ಮಂಗಳ ಸೂತ್ರ ನಿರ್ಬಂಧವಿರೋಧಿ ರೈಲ್ವೆ ಪರೀಕ್ಷೆ ನಿಯಮ ಬದಲಾವಣೆ

ಬೆಂಗಳೂರು:ಇತ್ತೀಚೆಗಷ್ಟೇ ನಡೆದ ಸಿಇಟಿ ಪರೀಕ್ಷೆಯಲ್ಲಿ ಶಿವಮೊಗ್ಗ, ಬೀದರ್, ಧಾರವಾಡದಲ್ಲಿ ಜನಿವಾರ ತೆಗೆಸಿ ಪರೀಕ್ಷೆಯನ್ನ ಬರೆಸಿದ್ದರು. ಈ ವಿಚಾರ ಎಲ್ಲೆಡೆ ಬಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ರೈಲ್ವೆ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ನಾಳೆ ಪರೀಕ್ಷೆ ನಡೆಯಲಿದೆ.
ಈಗಾಗಲೇ ಹಾಲ್ ಟಿಕೆಟ್ ಅಭ್ಯರ್ಥಿಗಳ ಕೈಸೇರಿದೆ. ಆ ಹಾಲ್ ಟಿಕೆಟ್ ನಲ್ಲಿ ಮಂಗಳ ಸೂತ್ರದ ನಿಷೇಧವನ್ನು ಹೇರಲಾಗಿತ್ತು. ಅಂದ್ರೆ ಪರೀಕ್ಷೆ ಬರೆಯಲು ಬರುವವರು ಮಂಗಳ ಸೂತ್ರ ಧರಿಸುವಂತಿಲ್ಲ ಎಂದು.
ಮೊದಲೇ ಹಿಂದುಗಳ ಧಾರ್ಮಿಕ ನಂಬಿಕೆ ಈ ಮಂಗಳ ಸೂತ್ರ. ಹಿರಿಯರು ಯಾವುದೇ ಸಮಯದಲ್ಲೂ ಮಂಗಳ ಸೂತ್ರವನ್ನ ಬಿಚ್ಚಿಡೋದಿಲ್ಲ. ಹೀಗಿರುವಾಗ ಮಂಗಳ ಸೂತ್ರದ ಬಗ್ಗೆ ಹಾಲ್ ಟಿಕೆಟ್ ನಲ್ಲಿ ಮೆನ್ಶನ್ ಮಾಡಿದ್ದದ್ದು, ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಯಾವಾಗ ರೈಲ್ವೆಯ ಈ ನಿರ್ಧಾರ ಸಿಕ್ಕಾಪಟ್ಟೆ ವೈರಲ್ ಆಯ್ತೋ ಇದೀಗ ರೈಲ್ವೆ ಇಲಾಖೆಯಿಂದ ಆದೇಶ ವಾಪಸ್ ಪಡೆಯಲಾಗಿದೆ.
ಈ ಸಂಬಂಧ ಮಾತನಾಡಿದ ವಿ.ಸೋಮಣ್ಣ, ಮಾಂಗಲ್ಯ, ಜನಿವಾರ ತೆಗೆಯಬೇಕು ಎಂಬ ಆದೇಶವನ್ನ ಬದಲಿಸಲಾಗಿದೆ. ಈ ಹಿಂದೆ ಇದ್ದ ಆದೇಶವನ್ನು ವಾಪಾಸ್ ಪಡೆಯಲಾಗಿದೆ. ದೇಶಾದ್ಯಂತ ನಾಳೆ ನಡೆಯುವ ಪರೀಕ್ಷೆಗೆ ಇದು ಅನ್ವಯವಾಗಲಿದೆ. ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಜೊತೆಗೆ ಈ ಸಂಬಂಧ ಸುಧೀರ್ಘವಾದ ಚರ್ಚೆ ನಡೆಸಿದ್ದೇನೆ. ಪರೀಕ್ಷೆ ಬರೆಯಲು ಇದ್ದಂತ ಈ ನಿಬಂಧನೆಗಳು ಅನೇಕ ವರ್ಷದಿಂದಾನೂ ಇದ್ದವು. ಜನಿವಾರ ತೆಗೆಯದಂತೆ ಇಂದೇ ಆದೇಶವಾಗಲಿದೆ. ಸುಮಾರು ವರ್ಷದಿಂದ ಇದ್ದಂತ ಕಟ್ಟು ಪಾಡುಗಳನ್ನ ತೆಗೆದು ಹಾಕಲಾಗಿದೆ ಎಂದು ವಿ.ಸೋಮಣ್ಣ ತಿಳಿಸಿದ್ದಾರೆ.
[