ಸುಹಾಸ್ ಶೆಟ್ಟಿ ಹತ್ಯೆ: 3 ತಿಂಗಳ ಹಿಂದೆ ನಡೆದಿತ್ತೇ ಈ ಸಂಚು?

ಸುಹಾಸ್ ಶೆಟ್ಟಿ ಹತ್ಯೆಯ ಮುಖ್ಯ ಆರೋಪಿ ಅಬ್ದುಲ್ ಸಫ್ವಾನ್ ಮೂರು ತಿಂಗಳ ಹಿಂದೆಯೇ ಸಂಚು ರೂಪಿಸಿರುವ ಸಂಗತಿ ಬೆಳಕಿಗೆ ಬಂದಿದೆ.
ಆತನ ಚಲನವಲನಗಳ ಬಗ್ಗೆ ಮಾಹಿತಿ ನೀಡಲು ಸಹಚರರನ್ನು ಬಿಟ್ಟಿದ್ದ. ಹತ್ಯೆಯಾದ ದಿನ ಸುಹಾಸ್ ಶೆಟ್ಟಿ ಬಜಪೆಗೆ ಬರುವ ಬಗ್ಗೆ ಮಾಹಿತಿ ನೀಡಿದ್ದು ಅಜರುದ್ದೀನ್ ಎನ್ನುವ ವ್ಯಕ್ತಿ ಎನ್ನಲಾಗಿದೆ.
ಸುಹಾಸ್ ಎಷ್ಟು ಗಂಟೆಗೆ ಹೊರಡುತ್ತಾನೆ, ಯಾರೆಲ್ಲ ಇರುತ್ತಾಎ ಎಲ್ಲ ಮಾಹಿತಿಯನ್ನು ಸಫ್ವಾನ್ಗೆ ಆತ ನೀಡಿದ್ದ. ಹತ್ಯೆಯಾಗುತ್ತಿದ್ದಂತೆ ಆತ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.
ಸುಹಾಸ್ ಶೆಟ್ಟಿ ಹತ್ಯೆಯ ಸಂಚಿನ ಹಿಂದೆ ಕಾಣದ ಕೈಗಳ ಇರುವಿಕೆ ಬಗ್ಗೆಯೂ ಶಂಕೆ ವ್ಯಕ್ತವಾ ಗಿದ್ದು, 50 ಲಕ್ಷ ರೂ. ಗೂ ಅಧಿಕ ಹಣ ಸಹಾಯ ಮಾಡಿರುವ ಬಗ್ಗೆ ಹಿಂದೂ ಸಂಘಟನೆಗಳು ಆರೋಪಿಸಿವೆ. ಆರೋಪಿ ಸಫ್ವಾನ್ ಹಲವರಿಂದ ಹಣ ಪಡೆದಿರವ ಬಗ್ಗೆ ಶಂಕೆಯಿದ್ದು, ಪರಿಶೀಲನೆಗೆ ಮುಂದಾಗಿದ್ದಾರೆ. ಆದಿಲ್ ನೀಡಿರುವ 3 ಲಕ್ಷ ರೂ. ಸುಪಾರಿ ಮೊತ್ತ ಹೊರತುಪಡಿಸಿ ಬೇರೆ ಮೂಲ ಗಳಿಂದ ಹಣ ಬಂದಿದೆಯೇ ಎನ್ನುವ ಬಗ್ಗೆ ಪೊಲೀಸರು ಆರೋಪಿಗಳ ಬ್ಯಾಂಕ್ ಖಾತೆಗಳನ್ನೂ ಪರಿಶೀಲಿಸಲಾಗುತ್ತಿದೆ.
ಆರೋಪಿಗಳ ಸ್ಥಳ ಮಹಜರು ಪ್ರಕ್ರಿಯೆಯನ್ನು ಪೊಲೀಸರು ಪೂರೈಸಿದ್ದು, ಪೊಲೀಸ್ ಕಸ್ಟಡಿ ಕೊನೆಯಾಗಲು ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಇದ್ದು ವಿಚಾರಣೆ ತೀವ್ರಗೊಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಪಾರ್ಟಿ?
ಸುಹಾಸ್ ಹತ್ಯೆಗೂ ಮುನ್ನ ಎ. 2ರಂದು ಚಿಕ್ಕಮಗಳೂರಿನ ರೆಸಾರ್ಟ್ ಒಂದರಲ್ಲಿ ಹಂತಕರು ಪಾರ್ಟಿ ಮಾಡಿದ್ದರು.ಇದರಲ್ಲಿ ಕಳಸ ಮೂಲದ ರಂಜಿತ್ ಮತ್ತು ನಾಗರಾಜ್ ಕೂಡಾ ಪಾಲ್ಗೊಂಡಿದ್ದು, ಹತ್ಯೆಯ ಕುರಿತಂತೆ ಚರ್ಚಿಸಲಾಗಿತ್ತು. ಇದರ ಫೋಟೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆದಿಲ್ ಕೊಟ್ಟಿದ್ದ ಹಣದಲ್ಲೇ ಈ ಪಾರ್ಟಿ ಮಾಡಿದ್ದರೇ ಎನ್ನುವ ಅನುಮಾನವೂ ವ್ಯಕ್ತವಾಗಿದೆ.