ಐಸ್ಕ್ರೀಮ್ ಬಿಳಿಸಿದ ಕಾರಣ ಗದರಿಕೆ – ಮನನೊಂದು ಯುವತಿ ಆತ್ಮಹತ್ಯೆ

ತಮಿಳುನಾಡು : ಫ್ರಿಡ್ಜ್ನಲ್ಲಿದ್ದ ಐಸ್ಕ್ರೀಮ್ ಬಿಳಿಸಿದ ಕಾರಣ ಚಿಕ್ಕಮ್ಮ ಗದರಿದ್ದಾಳೆ. ಇಷ್ಟಕ್ಕೆ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ತಿರುವಲ್ಲರೂ ಜಿಲ್ಲೆಯಲ್ಲಿ ನಡೆದಿದೆ.
ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ಸೆಂಗುದ್ರಂ ಬಳಿಯ ಮೆಂಡಿಯಮ್ಮನ್ ನಗರ ಪ್ರದೇಶದ ನಿವಾಸಿ ಅನುಪ್ರಿಯಾ ಮೃತೆ ಎಂದು ಗುರುತಿಸಲಾಗಿದೆ. ಚಿಕ್ಕಮ್ಮ ಗದರಿದ ಕಾರಣ ಮನನೊಂದ ಆಕೆ ಮನೆಯಲ್ಲಿ ಫ್ಯಾನ್ಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಏನು..?
ತಿರುವಲ್ಲೂರು ಜಿಲ್ಲೆಯ ಸೆಂಗುದ್ರಂ ಬಳಿಯ ಮೆಂಡಿಯಮ್ಮನ್ ನಗರ ಪ್ರದೇಶದ ನಿವಾಸಿ ಅಶ್ವಿನ್ರಾಜ್ ಎಂಬುವರು ಅದೇ ಪ್ರದೇಶದ ನಿವಾಸಿ ಅನುಪ್ರಿಯಾಳನ್ನು ಪ್ರೀತಿಸಿ ಮದುವೆಯಾದರು. ಇಬ್ಬರೂ ವರ್ಷಗಳ ಹಿಂದೆ ವಿವಾಹವಾದರು. ಅವರಿಗೆ ಒಂದು ವರ್ಷದ ಮಗನಿದ್ದಾನೆ. ಮೇ.26ರ ಸೋಮವಾರ ಅನುಪ್ರಿಯಾ ಮನೆಯಲ್ಲಿ ಫ್ರಿಡ್ಜ್ ತೆರೆದಾಗ, ಅದು ಐಸ್ ಬಿದ್ದಿತು. ಅದಕ್ಕಾಗಿ ಅನುಪ್ರಿಯಾಳ ಚಿಕ್ಕಮ್ಮ ಗದರಿಸಿದ್ದಾಳೆ. ಇದರಿಂದ ಮನನೊಂದು ಅನುಪ್ರಿಯಾ ಸೂಸೈಡ್ ಮಾಡಿಕೊಂಡಿದ್ದಾಳೆ