Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸ್ಕೂಟರ್, ಚಪ್ಪಲಿ, ಡೆತ್ ನೋಟ್ ಪತ್ತೆ … ಆದರೆ ಹೀನಾ ಎಲ್ಲಿ? ಕುಂದಾಪುರ ನಾಪತ್ತೆ ಪ್ರಕರಣದಲ್ಲಿ ಹೊಸ ತಿರುವು

Spread the love

ಕುಂದಾಪುರ: ಕುಂದಾಪುರದ ವಡೇರಹೋಬಳಿ ಗ್ರಾಮದ ವಿಠಲವಾಡಿ, ಜೆಎಲ್‌ಬಿ ರಸ್ತೆಯ ನಿವಾಸಿ ಹೀನಾ ಕೌಸರ್(32) ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಇದುವರೆಗೂ ಅವರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.

ಪೊಲೀಸರು ಹೀನಾ ಕೌಸರ್ ಪತ್ತೆಗಾಗಿ ಎಲ್ಲ ಆಯಾಮಗಳಿಂದಲೂ ಹುಡುಕಾಟ ನಡೆಸುತ್ತಿದ್ದು, ಆದರೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆಕೆಯ ಮೊಬೈಲ್ ಸಹ ಸ್ವಿಚ್‌ಆಫ್ ಆಗಿದೆ. ಪತ್ನಿ ನಾಪತ್ತೆ ವಿಚಾರ ತಿಳಿಯುತ್ತಿದ್ದಂತೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಪತಿ ಮಹಮ್ಮದ್ ಇಕ್ಬಾಲ್ ಊರಿಗೆ ಮರಳಿದ್ದಾರೆ.ಜೆಎಲ್‌ಬಿ ರಸ್ತೆಯ ಮನೆಯಲ್ಲಿ ತಾಯಿ ಹಾಗೂ ತನ್ನಿಬ್ಬರು ಮಕ್ಕಳೊಂದಿಗೆ ವಾಸವಿದ್ದ ಹೀನಾ ಕೌಸರ್ ಜೂ. 9ರ ಬೆಳಗ್ಗೆ 5 ಗಂಟೆಗೆ ಮನೆಯಿಂದ ಹೊರಟಿದ್ದಾರೆ. ಸ್ಕೂಟಿಯನ್ನು ಕೋಡಿಯ ಸೇತುವೆ ಬಳಿ ಇಟ್ಟು, ಅದರಲ್ಲಿ ಡೆತ್ ನೋಟ್ ಕೂಡ ಬರೆದು ಚಪ್ಪಲಿ ಸಹ ಅಲ್ಲಿಯೇ ಬಿಟ್ಟು, ಪಂಚಗಂಗಾವಳಿ ನದಿಗೆ ಹಾರಿರಬಹುದು ಎಂದು ಬಿಂಬಿಸುವಂತೆ ಕಥೆ ಹೆಣೆದಿರುವುದಾಗಿ ಎನ್ನಲಾಗಿದೆ.ಆಕೆಯ ಪತ್ತೆಗಾಗಿ ಪೊಲೀಸರು ಹಾಗೂ ಅಗ್ನಿ ಶಾಮಕ ದಳದವರು ದಿನವಿಡೀ ನದಿಯಲ್ಲಿ ಹುಡುಕಾಟ ನಡೆಸಿದ್ದರು. ಆದರೆ ನಿಜಕ್ಕೂ ಆಕೆ ನದಿಗೆ ಹಾರಿಲ್ಲ, ಅದು ಸುಳ್ಳು ಕಥೆ ಹೆಣೆದಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಕಾಕತಾಳಿಯವೆಂಬಂತೆ ಜೂ. 9ರಂದೇ ಹೆಮ್ಮಾಡಿಯ ಸಂತೋಷ್ ನಗರ ನಿವಾಸಿ ಸಾಹಿಲ್ (27) ಎಂಬಾತ ಕೂಡ ನಾಪತ್ತೆಯಾಗಿದ್ದಾನೆ. ಆತನಿಗಾಗಿಯೂ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಆದರೆ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ.


Spread the love
Share:

administrator

Leave a Reply

Your email address will not be published. Required fields are marked *