Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೆಜ್ಮಾಡಿಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ರೈಲ್ವೆ ಲೈನರ್ ಕಳ್ಳತನ – ಕಾನೂನು ಕ್ರಮಕ್ಕೆ ಆಗ್ರಹ!

Spread the love

ಹೆಜ್ಮಾಡಿ: “ಮಕ್ಕಳು ದೇಶದ ಭವಿಷ್ಯ” ಎಂಬ ಮಾತಿಗೆ ವಿರುದ್ಧವಾಗಿ, ದಕ್ಷಿಣ ಕನ್ನಡ ಮತ್ತು ಉಡುಪಿ ಅವಿಭಾಜ್ಯ ಜಿಲ್ಲೆಯ ಹೆಜ್ಮಾಡಿಯಲ್ಲಿ ಶಾಲಾ ಸಮಯದಲ್ಲಿRailway liner ಕಳ್ಳತನ ಮಾಡುತ್ತಿರುವ ವಿದ್ಯಾರ್ಥಿಗಳು ಸ್ಥಳೀಯರಿಗೆ ಹಿಡಿಯಲ್ಪಟ್ಟಿದ್ದಾರೆ. ಈ ಘಟನೆ ಜನರ ಗಮನ ಸೆಳೆದಿದ್ದು, ಮಕ್ಕಳ ಬೆಳವಣಿಗೆಯ ಕುರಿತು ಚಿಂತನೆಗೆ ಕಾರಣವಾಗಿದೆ.

ಪ್ರಕರಣದ ಪ್ರಕಾರ, ಹೈಸ್ಕೂಲ್ ವಿದ್ಯಾರ್ಥಿಗಳು ಶಾಲಾ ಹೊತ್ತಿನಲ್ಲಿ ರೈಲ್ವೆ ಹಳಿಯ ಬಳಿ ಲೈನರ್ ಕಳವು ಮಾಡುತ್ತಿದ್ದರು. ಈ ದೃಷ್ಯವನ್ನು ಗಮನಿಸಿದ ಸ್ಥಳೀಯರು ಅವರನ್ನು ತಡೆದು, ಕದ್ದ ಲೈನರ್‌ಗಳೊಂದಿಗೆ ಹಿಡಿದುಕೊಂಡಿದ್ದಾರೆ. ಮಕ್ಕಳಿಂದ ಈ ರೀತಿಯ ಅಪರಾಧ ನಡೆಯುತ್ತಿರುವುದರಿಂದ, ಪಾಲಕರು ಮತ್ತು ಶಾಲಾ ಆಡಳಿತಗಳು ಜಾಗರೂಕರಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಪ್ರಕರಣವು ಸಾರ್ವಜನಿಕ ವಲಯದಲ್ಲಿ ಆತಂಕ ಉಂಟುಮಾಡಿದ್ದು, ಈ ಕೃತ್ಯಕ್ಕೆ ಸಂಬಂಧಿಸಿದವರಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಮತ್ತು ರೈಲ್ವೆ ಇಲಾಖೆ ಒತ್ತಾಯಿಸುತ್ತಿದ್ದಾರೆ. ಮಕ್ಕಳು ತಪ್ಪು ಮಾರ್ಗಕ್ಕೆ ಹೋಗದಂತೆ ಸೂಕ್ತ ಮಾರ್ಗದರ್ಶನ ಮತ್ತು ಕಾನೂನು ಕ್ರಮ ಅಗತ್ಯವಿದೆ ಎಂಬ ಮನವಿ ಮುಂದಿಟ್ಟಿದ್ದಾರೆ.

ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಈ ಪ್ರಕರಣ ಶಾಲಾ ಮಕ್ಕಳ ಭವಿಷ್ಯ ಹಾಗೂ ಸಮಾಜದ ಶಿಷ್ಟಾಚಾರಗಳಿಗೆ ಪಾಠವಾಗಬೇಕೆಂದು ನಾಗರಿಕರು ಅಭಿಪ್ರಾಯ ಪಟ್ಟಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *