ಮಕ್ಕಳ ಜೀವ ಉಳಿಸಿದ ಪಿಟ್ಬುಲ್: ವಿಷಜಂತುವಿನ ವಿರುದ್ಧ ಹೋರಾಡಿ ಪ್ರಾಣ ಬಿಟ್ಟ ಸ್ನೇಹಿತ ಶ್ವಾನ

ಹಾಸನ : ಕಾಳಿಂಗ ಸರ್ಪವನ್ನು ಕೊಂದು ಕೆಲಸಗಾರರು ಹಾಗೂ ಮನೆ ಮಾಲೀಕರ ಪ್ರಾಣ ಉಳಿಸಿ ಪಿಟ್ ಬುಲ್ ಶ್ವಾನ ಪ್ರಾಣ ಬಿಟ್ಟ ಘಟನೆ ಹಾಸನ ತಾಲ್ಲೂಕಿನ, ಕಟ್ಟಾಯ ಗ್ರಾಮದಲ್ಲಿ ನಡೆದಿದೆ.
ಶಮಂತ್ ಎಂಬವರು ಪಿಟ್ಬುಲ್ ಹಾಗೂ ಡಾಬರ್ಮನ್ ನಾಯಿಗಳನ್ನು ತಮ್ಮ ತೋಟದಲ್ಲಿ ಸಾಕಿದ್ದರು ಕಾರ್ಮಿಕರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮನೆಯ ಕಡೆಗೆ ಬಿಳಿ ಬಣ್ಣದ ಕಾಳಿಂಗ ಸರ್ಪ ಬಂದಿತ್ತು ಆದರೆ
ಮನೆಯ ಬಳಿ ಮಕ್ಕಳು ಆಟವಾಡುತ್ತಿದ್ದರು ಮಕ್ಕಳ ಆಟ ಆಡುವುದನ್ನು ಕಂಡು ತೆಂಗಿನಗರಿಗಳ ಕೆಳಗೆ ಹೋದ ವೈಟ್ ಕೋಬ್ರಾ ಅಡಗಿದ್ದು ಬಳಿಕ ಹಾವನ್ನು ಪಿಟ್ಬುಲ್ ಹಾಗೂ ಡಾಬರ್ಮನ್ ನಾಯಿಗಳು ಕಂಡು ತೆಂಗಿನ ಗರಿ ಕೆಳಗೆ ಇದ್ದ ಹಾವನ್ನು ಎಳೆದು ಹಾವಿನೊಂದಿಗೆ ಸೆಣಸಾಡಿದೆ.
ಈ ವೇಳೆ ಪಿಟ್ಬುಲ್ ನಾಯಿಯ ಮುಖದ ಭಾಗಕ್ಕೆ ಕಾಳಿಂಗ ಸರ್ಪ ಒಂದು ಬಾರಿ ಕಚ್ಚಿದ್ದು ಹಾವಿನೊಂದಿಗೆ ಸುಮಾರು ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಪಿಟ್ಬುಲ್ ನಾಯಿ ಸೆಣಸಾಡಿದೆ. ಸುಮಾರು ಹನ್ನೆರಡು ಅಡಿ ಸರ್ಪವನ್ನು ಹತ್ತು ಪೀಸ್ ಮಾಡಿ ಕೊಂದು ಭೀಮಾ ಹೆಸರಿನ ಪಿಟ್ಬುಲ್ ಶ್ವಾನ ಪ್ರಾಣಬಿಟ್ಟಿದ್ದು
ಶ್ವಾನಗಳು ಹಾಗೂ ಹಾವಿನ ನಡುವಿನ ಸೆಣಸಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಲವೆಡೆ ಡಾಗ್ ಶೋನಲ್ಲಿ ಬಹುಮಾನಗಳನ್ನು ಪಿಟ್ಬುಲ್ ಶ್ವಾನ ಪಡೆದಿದ್ದು ನೆಚ್ಚಿನ ಸಾಕು ನಾಯಿಯನ್ನು ಕಳೆದುಕೊಂಡು ಶಮಂತ್ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.