Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಸಾವರ್ಕರ್ ಹಕ್ಕಿಯಂತೆ ಜೈಲಿನಿಂದ ಹೊರಬಂದರು”-ಕನ್ನಿಮೋಳಿ

Spread the love

ತಮಿಳುನಾಡು: ಸಾವರ್ಕರ್ ಕುರಿತಂತೆ ರಾಜಕೀಯ ನಾಯಕರು ಆಗಾಗ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಇದೀಗ ತಮಿಳುನಾಡು ಡಿಎಂಕೆ ಸಂಸದೆ , ಮಾಜಿ ಕೇಂದ್ರ ಸಚಿವೆ ಕನ್ನಿಮೋಳಿ ಸಾವರ್ಕರ್ ಕುರಿತಂತೆ ವ್ಯಂಗ್ಯವಾಡಿದ್ದಾರೆ. ಸಾವರ್ಕರ್ ಜೈಲಿನಿಂದ ಹೊರಬಂದರು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಅವರು ಅಂದರೆ ಆರ್‌ಎಸ್‌ಎಸ್ ನಾಯಕರು ಸಾರ್ವರ್ಕರ್ ಜೈಲಿನಿಂದ ಹಕ್ಕಿಯಂತೆ ಹೊರಬಂದರು ಎಂದು ಹೇಳುತ್ತಾರೆ. ಇದು ಪುರಾಣದ ದೊಡ್ಡ ಉದಾಹರಣೆ ಅಂತ ಕನ್ನಿಮೋಳಿ ಹೇಳಿದ್ದಾರೆ. ಇನ್ನು ಮುಸ್ಲಿಮರುಈ ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಅಂತ ಡಿಎಂಕೆ ಸಂಸದೆ ಹೇಳಿದ್ದಾರೆ.
ಆರ್‌ಎಸ್‌ಎಸ್ ನಾಯಕರ ಕಥೆ ಇಷ್ಟವಾಯಿತು

ಸಾವರ್ಕರ್ ಬಗ್ಗೆ ಮಾತನಾಡಿದ ಕನ್ನಿಮೋಳಿ, ಅವರು ಜೈಲಿನಿಂದ ಹೊರಬಂದು ಕ್ಷಮೆಯಾಚಿಸುವ ಪತ್ರವನ್ನು ನೀಡುತ್ತಾರೆ. ಆದರೆ ಆರ್‌ಎಸ್‌ಎಸ್‌ ನಾಯಕರು ಅದಕ್ಕಾಗಿ ಒಂದು ಕಥೆಯನ್ನು ಹೇಳುತ್ತಾರೆ; ನನಗೆ ಆ ಕಥೆ ತುಂಬಾ ಇಷ್ಟವಾಯಿತು ಅಂತ ವ್ಯಂಗ್ಯವಾಡಿದ್ದಾರೆ. ಕ್ಷಮಾಪಣಾ ಪತ್ರ ನೀಡಿದ ನಂತರ ಸಾವರ್ಕರ್ ಜೈಲಿನಿಂದ ಹೊರಬಂದರು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಅವರು ಅಂದರೆ ಆರ್‌ಎಸ್‌ಎಸ್ ನಾಯಕರು ಜೈಲಿನಿಂದ ಹಕ್ಕಿಯಂತೆ ಹೊರಬಂದರು ಎಂದು ಹೇಳುತ್ತಾರೆ. ಇದು ಪುರಾಣದ ದೊಡ್ಡ ಉದಾಹರಣೆ. ಇದನ್ನೇ ಅವರು ದೇಶಕ್ಕಾಗಿ ಮಾಡಿದ್ದಾರೆ ಅಂತ ಕನ್ನಿಮೋಳಿ ವ್ಯಂಗ್ಯವಾಡಿದ್ದಾರೆ.

https://youtu.be/ZFzXxt9udAo


Spread the love
Share:

administrator

Leave a Reply

Your email address will not be published. Required fields are marked *