Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸುಹಾಸ್ ಶೆಟ್ಟಿ ಹತ್ಯೆ:ರಾಜಕೀಯ ಕೈಚಳಕವೋ? ಜಿಲ್ಲಾಡಳಿತದ ನಿಷ್ಕ್ರಿಯತೆಯೋ?- ರಾಜೇಶ್ ಪವಿತ್ರನ್ ಆಕ್ರೋಶ

Spread the love

ಮಂಗಳೂರು :ಹಿಂದೂ ಮಹಾಸಭಾ – ಕರ್ನಾಟಕವು ದ. ಕ ಜಿಲ್ಲೆಯಲ್ಲಿ ಪ್ರಸ್ತುತ ವಿದ್ಯಾಮಾನದ ವಿಷಯದಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಕೇಸ್ ಹಾಗೂ ಹಿಂದೂ ಮುಖಂಡರ ಮೇಲೆ ಕೊಲೆ ಬೆದರಿಕೆ ವಿಚಾರದಲ್ಲಿ ಈ ಪತ್ರಿಕಾಗೋಷ್ಠಿ ಆಯೋಜಿಸಿಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬಗ್ಗೆ ಹಿಂದೂ ಮಹಾಸಭಾ ದುರೀಣರಾದ ರಾಜೇಶ್ ಪವಿತ್ರನ್ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಹತ್ಯೆ ಪ್ರಕರಣದಲ್ಲಿ ಪೊಲೀಸರು ಸಾಕಷ್ಟು ಸಾಕ್ಷ್ಯಗಳಿದ್ದರೂ ಕೇವಲ ಎಂಟು ಮಂದಿಯನ್ನು ಮಾತ್ರ ಬಂಧಿಸಿರುವುದನ್ನು ಅವರು ಪ್ರಶ್ನಿಸಿದ್ದಾರೆ.

ಹತ್ಯೆಯ ಸ್ಥಳದಲ್ಲಿ ಜನಸಾಮಾನ್ಯರಾಗಿ ಇದ್ದು ಸಹಕರಿಸಿದವರು, ಬುರ್ಖಾ ಧರಿಸಿದ್ದ ಮಹಿಳೆಯರು ಸೇರಿದಂತೆ ಹಲವರನ್ನು ಇನ್ನೂ ಬಂಧಿಸಿಲ್ಲ. ಇತ್ತೀಚೆಗಿನ ಕುಡುಪು ಬಳಿ ಕ್ರಿಕೆಟ್ ನ ಸಮಯದಲ್ಲಿ ನಡೆದ ಹತ್ಯೆಗೆ 22 ಜನರನ್ನು ಸಾಕ್ಷ್ಯವಿಲ್ಲದೇ ಬಂಧಿಸಿದ ಪೊಲೀಸರ ತೀವ್ರತೆ ಇಲ್ಲೀಗ ಕಾಣಿಸುತ್ತಿಲ್ಲ ಎಂದು ಹೇಳುತ್ತಾ, “ಹಿಂದೂ ಕಾರ್ಯಕರ್ತರ ಹತ್ಯೆ ಬಿಜೆಪಿಯ ಕಾಲದಲ್ಲೂ ನಡೆದಿವೆ, ಈಗ ಕಾಂಗ್ರೆಸ್ ಸರ್ಕಾರದಲ್ಲೂ ಆಗುತ್ತಿವೆ. ನಿಜವಾದ ಆರೋಪಿಗಳನ್ನು ಬಂಧಿಸದೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಇಂತಹ ನಿಲುವು ಜನರಲ್ಲಿ ಶಂಕೆ ಮೂಡಿಸುತ್ತದೆ” ಎಂದರು.

ಈ ಕುರಿತಾಗಿ ಶಾಸಕ ಭರತ್ ಶೆಟ್ಟಿ ಅವರು ನೀಡಿರುವ ಹೇಳಿಕೆಗೆ ರಾಜೇಶ್ ಪವಿತ್ರನ್ ಶ್ಲಾಘನೆ ವ್ಯಕ್ತಪಡಿಸಿದರು. ಪೊಲೀಸ್ ಇಲಾಖೆ ತಪ್ಪುಮಾಡಿದರೆ ತರಾಟೆಗೆ ತೆಗೆದುಕೊಳ್ಳಬೇಕು,ಜನರು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಾರೆ ಎಂದರು.

ಅಲ್ಲದೆ, ಅನ್ಯ ಸಮುದಾಯ ಸಾಮಾಜಿಕ ಜಾಲತಾಣಗಳಲ್ಲಿ ಹತ್ಯೆ ಸಂಬಂಧಿ ಪೋಸ್ಟ್‌ಗಳನ್ನು ಪೋಲೀಸರು ಗಮನಿಸದೇ ಇದ್ದರು, ಆದರೆ ಹಿಂದೂ ಧರ್ಮ ಸಂಬಂಧಿ ಪೋಸ್ಟ್‌ಗಳಿಗೆ ಮಾತ್ರ ಕಾನೂನು ಕ್ರಮ ಜರುಗಿಸುತ್ತಿರುವುದು ದ್ವಂದ್ವ ನೀತಿಯಂತೆ ಕಂಡುಬರುತ್ತದೆ ಎಂದು ಆರೋಪಿಸಿದರು.

ರಾಜೇಶ್ ಪವಿತ್ರನ್ ಅವರು, ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಆಳವಾಗಿ ತನಿಖೆ ಮಾಡಬೇಕೆಂದು ಆಗ್ರಹಿಸಿದರು. “ರಾಜಕೀಯ ಪಕ್ಷಗಳು — ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ — ತಪ್ಪಿತಸ್ಥರ ಮೇಲ್ವಿಚಾರಣೆ ಇದ್ದರೆ ಅದನ್ನೂ ಬಹಿರಂಗಪಡಿಸಬೇಕು” ಎಂದು ಒತ್ತಾಯಿಸಿದರು

ಅಲ್ಲದೆ, “ಫಾಜಿಲ್ ಪ್ರಕರಣದ ಪರಿಹಾರ ಮೊತ್ತವನ್ನು ದುರ್ಬಳಕೆ ಮಾಡಲಾಗಿದೆ ಎಂಬ ಆರೋಪವನ್ನು ಸರಿಯಾದ ರೀತಿಯಲ್ಲಿ ತನಿಖೆ ಮಾಡಬೇಕು. ನ್ಯಾಯ ತಾರತಮ್ಯ ಇಲ್ಲದ ರೀತಿಯಲ್ಲಿ ಪರಿಹಾರ ಕೊಡುವ ವ್ಯವಸ್ಥೆ ಇರಬೇಕು,” ಎಂದು ಹೇಳಿದರು.

ಅಂತಿಮವಾಗಿ, “ಇದರಿಂದ ಜನರು ಎಚ್ಚೆತ್ತುಕೊಳ್ಳಬೇಕು. ಮತದಾನದ ವೇಳೆ ಯಾರು ಹಿಂದು ಸಮುದಾಯದ ಪರ ನಿಂತಿದ್ದಾರೆ ಎಂಬುದನ್ನು ಗಮನಿಸಬೇಕು” ಎಂದು ಹೇಳುತ್ತಾ ಹಿಂದೂ ಮಹಾಸಭೆಯು ಭವಿಷ್ಯದಲ್ಲಿ ರಾಜಕೀಯ ಪಕ್ಷ ಸ್ಥಾಪನೆಯ ಸಾಧ್ಯತೆಯನ್ನೂ ಪ್ರಕಟಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಮಹಾಸಭಾ ದ.ಕ ಕರ್ನಾಟಕ ಸಂಸ್ಥಾಪಕರಾದ ರಾಜೇಶ್ ಪವಿತ್ರನ್, ರಾಜ್ಯಾಧ್ಯಕ್ಷರಾದ ಡಾ ಎಲ್ ಕೆ ಸುವರ್ಣ, ಖಜಾಜೆ ಲೋಕೇಶ್ ಉಳ್ಳಾಲ, ಕಾರ್ಯದರ್ಶಿಯಾದ ಗುರುರಾಜ್ ಮಂಗಳೂರು ಗ್ರಾಮಾಂತರ ಪ್ರಮುಖರಾದ ಕಿರಣ್ ,ದಕ್ಷಿಣ ಕನ್ನಡ ಸಾಮಾಜಿಕ ಜಾಲತಾಣ ಮುಖ್ಯಸ್ಥರಾದ ಸಂದೀಪ್ ಶೆಟ್ಟಿ ಅಡ್ಕ ಉಪಸ್ಥಿತರಿದ್ದರು.


Spread the love
Share:

administrator

Leave a Reply

Your email address will not be published. Required fields are marked *