ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಟ್ರೋಲ್ ಮಾಡಲು ಮುಂದಾದ ತೆಲುಗು ಅಭಿಮಾನಿಗಳು!

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಎ೨ ಆರೋಪಿ ಆಗಿದ್ದು, ಇದೀಗ ಜಾಮೀನಿನ ಮೇಲೆ ಹೊರಗಿದ್ದಾರೆ. ಜೊತೆಗೆ ತಮ್ಮ ಫ್ಯಾಮಿಲಿ ಜೊತೆಗೆ ಸಮಯ ಕಳೆಯುತ್ತಿದ್ದು, ಈ ನಡುವೆ ತೆಲುಗು ಸಿನಿಮಾ ಆಭಿಮಾನಿಗಳು ದರ್ಶನ್ ಅವರನ್ನು ದೊಡ್ಡ ಮಟ್ಟದಲ್ಲಿ ಟ್ರೋಲ್ ಮಾಡಲು ಮುಂದಾಗಿದ್ದಾರೆ.

ಹೌದು, ಸಾಮಾನ್ಯವಾಗಿ ಫ್ಯಾನ್ಸ್ ವಾರ್ ಇತ್ತೀಚಿನ ದಿನಗಳಲ್ಲಿ ಕಡಿಮೆ ಆಗಿತ್ತು. ಇದಕ್ಕೆ ನಟರೇ ಫುಲ್ ಸ್ಟಾಪ್ ಇಡಿಸುತ್ತಿದ್ದರು. ಆದರೆ ಈಗ ದರ್ಶನ್ ವಿಚಾರ ರಾಜ್ಯದ ಹೊರಗೆ ಹೋಗಿ ಟ್ರೋಲ್ ಆಗುತ್ತಿದೆ. ಫ್ಯಾನ್ಸ್ಗಳು ಮಾಡಿದ ಕಿಡಿಗೇಡಿತನಕ್ಕೆ ನಟರು ಈಗ ಬಲಿಯಾಗುವಂತೆ ಆಗಿದೆ.
ಆಗಿದ್ದೇನು?
ದರ್ಶನ್ಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಅದರಲ್ಲೂ ದರ್ಶನ್ ಜೈಲಿನಲ್ಲಿ ಇದ್ದಾಗ, ಹೊರ ಬಂದಾಗ, ಅಥವಾ ಅವರ ಸಿನಿಮಾ ರಿಲೀಸ್ ಆದಾಗ ದರ್ಶನ್ ತಾಕತ್ತು ಏನು ಎಂದು ತಿಳಿಯುತ್ತದೆ. ಇದು ಅವರ ಸಿನಿ ಜರ್ನಿಯ ವಿಚಾರ. ಆದರೆ ವೈಯುಕ್ತಿಕ ವಿಚಾರಕ್ಕೆ ಬಂದರೆ ದರ್ಶನ್ ಕೊಲೆ ಆರೋಪಿ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ತೆಲುಗು ನೆಟ್ಟಿಗರು ಹ್ಯಾಶ್ ಟ್ಯಾಗ್ ಬಳಕೆ ಮಾಡಿಕೊಂಡು ದರ್ಶನ್ ಹಾಗೂ ದರ್ಶನ್ ಅಭಿಮಾನಗಳನ್ನು ಕೆಣಕಿದ್ದಾರೆ.
ಪವನ್ ಕಲ್ಯಾಣ್ (Pawan Kalyan) ಅಭಿಮಾನಿಯೋರ್ವ ದರ್ಶನ್ರನ್ನು ಆರೋಪಿಯಂತೆ ಹಾಗೂ ಪವನ್ ಕಲ್ಯಾಣ್ರನ್ನು ಪೊಲೀಸರಂತೆ ಚಿತ್ರಿಸಿ ಫೋಟೊ ವೈರಲ್ ಮಾಡಿದ್ದ. ಇದಕ್ಕೆ ಸಿಟಿಗೆದ್ದ ದರ್ಶನ್ ಅಭಿಮಾನಿಗಳು ಪವನ್ ಕಲ್ಯಾಣ್ ಅವರನ್ನು ಟ್ರೋಲ್ ಮಾಡಿದ್ದರು. ಆದರೆ ಈಗ ತೆಲುಗು ಪವನ್ ಕಲ್ಯಾಣ್ ಅಭಿಮಾನಿಗಳು #KFIcriminalDarshan ಎಂಬ ಹ್ಯಾಶ್ಟ್ಯಾಗ್ನಲ್ಲಿ ಲಕ್ಷಕ್ಕೂ ಅಧಿಕ ಪೋಸ್ಟ್ ಮಾಡಿದ್ದಾರೆ.’

ಇಷ್ಟೇ ಅಲ್ಲದೆ ತೆಲುಗು ಹಾಗೂ ತಮಿಳು ಸಿನಿಮಾ ನಟರ ಸಾಕಷ್ಟು ಕ್ಲಿಪ್ಗಳನ್ನು ಬಳಕೆ ಮಾಡಿಕೊಂಡು ದರ್ಶನ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಟ್ರೋಲ್ ಯಾವ ಮಟ್ಟಕ್ಕೆ ಇದೆ ಎಂದರೆ ಕೆಲವೇ ಕ್ಷಣದಲ್ಲಿ ಟ್ರೆಂಡ್ ಆಗಿದೆ. ಇಷ್ಟೇ ಅಲ್ಲದೆ ಅವರ ಹೇರ್ಸ್ಟೈಲ್ ಹಾಗೂ ಇನ್ನಿತರೆ ವೈಯುಕ್ತಿಕ ಜೀವನದ ಬಗ್ಗೆಯೂ ಟ್ರೋಲ್ ಮಾಡುತ್ತಿದ್ದಾರೆ
ಉದ್ದೇಶಪೂರ್ವಕವಾಗಿ ಟ್ರೆಂಡ್ ಮಾಡಲು ಮುಂದಾದ ನೆಟ್ಟಿಗರು
ಇನ್ನು ತೆಲುಗು ನೆಟ್ಟಿಗರು ಉದ್ದೇಶಪೂರ್ವಕವಾಗಿ ದರ್ಶನ್ ಅವರನ್ನು ಹೀಯಾಳಿಸುವ ಕೆಲಸ ಮಾಡುತ್ತಿದ್ದಾರೆ. #KFIcriminalDarshan ಎಂದು ಮಾಡಲಾದ ಎಲ್ಲಾ ಪೋಸ್ಟ್ಗಳಿಗೂ ಸಹ ಒಬ್ಬೊಬ್ಬರೇ ಹತ್ತರಿಂದ ನೂರು ಬಾರಿ #KFIcriminalDarshan ಎಂದು ಬರೆದು ಕಾಮೆಂಟ್ ಮಾಡುತ್ತಿದ್ದಾರೆ.