೆ ಪರಿಣಾಮ
ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ಹವಾಮಾನ ಬದಲಾವಣೆಯಿಂದ ಉಂಟಾಗುವ ಶಾಖದ ಅಲೆಗಳು ಜಾಗತಿಕವಾಗಿ ಮೀನುಗಳ ಸಂಗ್ರಹ ಇಳಿಮುಖಗೊಳಿಸಿದೆ ಎಂಬುವುದನ್ನು ದೃಢಪಡಿಸಿದೆ.