Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆಸ್ತಿ, ದ್ವೇಷ, ದಾಳಿ – ರಿಕ್ಕಿ ರೈ ಹತ್ಯೆ ಯತ್ನದ ಹಿಂದೆ ಯಾರ ರಾಜಕೀಯ?

Spread the love

ಬೆಂಗಳೂರು : ಮಾಜಿ ಭೂಗತ ದೊರೆ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿದ್ದು, ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆಸ್ತಿ ವಿವಾದ ಮತ್ತು ಹಳೇ ದ್ವೇಷಗಳು ಸೇರಿದಂತೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಮಾಜಿ ಭೂಗತ ದೊರೆ, ದಿವಂಗತ ಮುತ್ತಪ್ಪ ರೈ ಅವರ ಕಿರಿಯ ಮಗ ರಿಕ್ಕಿ ರೈ ಮೇಲಿನ ಗುಂಡಿನ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಾಲ್ಕು ಮಂದಿ ವಿರುದ್ಧ ಈಗ ಎಫ್‌ಐಆರ್ ದಾಖಲಾಗಿದೆ. ರಿಕ್ಕಿ ರೈ ಕಾರು ಚಾಲಕ ಬಸವರಾಜ್ ನೀಡಿದ ದೂರಿನ ಆಧಾರದಲ್ಲಿ ಮುತ್ತಪ್ಪ ರೈ ಆಪ್ತನಾಗಿದ್ದ ರಾಕೇಶ್ ಮಲ್ಲಿ, ಮುತ್ತಪ್ಪ ರೈ ಎರಡನೆ ಪತ್ನಿ ಅನುರಾಧ, ನಿತೀಶ್ ಎಸ್ಟೇಟ್ ಮಾಲೀಕ ನಿತೀಶ್ ಶೆಟ್ಟಿ ಮತ್ತು ವೈದ್ಯನಾಥ ಎಂಬುವರ ಮೇಲೆ ದೂರು ದಾಖಲಾಗಿದೆ. ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಆರೋಪಿಗಳ ಪತ್ತೆಗೆ ಮುಂದಾದ ಪೊಲೀಸರು ಮೂರು ವಿಶೇಷ ತಂಡಗಳ ರಚನೆ ಮಾಡಿದ್ದಾರೆ. ಮಾಗಡಿ ಡಿವೈಎಸ್ಪಿ, ರಾಮನಗರ ಡಿವೈಎಸ್ಪಿ ಹಾಗೂ ರಾಮನಗರ ಜಿಲ್ಲೆಯ ಸೆನ್ ಪೊಲೀಸ್ ಠಾಣೆ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಹೊಂಚು ಹಾಕಿ ಕಾದು ಕುಳಿತು ದಾಳಿ ಮಾಡಿದ ಶಾರ್ಪ್ ಶೂಟರ್‌ಗಳು ಮತ್ತು ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಎರಡು ಬಾರಿ ಅಟ್ಯಾಕ್!
ತಂದೆಯಂತೆ ರಿಕ್ಕಿರೈ ಆಯಸ್ಸು ಗಟ್ಟಿಯಿದೆ. ತಂದೆ ಮುತ್ತಪ್ಪರೈ ಗೂ ಐದು ಗುಂಡುಗಳು ದೇಹ ಸೀಳಿತ್ತು. ಆದರೆ ಅದೃಷ್ಟವಶಾತ್ ಆ ದಿನ ಮುತ್ತಪ್ಪ ರೈ ಪ್ರಾಣಾಪಾಯದಿಂದ ಪಾರಾಗಿದ್ರು. ನಿನ್ನೆ ರಿಕ್ಕಿ ರೈ ಮೇಲೆ ಎರಡು ಬಾರಿ ಹತ್ಯೆಗೆ ಯತ್ನ ನಡೆದಿದೆ. ಮೊದಲ ಬಾರಿ 11 ಗಂಟೆಗೆ ಫಾರ್ಮ್ ಹೌಸ್ ನಿಂದ ಹೊರ ಹೋಗುವ ವೇಳೆ ಕಾಂಪೌಂಡ್ ಎಂಟ್ರಿ ಆಗುತ್ತಿದ್ದಂತೆ ಫೈಯರ್ ಆದ ಗುಂಡು ವೆಹಿಕಲ್ ಗೆ ಬಿದ್ದಿತ್ತು. ಮೊದಲ ಬಾರಿ ಶೂಟರ್ ನಿಂದ ಮಿಸ್ ಆಗಿದ್ದ ರಿಕ್ಕಿರೈ ವಾಹನ ಪಂಚರ್ ಆಗಿದೆ ಅಂದುಕೊಂಡು ಚೆಕ್‌ ಮಾಡಿ ಏನು ಆಗಿಲ್ಲ ಅಂದುಕೊಂಡು ಸುಮ್ಮನಾಗಿದ್ದರು. ಎರಡನೇ ಬಾರಿ 12:50 ಕ್ಕೆ ಫಾರ್ಮ್ ಹೌಸ್ ನಿಂದ ವಾಪಸ್ ಬರುವಾಗ ಮತ್ತೊಮ್ಮೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ಗುಂಡು ರಿಕ್ಕಿ ರೈ ಮೂಗು ಹಾಗೂ ಬಲತೋಳು ಸೀಳಿದೆ. ಈಗ ವೈದ್ಯರಿಂದ ಮೂಗಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ


Spread the love
Share:

administrator

Leave a Reply

Your email address will not be published. Required fields are marked *