Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಡ್ರಗ್ ಪ್ರಕರಣದ ನೀರಿಕ್ಷೆಗೆ ತಮಿಳು ನಟ ಕೃಷ್ಣ ಬಲಿಯಾಗಿದ್ರು – ಸೆಲೆಬ್ರಿಟಿಗಳ ಜಾಲದ ಕಣಿ ಬಯಲು

Spread the love

ಚೆನೈ: ಡ್ರಗ್ ಕೇಸ್​ನಲ್ಲಿ ಸೆಲೆಬ್ರಿಟಿಗಳ ಹೆಸರು ಕೇಳಿ ಬರುತ್ತಿರುವುದು ಇದೇ ಮೊದಲೇನು ಅಲ್ಲ.ಈಗ ತಮಿಳು ನಟ ಕೃಷ್ಣ ಅವರನ್ನು ಬಂಧಿಸಲಾಗಿದೆ. ಈ ಮೊದಲು ನಟ ಶ್ರೀಕಾಂತ್ ಹಾಗೂ ನಿರ್ಮಾಪಕ ಪ್ರಸಾದ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೃಷ್ಣ ಅವರು ತಲೆಮರಿಸಿಕೊಂಡಿದ್ದರು. ಈಗ ಕೃಷ್ಣ ಅವರ ಬಂಧನ ಆಗಿದೆ.

ಕೃಷ್ಣ ಅವರು ಸಿನಿಮಾ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಅವರು ಕೂಡ ಹೀರೋ. ನುಂಗಂಬಾಕಂ ಪೊಲೀಸ್ ಠಾಣೆಯಲ್ಲಿ ಅವರನ್ನು ಇರಿಸಿ ವಿಚಾರಣೆ ಮಾಡಲಾಗುತ್ತಿದೆ. ಪ್ರಸಾದ್ ಅವರು ಫಿಲ್ಮ್ ಇಂಡಸ್ಟ್ರಿಗೆ ಡ್ರಗ್ ಹಂಚಿಕೆ ಮಾಡುತ್ತಿದ್ದರು. ಇವರು ಡ್ರಗ್ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದರು ಎನ್ನಲಾಗಿದೆ. ಇದರಲ್ಲಿ ಕೃಷ್ಣ ಭಾಗಿ ಆಗಿದ್ದರು ಎನ್ನಲಾಗಿದೆ. ಕೃಷ್ಣ ಅವರ ಭಾಗಿತ್ವ ಎಷ್ಟಿದೆ ಎಂಬುದರ ತನಿಖೆ ನಡೆಯುತ್ತಿದೆ.

ಕೃಷ್ಣ ಅವರು ಬಾಲ ಕಲಾವಿದರಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಪೋಷಕ ಪಾತ್ರ ಮಾಡಿದರು. 2010ರ ಸುಮಾರಿಗೆ ಹೀರೋ ಆಗಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. 2012ರಲ್ಲಿ ರಿಲೀಸ್ ಆದ ‘ಕಳುಗು’ ಚಿತ್ರದ ಮೂಲಕ ಕೃಷ್ಣ ಜನಪ್ರಿಯತೆ ಪಡೆದರು. ಅವರು ಕೆಲವು ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *