Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಗನ ಸಾವಿಗೆ ಕಾರಣವಾದ ಹಾವು – ಕೊಲ್ಲದೆ ಕಾಡಿಗೆ ಬಿಟ್ಟ ತಾಯಿ-ತಂದೆ!

Spread the love

ತೆಲಸಂಗ(ಬೆಳಗಾವಿ): ಸಮೀಪದ ಕಕಮರಿ ಗ್ರಾಮದಲ್ಲಿ ಹಾವು ಕಚ್ಚಿ ಮಗನನ್ನು ಕಳೆದುಕೊಂಡ ಕುಟುಂಬವೊಂದು ಆ ಮಗನ ಸಾವಿಗೆ ಕಾರಣವಾದ ಹಾವನ್ನು3 ದಿನಗಳ ನಂತರ ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡುವ ಮೂಲಕ ಮಾನವೀಯತೆ ಮೆರೆದಿದೆ.

ಈ ವೇಳೆ ಮನೆಯೊಳಗೆ ನುಸುಳಿದ್ದ ಹಾವು ಬಾಲಕನ ಕೈಗೆ ಕಚ್ಚಿತ್ತು. ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದ. 3 ದಿನಗಳ ಕಾಲ ಹಾವು ಅದೇ ಸ್ಥಳದಲ್ಲಿ ಉಳಿದುಕೊಂಡಿತ್ತು.

ಬಾಲಕನ ಅಂತ್ಯಕ್ರಿಯೆಯ ವಿಧಿ ವಿಧಾನ ಮುಗಿಸಿದ ನಂತರ ಕುಟುಂಬಸ್ಥರು ಸೇರಿ ಆ ಹಾವನ್ನು ಕೊಲ್ಲುವ ಬದಲು ಉರಗ ರಕ್ಷಕರಿಗೆ ಮಾಹಿತಿ ನೀಡಿ ಹಾವನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಯಿತು. ಕುಟುಂಬದ ಈ ಕಾರ್ಯವು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *