ದ. ಕ ಜಿಲ್ಲೆ 21 ಹಿಂದೂ ಕಾರ್ಯಕರ್ತರ ಗಡಿಪಾರಿಗೆ ಸಿದ್ಧತೆ ಖಂಡನೀಯ:ಹಿಂದೂ ಮಹಾ ಸಭಾ ಕರ್ನಾಟಕ

ದಕ್ಷಿಣ ಕನ್ನಡ: ರಾಜ್ಯ ಸರಕಾರ ದ ಆಡಳಿತ ಗುಪ್ತ ಚರ ಪೊಲೀಸ್ ವೈಫಲ್ಯದಿಂದ ಕಳೆದ 2ತಿಂಗಳಿಂದ ದ. ಕ ಜಿಲ್ಲೆ ಯಲ್ಲಿ ಆದ ಒಂದು ಕೊಲೆ ಇಂದ ಅಶಾಂತಿ ವಾತಾವರಣ ನಿರ್ಮಾಣ ವಾಗಿದ್ದು ಮಾತ್ರವಲ್ಲದೇ ಕೆಲವು ಕೋಮುವಾದಿ ಮುಸ್ಲಿಂ ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದು ಕೊಲೆ ಯಾದ ವ್ಯಕ್ತಿಯ ಮನೆಗೆ ಸರಕಾರ ದ ಪರವಾಗಿ ಪಂಚಾಯತ್ ಸದಸ್ಯನಿಂದ ಹಿಡಿದು ಮಂತ್ರಿ, ಮುಖ್ಯ ಮಂತ್ರಿ ವರೆಗೆ ಯಾರು ಹೋಗಬಾರದು ಎಂದು ಬೆದರಿಕೆ ಹಾಕಿ ದನ್ನು ನೆಪ ವಾಗಿಸಿ ಯಾರು ಹೋಗದೆ, ಹಿಂದೂ ಸಮಾಜ ವನ್ನು ಕೆರಳಿಸಿ ಕೊಲೆಯ ಸಿಟ್ಟು ಮರೆಯುವ ಮುನ್ನ ಇನ್ನೊಂದು ಕೊಲೆ ನಡೆದಿದ್ದು ಇದಕ್ಕೆ ಕರ್ನಾಟಕ ರಾಜ್ಯ ಆಳುವ ಸರಕಾರವೇ ನೇರ ಹೊಣೆ ಆದರೂ ಇದನ್ನು ಮುಂದಿಟ್ಟು ಹಿಂದೂ ಧಾರ್ಮಿಕ, ಸಾಮಾಜಿಕ ಹೋರಾಟಗಾರರನ್ನು ಸಹಿತ 21 ಹಿಂದೂ ಮುಖಂಡರನ್ನು ಗಡಿಪಾರಿಗೆ ಪೊಲೀಸ್ ಇಲಾಖೆ ಹಾಗೂ ಸರಕಾರ ಸೇರಿ ಸಿದ್ಧತೆ ನಡೆಸಿರುದನ್ನು ಹಿಂದೂ ಮಹಾ ಸಭಾ -ಕರ್ನಾಟಕ ಘಟಕ ಉಗ್ರವಾಗಿ ಖಂಡಿಸುತ್ತದೆ. ಇದು ಮಾನವ ಹಕ್ಕು ಉಲ್ಲಂಘನೆ ಕೂಡ ಆಗಿರೋದರಿಂದ ಕೂಡಲೇ ಈ ತೀರ್ಮಾನ ವನ್ನು ಕೈ ಬಿಡಬೇಕು ಎಂದು ಹಿಂದೂ ಮಹಾ ಸಭಾ ಕರ್ನಾಟಕ ಸರಕಾರವನ್ನು ಒತ್ತಾಯಿಸುತ್ತದೆ.