ತಂಗಿಯ ಮದುವೆ ಬಳಿಕ ಮದುವೆಯ ಕನಸು ಕಾಣುತ್ತಿದ್ದ ರಾಕೇಶ್ ಪೂಜಾರಿ

ಉಡುಪಿ:ಇಂದು ಬೆಳ್ಳಂಬೆಳಗ್ಗೆ ಕರುನಾಡಿಗೆ ಒಂದು ಶೋಕದ ವಿಚಾರ ಬರಸಿಡಿಲಿನ ಥರ ಎರಗಿತ್ತು. ʼಕಾಮಿಡಿ ಕಿಲಾಡಿಗಳು ಶೋʼ ಖ್ಯಾತಿಯ ರಾಕೇಶ್ ಪೂಜಾರಿ ಅವರು ಲೋ ಬಿಪಿ ಆಗಿ ನಿಧನರಾಗಿದ್ದಾರೆ. ಎರಡು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ರಾಕೇಶ್ ಅವರು ತಂಗಿ ರಕ್ಷಿತಾಳ ಮದುವೆ ಮಾಡಿ, ತಾವು ಕೂಡ ಮದುವೆ ಆಗಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದರು. ಈ ಬಗ್ಗೆ ಕೆಲ ಸೆಲೆಬ್ರಿಟಿಗಳು ಮಾಧ್ಯಮದ ಜೊತೆ ಮಾತನಾಡಿದ್ದಾರೆ.
ಕಾಮಿಡಿ ಕಿಲಾಡಿಗಳು ದಿವ್ಯಾ ಹೇಳಿದ್ದೇನು?
“ನನ್ನ ಮಗು ಪ್ರಗ್ನೆನ್ಸಿ ಟೈಮ್ ಅಲ್ಲಿ ನನ್ನ ಜೊತೆ ಫೋನ್ ಕಾಂಟ್ಯಾಕ್ಟ್ ಅಲ್ಲಿದ್ದನು. ಚೆನ್ನಾಗಿ ತಿನ್ನಬೇಕು ಆಯ್ತಾ? ಜ್ಯೂನಿಯರ್ ಜಿಜಿ ಬೇಕು ಆಯ್ತಾ? ಹಾಗೆ ಹೀಗೆ ಅಂತೆಲ್ಲ ಹೇಳ್ತಿದ್ದ. ಮಗು ಆದಮೇಲೆ ನನ್ನ ಮಗು ಜೊತೆಗೆ ನೋಡೋಕೆ ಬಂದಿದ್ದನು. ಅನೀಶ್ ಅವರ ʼದಸ್ಕತ್ʼ ಅಂತ ಸಿನಿಮಾ ಬಂದಾಗ ಪ್ರೀಮಿಯರ್ ಶೋಗೆ ಹೋಗಿದ್ವಿ. ನನ್ನ ಮಗುವನ್ನು ಅವನ ತೊಡೆ ಮೇಲೆ ಕೂರಿಸ್ಕೊಂಡು ಇಡೀ ಸಿನಿಮಾ ನೋಡಿದ್ದಾನೆ. ಮಗು ಹತ್ರ ಮಾತಾಡಿಕೊಂಡು ಗೇಲಿ ಮಾಡ್ಕೊಂಡಿದ್ದ” ಎಂದು ದಿವ್ಯಾ ಹೇಳಿದ್ದಾರೆ.
ನನಗೆ ತುಳು ಬರುತ್ತದೆ, ನಿನ್ನ ಗಂಡನಿಗೆ ಬೈಯ್ಯೋಕೆ ಆಗಲ್ಲ ಅಂತ ನೀನು ನಿನ್ನ ಗಂಡನಿಗೆ ತುಳು ಕಲಿಸಲಿಲ್ಲ ಅಲ್ವಾ ಅಂತ ಅವನು ರೇಗಿಸ್ತಾ ಇದ್ದ. ಕಾಂತಾರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ನಮಗೆ ಸಿನಿಮಾ ಸಿಕ್ರೂ ಕೂಡ ಫೋನ್ ಮಾಡಿ ವಿಶ್ ಮಾಡ್ತಿದ್ದನು. ಅವರ ತಾಯಿ ಈ ನೋವನ್ನು ಹೇಗೆ ಸಹಿಸಿಕೊಳ್ತಾರೋ ಗೊತ್ತಿಲ್ಲ. ಅವರು ಮಗನ ಬಗ್ಗೆ ತುಂಬಾ ಕನಸು ಕಟ್ಟಿದ್ರು. ತಂಗಿ ಕೂಡ ರಕ್ಷಿತಾ ಅಂತ. ತುಂಬ ಒಳ್ಳೆಯ ಹುಡುಗಿ ಅದು. ತಂಗಿ ಮದುವೆ ಆಗಲಿ, ಆಮೇಲೆ ನಾನು ಮದುವೆ ಆಗ್ತೀನಿ ಅಂತ ಹೇಳಿದ್ದನು” ಎಂದು ʼಕಾಮಿಡಿ ಕಿಲಾಡಿಗಳುʼ ಖ್ಯಾತಿಯ ದಿವ್ಯಾ ಅವರು ಹೇಳಿದ್ದಾರೆ.