Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಮಕ್ಕಳೇ ಮಾಡಿಕೊಳ್ಳಬೇಡಿ” ಎಂದು ಎಚ್ಚರಿಸಿದ ಶಾರ್ಕ್ ಟ್ಯಾಂಕ್ ಜಡ್ಜ್ ನಮಿತಾ

Spread the love

ನವದೆಹಲಿ : ಭಾರತದಲ್ಲಿ ಕೆಲಸದ ಸಮಯದ ಕುರಿತು ಭಾರಿ ಚರ್ಚೆ ನಡೆದಿದೆ. ಪರ ವಿರೋಧಗಳು ವ್ಯಕ್ತವಾಗಿದೆ. ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿದ ವಾರದಲ್ಲಿ 70 ಗಂಟೆ ಕೆಲಸ, ಎಲ್ ಆ್ಯಂಡ್ ಟಿ ಮುಖ್ಯಸ್ಥ ಸೂಚಿಸಿದ ವಾರದಲ್ಲಿ 90 ಗಂಟೆ ಕೆಲಸದ ಮಾತುಗಳಿಗೆ ಭಾರಿ ವಿರೋಧಗಳು ವ್ಯಕ್ತವಾಗಿದೆ. ಹಲವು ಉದ್ಯಮಿಗಳು ಈ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಉದ್ಯಮಿ, ಶಾರ್ಕ್ ಟ್ಯಾಂಕ್ ಜಡ್ಜ್ ನಮಿತಾ ಥಾಪರ್ ಈ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ನಾರಾಯಣ ಮೂರ್ತಿ ಹಾಗೂ ಎಸ್ಎನ್ ಸುಬ್ರಹ್ಮಣ್ಯನ್‌ಗೆ ಟಾಂಗ್ ಕೊಟ್ಟಿದ್ದಾರೆ. ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಅಂದರೆ ನೀವು ಮಕ್ಕಳು ಮಾಡಿಕೊಳ್ಳಲು ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಬ್ರಿಟಿಷ್ ಮಿನಿಸೀರಿಸ್‌ ಎಂಡೋಲ್‌ಸೀನ್‌ನಲ್ಲಿ ಮಾತನಾಡಿರುವ ನಮಿತಾ ಥಾಪರ್ ವರ್ಕ್ ಲೈಫ್ ಬ್ಯಾಲೆನ್ಸ್ ಕುರಿತು ಮಾತನಾಡಿದ್ದಾರೆ. ನಿಮ್ಮ ಮಕ್ಕಳನ್ನು ಈ ಜಗತ್ತಿಗೆ ತಂದಾಗ ಅವರೊಂದಿಗೆ ಸಮಯ ಕಳೆಯಿರಿ. ಅವರಿಗೆ ಸಮಯ ಕೊಡಿ. ಗುಣಮಟ್ಟದ ಸಮಯದ ಅವಶ್ಯಕತೆ ಇದೆ. ನೀವು 70 ಗಂಟೆ, 90 ಗಂಟೆ ಕೆಲಸ ಮಾಡಿದರೆ ಮಕ್ಕಳನ್ನು ಸರಿಯಾಗಿ ಬೆಳೆಸಲು ಸಾಧ್ಯವಾಗುವುದಿಲ್ಲ. ನಿಮ್ಮ ಪ್ರಾಮುಖ್ಯತೆ ಅಥವಾ ಆದ್ಯತೆ 70 ಅಥವಾ 90 ಗಂಟೆ ಕೆಲಸವಾಗಿದ್ದರೆ, ಪೋಷಕರಾಗಬೇಡಿ. ಕಾರಣ ವಾರದಲ್ಲಿ 70 ಅಥವಾ 90 ಗಂಟೆ ಕೆಲಸ ಮಾಡಿದರೆ ಮಕ್ಕಳಿಗೆ, ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಿಲ್ಲ ಎಂದು ನಮಿತಾ ಥಾಪರ್ ಹೇಳಿದ್ದಾರೆ.

ನಮತಿ ಥಾಪರ್ ಮಾತುಗಳಿಂದ ಮತ್ತೆ ಭಾರತದಲ್ಲಿ ಕೆಲಸದ ಸಮಯದ ಕುರಿತು ಚರ್ಚೆ ಆರಂಭಗೊಂಡಿದೆ. ಹಲವರು ಸದ್ಯ ಇರುವ ಕೆಲಸದ ಸಮಯ ಸಾಲುತ್ತಿಲ್ಲ. ಭಾರತ ಮತ್ತಷ್ಟು ಅಭಿವೃದ್ಧಿಯಾಗಲು ಕೆಲಸದ ಸಮಯ ಹೆಚ್ಚಿಸುವ ಅಗತ್ಯವಿದೆ ಅನ್ನೋ ವಾದವೂ ಇದೆ. ಆದರೆ ವರ್ಕ್ ಲೈಫ್ ಬ್ಯಾಲೆನ್ಸ್ ವಿಚಾರವೂ ಚರ್ಚೆಯಾಗುತ್ತಿದೆ. ಇದರ ನಡುವೆ ನಮಿತಾ ಥಾಪರ್ ಮಾತುಗಳು ಭಾರಿ ಸಂಚಲನ ಸೃಷ್ಟಿಸಿದೆ.

ನಮಿತಾ ಥಾಪರ್ ಈ ಮಾತುಕತೆಯಲ್ಲಿ ತಮ್ಮ ಇಬ್ಬರು ಮಕ್ಕಳ ಕುರಿತು ಹೇಳಿಕೊಂಡಿದ್ದಾರೆ. ಮಕ್ಕಳು ಪೋಷಕರನ್ನು ಮಾದರಿಯಾಗಿಟ್ಟುಕೊಳ್ಳುತ್ತಾರೆ. ಮಕ್ಕಳಿಗೆ ಪೋಷಕರೇ ಎಲ್ಲವೂ ಆಗಿರುತ್ತಾರೆ. ಪೋಷಕರು ಗುಣಮಟ್ಟದ ಸಮಯ ನೀಡಲು ವಿಫಲರಾದರೆ, ಅವರ ಮಾತುಗಳನ್ನು ಕೇಳಲು ಸಮಯ ನೀಡದಿದ್ದರೆ ಅದು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಕ್ಕಳ ಮೇಲೆ ಬೇಗ ನೆಗೆಟಿವಿಟಿ ಶುರುವಾಗುತ್ತದೆ. ಇದು ಒಂದು ದಿನ ಸ್ಫೋಟಗೊಳ್ಳುವ ಸಾಧ್ಯತೆಯೂ ಇದೆ ಎಂದಿದ್ದಾರೆ.

ಮಕ್ಕಳಿಗೆ ನೀವು ಸಮಯ ನೀಡಿದರೆ ಮಾತ್ರ ಅವರ ಆಸಕ್ತಿಯನ್ನು ಪತ್ತೆ ಹಚ್ಚಲು ಸಾಧ್ಯ. ಮಕ್ಕಳ ಆಸಕ್ತಿಯನ್ನು ಗಮನಿಸಿ ಅವರನ್ನು ಸರಿಯಾದ ದಿಕ್ಕಿನಲ್ಲಿ ತರಬೇತಿಗೊಳಿಸುವುದು ಅಗತ್ಯ. ಇದರಿಂದ ಮಕ್ಕಳು ತಮ್ಮ ತಮ್ಮ ಆಸಕ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಅಥವಾ ಪ್ರೀತಿಯಿಂದ ತಮ್ಮ ಕ್ಷೇತ್ರವನ್ನು ಆರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *