Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರಿನಲ್ಲಿ ಧಾರ್ಮಿಕ ಅಸಹನೆ; ತಿಲಕ ಧರಿಸಿದ್ದಕ್ಕೆ ವ್ಯಕ್ತಿಗೆ ‘ಹಿಂದೂಗಳಿಗೆ ಊಟ ಬಡಿಸುವುದಿಲ್ಲ’ ಎಂದು ಹೇಳಿ ಅವಮಾನ!

Spread the love

ಬೆಂಗಳೂರು : ಬೆಂಗಳೂರಿನಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು, ಮುಸ್ಲಿಂ ಮದುವೆಗೆ ತಿಲಕ ಇಟ್ಟುಕೊಂಡು ಹಿಂದೂ ವ್ಯಕ್ತಿಯೊಬ್ಬರು ಬಂದಾಗ ತಿಲಕ ಇಟ್ಟುಕೊಂಡು ಬದಿದ್ದಾನೆ ಎನ್ನುವ ಕಾರಣಕ್ಕೆ ಹಿಂದೂಗಳಿಗೆ ಊಟ ಹಾಕಲ್ಲ ಎಂದು ಹೋಗಿ ಎಂದು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಇದೀಗ ವರದಿಯಾಗಿದೆ.

ಹೌದು ತಿಲಕ ಇಟ್ಟುಕೊಂಡು ಊಟಕ್ಕೆ ಕುಳಿತ ವ್ಯಕ್ತಿಗೆ ಅವಮಾನ ಮಾಡಲಾಗಿದ್ದು ನಿಮಗೆ ಊಟ ಹಾಕಲ್ಲ ಎಂದು ಹೋಗಿ ಎಂದು ಅವಮಾನ ಮಾಡಿರುವ ಘಟನೆ ನೆಲಮಂಗಲದ ಮುಸ್ಲಿಮರ ಮದುವೆಯಲ್ಲಿ ಈ ಒಂದು ಅಮಾನವೀಯ ಘಟನೆ ನಡೆದಿದೆ. ಇಸ್ಲಾಂಪುರದ ನಿವಾಸಿ ಸಮೀವುಲ್ಲಾ ಮತ್ತು ಕುಟುಂಬ ಅವಮಾನ ಮಾಡಿದ್ದಾರೆ. ಮುಜಾಮಿಲ್ ಪಾಷಾ ಮತ್ತು ಸಾನಿಯಾ ಮದುವೆ ಇತ್ತು. ತಿಲಕ ಇಟ್ಟುಕೊಂಡು ರಾಜು ಎನ್ನುವವರು ಊಟಕ್ಕೆ ಕುಳಿತುಕೊಂಡಿದ್ದ ನಿಮಗೆ ಊಟ ಹಾಕುವುದಿಲ್ಲ ನಿಮ್ಮನ್ನು ಇಲ್ಲಿ ಯಾರು ಕರೆದಿದ್ದು ಹಿಂದೂಗಳಿಗೆ ನಾವು ಊಟ ಹಾಕುವುದಿಲ್ಲ ಇದರಿಂದ ಎದ್ದು ಹೋಗಿ ಅಂತ ರಾಜುವನ್ನು ಕಳುಹಿಸಿದ್ದಾರೆ.

ಇನ್ನು ವಿಡಿಯೋ ಒಂದರಲ್ಲಿ ವ್ಯಕ್ತಿಯೊಬ್ಬರು ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು ಬರ್ರಿ ಅವರು ಹಿಂದೂ ಜನಗಳಿಗೆ ಊಟ ಹಾಕಲ್ವಂತೆ ಬರ್ರಿ ಇನ್ವೈಟ್ ಮಾಡಬಾರದು ಸಾಹೇಬ್ರೆ ಹಂಗೆಲ್ಲ ಮಾಡಬಾರದು ಊಟಕ್ಕೆ ಕುಳಿತಾಗ ಎಬ್ಬಿಸಬಾರದು ನೀವು ಮಾಡುತ್ತಿರುವುದು ಅಧರ್ಮ ತಪ್ಪು ಯಾರು ಬಂದಿರುತ್ತಾರೆ. ಹಣೆಗೆ ಕುಂಕುಮ ಇಟ್ಟುಕೊಂಡು ಬಂದಿದ್ದಕ್ಕೆ ಊಟ ಹಾಕಲ್ವಂತೆ ಇವರು ಎಂದು ವ್ಯಕ್ತಿಯೊಬ್ಬರು ಆಕ್ರೋಶದಲ್ಲಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.


Spread the love
Share:

administrator

Leave a Reply

Your email address will not be published. Required fields are marked *