ಅತ್ಯಾಚಾರ ಪ್ರಕರಣ: ಮಡೆನೂರು ಮನುಗೆ ಜಾಮೀನು

ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯರಾಗಿದ್ದ ಮಡೆನೂರು ಮನು ಇತ್ತೀಚೆಗೆ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಚೊಚ್ಚಲ ಸಿನಿಮಾ ‘ಕುಲದಲ್ಲಿ ಕೀಳ್ಯಾವುದೋ’ ಬಿಡುಗಡೆಗೆ ಇನ್ನೇನು ಒಂದು ದಿನ ಬಾಕಿಯಿದೆ ಎನ್ನುವಾಗಲೇ ಅವರ ಮೇಲೆ ಕಾಮಿಡಿ ಶೋನ ಸಹ ನಟಿ ಅತ್ಯಾಚಾರದ ಆರೋಪ ಮಾಡಿ, ದೂರನ್ನು ದಾಖಲಿಸಿದ್ದರು.
ಈ ಸಂಬಂಧ ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದರು.
ಸಂತ್ರಸ್ತೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಡೆನೂರು ಮನು ಸಂಕಷ್ಟಕ್ಕೆ ಸಿಲುಕಿದ್ದರು. ನ್ಯಾಯಾಲಯ ಮಡೆನೂರು ಮನು ಅವರಿಗೆ ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಆರೋಪವನ್ನು ಮಾಡಲಾಗಿತ್ತು. ಈ ಬೆನ್ನಲ್ಲೇ ಅವರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿತ್ತು. ಈಗ ಮಡೆನೂರು ಮನುಗೆ ಜಾಮೀನು ಸಿಕ್ಕಿದೆ ಎಂಬ ಸುದ್ದಿ ಹೊರಬಿದ್ದಿದೆ.
ಮಡೆನೂರು ಮನುಗೆ ಜಾಮೀನು ಮಂಜೂರು ಆಗಿರುವ ಬೆನ್ನಲ್ಲೆ ಅವರನ್ನು ನಾಳೆ (ಜೂನ್ 7)ರಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಮಡೆನೂರು ಮನು ವಿರುದ್ಧ ಸಂತ್ರಸ್ತೆಯ ಆರೋಪ ಒಂದು ಕಡೆಯಾದರೆ, ಇನ್ನೊಂದು ಕಡೆ ಕನ್ನಡ ಚಿತ್ರರಂಗ ಸ್ಟಾರ್ಗಳ ಬಗ್ಗೆ ಅವಮಾನ ಮಾಡಿ ಮಾತಾಡಿದ್ದಾರೆ ಎನ್ನಲಾದ ವಿಡಿಯೋ ಕೂಡ ಹೊರ ಬಿದ್ದು, ಕನ್ನಡ ಚಿತ್ರರಂಗದ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಜಾಮೀನು ದೊರೆತಿದ್ದರಿಂದ ಹೊರ ಬಂದ್ಮೇಲೆ ಈ ಎಲ್ಲದಕ್ಕೂ ಇವರ ಪ್ರತಿಕ್ರಿಯೆ ಏನಿರುತ್ತೆ ಎಂದು ನೋಡಬೇಕಿದೆ.
ಕಾಮಿಡಿ ಕಿಲಾಡಿಗಳು ಅಂತಹ ರಿಯಾಲಿಟಿ ಶೋನಿಂದ ಜನಪ್ರಿಯತೆ ಗಿಟ್ಟಿಸಿಕೊಂಡು ಸಿನಿಮಾ ಎಂಟ್ರಿ ಕೊಟ್ಟಿದ್ದರು. ಇನ್ನೇನು ಚೊಚ್ಚಲ ಸಿನಿಮಾ ರಿಲೀಸ್ ಆಗಿ, ಕನ್ನಡ ಚಿತ್ರರಂಗದ ಸ್ಟಾರ್ ಆಗಬೇಕು ಎನ್ನುವ ಕನಸು ನನಸಾಗುವುದಕ್ಕೆ ಒಂದು ದಿನ ಬಾಕಿಯಿದೆ ಎನ್ನುವಾಗಲೇ ಇವರ ಬಂಧನವಾಗಿತ್ತು. ಮೊದಲ ಸಿನಿಮಾ ರಿಲೀಸ್ ವೇಳೆ ಮಡೆನೂರು ಮನು ಪೊಲೀಸರ ಅತಿಥಿಯಾಗಿದ್ದರು.
ಮಡೆನೂರು ಮನು ವಿರುದ್ಧ ಕಾಮಿಡಿ ಕಿಲಾಡಿಗಳು ಶೋನ ಸಹ ನಟಿ ಹಾಗೂ ಸಂತ್ರಸ್ತೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಅಲ್ಲದೆ ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ದಾಖಲಿಸಿದ್ದರು. ಸಂತ್ರಸ್ತೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಡೆನೂರು ಮನು ಅವರ ಬಂಧನ ಆಗಿತ್ತು. ಈ ವೇಳೆ ಮನು ಹಾಗೂ ಸಂತ್ರಸ್ತೆಯ ಆಡಿಯೋಗಳು ಲೀಕ್ ಆಗಿದ್ದವು. ಇವರೊಂದಿಗೆ ಕಾಮಿಡಿ ಕಿಲಾಡಿಗಳು ಶೋನ ಮತ್ತೊಬ್ಬ ನಟನ ಹೆಸರು ಈ ಪ್ರಕರಣದಲ್ಲಿ ತಳುಕು ಹಾಕಿಕೊಂಡಿತ್ತು.
ಪೊಲೀಸರು ಬಂಧಿಸುವುದಕ್ಕೂ ಮುನ್ನ ಮನು ಒಂದು ವಿಡಿಯೋ ಕೂಡ ಬಿಡುಗಡೆ ಮಾಡಿದ್ದರು. ಅದರಲ್ಲಿ ಇಬ್ಬರು ನಟರು ಹಾಗೂ ಒಬ್ಬ ಲೇಡಿ ಡಾನ್ ನನ್ನ ಮೇಲಿನ ಆರೋಪಕ್ಕೆ ಕಾರಣವೆಂದು ಹೇಳಿದ್ದರು. ಸದ್ಯ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ನಾಳೆ (ಜೂನ್ 7) ಜಾಮೀನ ಮೇಲೆ ಹೊರ ಬರಲಿದ್ದಾರೆ. ಆದರೆ, ಹೊರ ಬಂದ್ಮೇಲೆ ಅವರು ಸಾಕಷ್ಟು ಸವಾಲುಗಳನ್ನು ಎದುತರಿಸಬೇಕಿದೆ.
ಮಡೆನೂರು ಮನು ತಮ್ಮ ಮೇಲಿರುವ ಅತ್ಯಾಚಾರ ಪ್ರಕರಣವನ್ನು ಯಾವ ರೀತಿ ಎದುರಿಸುತ್ತಾರೆಂದು ನೋಡಬೇಕಿದೆ. ಇನ್ನೊಂದು ಕಡೆ ಜೈಲಿನಲ್ಲಿ ಇರುವಾಗ ಅವರದ್ದೇ ಎನ್ನಲಾಗುತ್ತಿರುವ ಆಡಿಯೋ ಲೀಕ್ ಆಗಿತ್ತು. ಅದರಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಅವರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದರು. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಆಕ್ರೋಶ ಹೊರ ಹಾಕಿತ್ತು. ಇನ್ಮುಂದೆ ಮಡೆನೂರು ಮನುಗೆ ಯಾವುದೇ ರೀತಿಯ ಸಹಕಾರ ನೀಡಬಾರದೆಂಬ ತೀರ್ಮಾನಕ್ಕೆ ಬಂದಿದೆ. ಈಗತಾನೇ ಯಶಸ್ಸಿನ ಹೆಜ್ಜೆ ಇಟ್ಟಿದ್ದ ಮಡೆನೂರು ಮನು ತಮ್ಮ ಹೆಸರನ್ನು ತಾವೇ ಹಾಳು ಮಾಡಿಕೊಂಡಿದ್ದಾರೆ. ಇದನ್ನು ಹೇಗೆ ಸರಿಪಡಿಸಿಕೊಳ್ಳುತ್ತಾರೆಂದು ನೋಡಬೇಕಿದೆ