Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿವಾಹವಿಲ್ಲವೆಂಬ ಕಾರಣಕ್ಕೆ ವಿಷ ಸೇವನೆ: ಗದಗದಲ್ಲಿ ಇಬ್ಬರು ಸಹೋದರರ ಆತ್ಮಹತ್ಯೆ

Spread the love

ಗದಗ : ಮದುವೆ ವಯಸ್ಸಿಗೆ ಬಂದು ಇನ್ನೂ ಕಂಕಣ ಭಾಗ್ಯ ಕೂಡಿ ಬಂದಿಲ್ಲ ಅಂದ್ರೆ ಕಷ್ಟ ಕಷ್ಟ. ಹಿದಲ್ಲಿ ಬಂದಲ್ಲಿ ಸಂಬಂಧಿಕರು..ಸ್ನೇಹಿತರು ಕೇಳುವ ಮೊದಲ ಪ್ರಶ್ನೆ ಮದುವೆ ಯಾವಾಗ ಅಂತ. ಹೀಗಾಗಿ ಕೆಲವರು ಈ ವಿಚಾರಕ್ಕೆ ಬೇಸರ ಮಾಡಿಕೊಳ್ಳುವುದೂ ಉಂಟು. ಹೀಗೆ ಮದುವೆ ಆಗಿಲ್ಲ ಎಂಬ ಕಾರಣಕ್ಕೆ ಇಬ್ಬರೂ ಸಹೋದರರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗದಗದ ಹುಕ್ಕೇರಿಯ ಕೊಣಕೇರಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಮಗೆ ಇನ್ನೂ ವಿವಾಹವಾಗಲಿಲ್ಲ ಎಂಬ ಕಾರಣಕ್ಕೆ ದುಃಖಿತರಾಗಿದ್ದ ಸಹೋದರರು ಮದ್ಯದ ದಾಸರಾಗಿದ್ದರು ಎನ್ನಲಾಗಿದೆ. ಈ ವೇಳೆ ಎಣ್ಣೆ ನಶೆಯಲ್ಲೇ ವಿಷ ಸೇವಿಸಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.ಈ ಕುರಿತು ಸಂಕೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಮೃತ ದುರ್ದೈವಿಗಳನ್ನು ಸಂತೋಷ ರವೀಂದ್ರ ಗುಂಡೆ(55)ಮತ್ತು ಅಣ್ಣಾ ಸಾಹೇಬ ರವೀಂದ್ರ ಗುಂಡೆ(55)ಎಂದು ಗುರುತಿಸಲಾಗಿದೆ. ಕುಡಿದ ಅಮಲಿನಲ್ಲಿ ವಿಷ ಸೇವಿಸಿ ಒದ್ದಾಡುತ್ತಿದ್ದ ಈ
ಇಬ್ಬರನ್ನೂ ಕೂಡಲೇ ಮಹಾರಾಷ್ಟ್ರದ ಗಡಹಿಂಗ್ಲಜ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಆಸ್ಪತ್ರೆಯಲ್ಲಿಯೇ ಸಾವಿಗೀಡಾಗಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *