Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಯಚೂರು: ಟಾಟಾ ಏಸ್ ಮತ್ತು ಪಿಕಪ್ ನಡುವೆ ಭೀಕರ ಡಿಕ್ಕಿ; ಐವರು ದುರ್ಮರಣ!

Spread the love

ರಾಯಚೂರು: ಜಿಲ್ಲೆಯ ಸಿಂಧನೂರು (Sindhanur) ತಾಲೂಕಿನ ಬೂದಿವಾಳ ಕ್ರಾಸ್ ಬಳಿ ಟಾಟಾ ಏಸ್ (Tata Ace) ಹಾಗೂ ಮಹೀಂದ್ರಾ ಬೊಲೆರೊ ಪಿಕಪ್ (Bolero Pick- Up) ಮುಖಾಮುಖಿ ಡಿಕ್ಕಿ(Accident) ಸಂಭವಿಸಿ ಐವರು ಸಾವನ್ನಪ್ಪಿದ್ದು ಮೂವರಿಗೆ ಗಾಯಗಳಾಗಿವೆ.

ಮೃತರು ಬಳ್ಳಾರಿಯ ಚೆಳ್ಳೆ‌ ಕೂಡ್ಲೂರಿನ ವರ್ಷದ ಸಣ್ಣ ಯಲ್ಲಯ್ಯ(40), ರಂಗನಾಥ‌(15), ಹರಿ‌ (36) ಮಲ್ಲಯ್ಯ ಮಧುರಿ(50) ಮೃತ ದುರ್ದೈವಿಗಳು. ಮೃತರಲ್ಲಿ ಸಣ್ಣ ಯಲ್ಲಯ್ಯ ಹಾಗೂ ರಂಗನಾಥ ತಂದೆ, ಮಗನಾಗಿದ್ದರೆ ಇನ್ನೋರ್ವ ಮೃತನ ಗುರುತು ಪತ್ತೆಯಾಗಿಲ್ಲ. ಅಪಘಾತದಲ್ಲಿ ಟಾಟಾ ಏಸ್ ನಲ್ಲಿದ್ದ ಕುರಿಗಳು ಸಹ ಸಾವನ್ನಪ್ಪಿವೆ.  

ಸಿಂಧನೂರಿನಿಂದ ಕುರಿ ಸಂತೆ ಮುಗಿಸಿಕೊಂಡು ಬಳ್ಳಾರಿ ಕಡೆಗೆ ಹೊರಟಿದ್ದ ಟಾಟಾ ಏಸ್ ವಾಹನಕ್ಕೆ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಟಾಟಾ ಏಸ್ ವಾಹನದಲ್ಲಿದ್ದ ಎಂಟು ಜನರಲ್ಲಿ ಐದು ಜನ ಸಾವನ್ನಪ್ಪಿದ್ದಾರೆ.

ಪಿಕಪ್‌ನಲ್ಲಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಟಾಟಾ ಏಸ್‌ನಲ್ಲಿದ್ದ ಮೂವರು ಗಾಯಾಳುಗಳನ್ನ ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.


Spread the love
Share:

administrator

Leave a Reply

Your email address will not be published. Required fields are marked *