ಕಾಶ್ಮೀರದಲ್ಲೇ ವಿದ್ಯಾಭ್ಯಾಸ ಪಡೆಯುತ್ತಿದ್ದಾತಾನೆ ಪಹಲ್ಗಾಮ್ ಉಗ್ರನಾದ

ಕಾಶ್ಮೀರ:ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕಾಶ್ಮೀರದ ಸ್ಥಳೀಯ ನಿವಾಸಿ ಆದಿಲ್ ಹುಸೇನ್ ಥೋಕರ್ ಹೆಸರು ಕೇಳಿಬಂದಿದೆ. ಅಚ್ಚರಿಯ ಪ್ರಶ್ನೆ ಏನೆಂದರೆ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ ಹೇಗೆ ಇಷ್ಟೊಂದು ಅಪಾಯಕಾರಿ ಭಯೋತ್ಪಾದಕನಾದ?ಎಂಬುದು. ಆದಿಲ್ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ (ಇಗ್ನೌ) ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ.
ಕಾಶ್ಮೀರದ ಸರ್ಕಾರಿ ಪದವಿ ಕಾಲೇಜಿನಿಂದ ಪದವಿ ಪಡೆದಿದ್ದ ಆದಿಲ್, ಒಂದು ಕಾಲದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಕೂಡ ಹೇಳುತ್ತಿದ್ದನಂತೆ. ಆದರೆ ಈಗ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದಾನೆ
ಪ್ರತಿಭಾನ್ವಿತ ವಿದ್ಯಾರ್ಥಿಯಿಂದ ಭಯಾನಕ ಭಯೋತ್ಪಾದಕನವರೆಗೆ…
ಆದಿಲ್ ಕುಟುಂಬವು ತಮ್ಮ ಮಗ ಚೆನ್ನಾಗಿ ಓದಿ ತಮ್ಮ ಹೆಸರಿಗೆ ಕೀರ್ತಿ ತರುತ್ತಾನೆ ಎಂದು ಕನಸು ಕಂಡಿತ್ತು. ಆದರೆ ಅವರ ಭರವಸೆಯ ಮಗ ಒಂದು ದಿನ ತಮ್ಮ ಹೆಸರನ್ನು ಹಾಳು ಮಾಡುತ್ತಾನೆ ಎಂದು ಅವರಿಗೆ ತಿಳಿದಿರಲಿಲ್ಲ. ಅಧ್ಯಯನದ ಜೊತೆಗೆ, ಆದಿಲ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸುತ್ತಿದ್ದ. ಆತನದ್ದು ಶಾಂತ ಸ್ವಭಾವ ಎಂದು ಅಲ್ಲಿನ ಜನರು ಮಾತನಾಡುತ್ತಾರೆ. ಆದರೆ ಇದೀಗ ಅದೇ ಸ್ವಭಾವದ ಹುಡುಗ ಅದೆಷ್ಟೊ ಜನರ ಪ್ರಾಣವನ್ನೇ ಕಸಿದುಕೊಂಡಿದೆ ಎಂದರೆ ನಂಬುವುದೇ ಕಷ್ಟ ಸಾಧ್ಯ. ಇನ್ನು ಆದಿಲ್ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ಘೋಷಿಸಲಾಗಿದೆ.
ಗುಪ್ತಚರ ಮೂಲಗಳ ಪ್ರಕಾರ, ಆದಿಲ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾವನ್ನು ಸೇರಿಕೊಂಡಿದ್ದಾನೆ. ಅಲ್ಲಿ ಆತನನ್ನು ನಿರ್ವಾಹಕರನ್ನಾಗಿ ಮಾಡಲಾಗಿದೆ.ಆದರೆ ಇದೀಗ ಅದೇ ಸ್ವಭಾವದ ಹುಡುಗ ಅದೆಷ್ಟೊ ಜನರ ಪ್ರಾಣವನ್ನೇ ಕಸಿದುಕೊಂಡಿದೆ ಎಂದರೆ ನಂಬುವುದೇ ಕಷ್ಟ ಸಾಧ್ಯ. ಇನ್ನು ಆದಿಲ್ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ಘೋಷಿಸಲಾಗಿದೆ.
ಗುಪ್ತಚರ ಮೂಲಗಳ ಪ್ರಕಾರ, ಆದಿಲ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾವನ್ನು ಸೇರಿಕೊಂಡಿದ್ದಾನೆ. ಅಲ್ಲಿ ಆತನನ್ನು ನಿರ್ವಾಹಕರನ್ನಾಗಿ ಮಾಡಲಾಗಿದೆ. ಮಿಲಿಟರಿ ತರಬೇತಿ ಪಡೆದು ಭೂಗತನಾಗಿದ್ದು, ಅವನೊಂದಿಗೆ ಭಯೋತ್ಪಾದಕರ ತಂಡ ರಚನೆಯಾಗಿದೆ. ಆತ ಕಾಶ್ಮೀರದ ಸ್ಥಳೀಯನಾಗಿದ್ದರಿಂದ ಮತ್ತು ಮಾರ್ಗಗಳನ್ನು ಚೆನ್ನಾಗಿ ತಿಳಿದಿದ್ದರಿಂದ, ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಪೂಂಚ್-ರಾಜೌರಿ ವಲಯದ ದುರ್ಗಮ ಪ್ರದೇಶಗಳಿಂದ ಎಲ್ಒಸಿಯನ್ನು ದಾಟಿ, ತನ್ನ ಸಹ ಭಯೋತ್ಪಾದಕರೊಂದಿಗೆ ಭಾರತ ಪ್ರವೇಶಿಸಿ ಈ ಕುಕೃತ್ಯ ಎಸಗಿರಬಹುದು ಎಂದು ಸದ್ಯ ಹೇಳಲಾಗುತ್ತಿದೆ.
20 ಲಕ್ಷ ಬಹುಮಾನ ಮೊತ್ತ
ಆದಿಲ್ ಹಲವು ದಿನಗಳ ಕಾಲ ಅನಂತನಾಗ್ನಲ್ಲಿ ಅಡಗಿಕೊಂಡಿದ್ದು, ತನ್ನ ಸಹಚರರೊಂದಿಗೆ, ದೊಡ್ಡ ದಾಳಿ ನಡೆಸಲು ಸರಿಯಾದ ಸ್ಥಳವನ್ನು ಹುಡುಕುತ್ತಿದ್ದ. ಆದಿಲ್ ಅನಂತನಾಗ್ನವನು. ಸುಮಾರು 4 ಸಾವಿರ ಜನರು ವಾಸಿಸುವ ಗ್ರಾಮದವ. ಆದಿಲ್ ಮಧ್ಯಮ ಕುಟುಂಬವನ್ನು ಹೊಂದಿದ್ದು, ಅವರ ಸಹೋದರರಲ್ಲಿ ಒಬ್ಬರು ವರ್ಣಚಿತ್ರಕಾರರಾಗಿದ್ದರೆ, ಇನ್ನೊಬ್ಬರು ಆಟೋಮೊಬೈಲ್ ಶೋ ರೂಂನಲ್ಲಿ ಉದ್ಯೋಗಿಯಾಗಿದ್ದಾರೆ. ಆದಿಲ್ ತಾಯಿ ಶಹಜಾದಾ ಬಾನೋ, ತನ್ನ ಮಗ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂಬುದನ್ನು ನಂಬಲು ಸಿದ್ಧವಿಲ್ಲ. ಆದರೆ “ಇದರಲ್ಲಿ ನನ್ನ ಮಗ ಭಾಗಿಯಾಗಿದ್ದರೆ ಅವನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಆದಿಲ್ ಬಂಧನಕ್ಕೆ 20 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.