ಭಾರತ-ಪಾಕಿಸ್ಥಾನ ಉದ್ವಿಗ್ನತೆ ಬೆನ್ನಲ್ಲೇ ಸಿಮ್ ಡೆಲಿವರಿ ಯೋಜನೆಗೆ ಬ್ರೇಕ್

ನವದೆಹಲಿ: ಭಾರತ-ಪಾಕಿಸ್ಥಾನ ನಡುವೆ ಉದ್ವಿಗ್ನ ವಾತಾವರಣ ಉಂಟಾದ ಬೆನ್ನಲ್ಲೇ “ಸಿಮ್ ಕಾರ್ಡ್’ಗಳನ್ನು ಮನೆಗೆ ತಲುಪಿ ಸುವ ಏರ್ಟೆಲ್ ಮತ್ತು ಜಿಯೋ ಯೋಜನೆಗೆ ದೂರ ಸಂಪರ್ಕ (ಡಿಒಟಿ) ಇಲಾಖೆ ತಡೆಯೊಡ್ಡಿದೆ ಎಂದು ಮೂಲಗಳು ಹೇಳಿವೆ.
ರಾಷ್ಟ್ರೀಯ ಭದ್ರತಾ ಕಾರಣಗಳಿಗಾಗಿ ಕೇಂದ್ರ ಸರ್ಕಾರ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳ ಲಾಗಿದೆ.
ಅಲ್ಲದೆ, ಗ್ರಾಹಕರೇ ಸ್ವಯಂ ಕೆವೈಸಿ ಮಾಡುವುದನ್ನೂ ದೂರಸಂಪರ್ಕ ಇಲಾಖೆ ವಿರೋ ಧಿಸಿತ್ತು. ಏರ್ಟೆಲ್ ಸಂಸ್ಥೆಯು ಬ್ಲಿಂಕಿಟ್ನೊಂದಿಗೆ ಕೈಜೋಡಿಸಿ ಕೇವಲ 10 ನಿಮಿಷಗಳಲ್ಲಿ ಸಿಮ್ ಕಾರ್ಡ್ ತಲುಪಿಸುವ ಸೇವೆಯನ್ನು 16 ನಗರಗಳಲ್ಲಿ ಆರಂಭಿಸಿತ್ತು. ಅದೇ ರೀತಿ, ರಿಲಯನ್ಸ್ ಜಿಯೋ ಸಹ ಈ ಏಪ್ರಿಲ್ 25ರಿಂದ ಇದೇ ರೀತಿಯ ಸೇವೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿತ್ತು. ಈಗ ಡಿಒಟಿ ಸೂಚನೆಯನ್ವಯ ಕೈಬಿಟ್ಟಿದೆ. ಅಲ್ಲದೆ, ಸಿಮ್ ತಲುಪಿಸುವ ಮುನ್ನ ಆಧಾರ್ಆಧಾರಿತ ಕೆವೈಸಿ ಕಡ್ಡಾಯ. ಎಲ್ಲಾ ಟೆಲಿಕಾಂ ಆಪರೇಟರ್ಗಳಿಗೆ ಈ ಸೂಚನೆ ಅನ್ವಯಿ ಸುತ್ತದೆ ಎಂದು ಡಿಒಟಿ ಹೇಳಿದೆ.