ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನೂಕುನುಗ್ಗಲು ದುರಂತ – 11 ಸಾವು

ಬೆಂಗಳೂರು :ಚಿನ್ನಸ್ವಾಮಿ ಕ್ರೀಡಾಂಗಣ ಒಳಗೆ ಪ್ರವೇಶಿಸಲು ಉಂಟಾದ ನೂಕುನುಗ್ಗಲಿನಲ್ಲಿ 11 ಮಂದಿ ಮೃತ ಪಟ್ಟಿದ್ದಾರೆ. ದುರಂತದಲ್ಲಿ ಒಬ್ಬ ಮಹಿಳೆ ಹಾಗೂ ಐವರು ಪುರುಷರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವೈದೇಹಿ ಆಸ್ಪತ್ರೆ ಹಾಗೂ ಬೋರಿಂಗ್ ಆಸ್ಪತ್ರೆಯಲ್ಲಿ ಮೃತ ದೇಹವಿದ್ದು ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮಟ್ಟಿದೆ. ಏಕಾಏಕಿ ಗೇಟ್ ತೆಗೆದಾಗ ಪ್ರಯತ್ನಿಸಿದಾಗ 30ಕ್ಕೆ ಹೆಚ್ಚು ಮಂದಿ ಕಾಲ್ತುಳಿತಕ್ಕೆ ಒಳಗಾಗಿದ್ದಾರೆ ಇದರಲ್ಲಿ 30 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು ಅವರನ್ನು ಹತ್ತಿರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಶ್ವತ್ ತಗೊಂಡಿದ್ದ ವ್ಯಕ್ತಿ ಒಬ್ಬನನ್ನು ಸ್ಥಳೀಯರು ಆಸ್ಪತ್ರೆಗೆ ಕೊಂಡಯುವಾಗ ಮಾರ್ಗ ಮಧ್ಯೆ ಆತ ಮೃತಪಟ್ಟಿದ್ದಾನೆ. ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧ ಮುಂಭಾಗ ಜನಸಾಗರವೇ ತುಂಬಿ ಬಂದಿದ್ದು ಮಕ್ಕಳು ಮಹಿಳೆಯರು ಯುವಕರು ಯುವತಿಯರು ಕೊಹ್ಲಿ ಹಾಗೂ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಕಾತರದಿಂದ ಕಾದಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧ ಮುಂಭಾಗ ಜನಸಾಗರವೇ ತುಂಬಿ ಬಂದಿದ್ದು ಮಕ್ಕಳು ಮಹಿಳೆಯರು ಯುವಕರು ಯುವತಿಯರು ಕೊಹ್ಲಿ ಹಾಗೂ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಕಾತರದಿಂದ ಕಾದಿದ್ದರು. ನಿರೀಕ್ಷೆಗೂ ಮೀರಿದ ಜನ ಸಮೂಹ ಬಂದಿದ್ದರಿಂದ ಈ ಎಡವಟ್ಟು ಸಂಭವಿಸಿದೆ.