Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಬರಿಮಲೆ ವಸ್ತ್ರಸಂಹಿತೆಗೆ ವಿರೋಧ : ಸಂಘಟನೆಯ ಪ್ರತಿಭಟನೆಗೆ ದೇವಾಲಯ ಸ್ಪಷ್ಟನೆ

Spread the love

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಡ್ರೆಸ್ ಕೋಡ್ ಹಿಂದಿನಿಂದಲೂ ಜಾರಿಯಲ್ಲಿದೆ. ಪುರುಷರು, ಕಪ್ಪು ಅಥವಾ ನೀಲಿ ಧೋತಿಯನ್ನು ಉಟ್ಟುಕೊಂಡು ಪ್ರವೇಶ ಮಾಡುತ್ತಾರೆ. ಮಹಿಳೆಯರಿಗೆ ವಯಸ್ಸಿನ ಆಧಾರದ ಮೇಲೆ ದೇವಾಲಯಕ್ಕೆ ಪ್ರವೇಶಿಸಬಹುದಾಗಿದೆ. ಈ ಪದ್ದತಿಯನ್ನು ವಾಪಸ್ ಪಡೆಯಬೇಕೆಂದು ಸಮಿತಿಯ ಗುಂಪು ದೇವಾಲಯದಲ್ಲಿ ಪ್ರತಿಭಟನೆ ನಡೆಸಿದೆ.

ಪಟ್ಟಣಂತಿಟ್ಟ : ಪುರಾಣ ಪ್ರಸಿದ್ದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿರುವ ವಸ್ತ್ರಸಂಹಿತೆಯನ್ನು (Dress Code) ಉಲ್ಲಂಘಿಸಿರುವ SNDP ಸಂಯುಕ್ತ ಸಮರ ಸಮಿತಿಯ ಸದಸ್ಯರು, ಶರ್ಟ್ ಧರಿಸಿ, ದೇವಾಲಯವನ್ನು ಪ್ರವೇಶಿಸಿ, ಸ್ವಾಮಿಯ ದರ್ಶನವನ್ನು ಪಡೆದಿದ್ದಾರೆ.
ಪುರುಷ ಭಕ್ತರು ದೇವಾಲಯದೊಳಗೆ ಪ್ರವೇಶಿಸಬೇಕಾದರೆ, ಅಂಗಿ ಮತ್ತು ಬನಿಯನ್ ಅನ್ನು ತೆಗೆದು ಪ್ರವೇಶಿಸುವ ಪದ್ದತಿ ಬಹಳ ಹಿಂದಿನಿಂದಲೂ ಜಾರಿಯಲ್ಲಿದೆ. ಇದನ್ನು ವಿರೋಧಿಸಿ ಸಮರ ಸಮಿತಿಯ ಸದಸ್ಯರು, ಸರತಿ ಸಾಲಿನಲ್ಲಿ ನಿಂತು ಅಂಗಿಯನ್ನು ತೆಗೆಯದೇ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಟ್ರಾವಂಕೋರ್ ದೇವಸ್ವಂ ಬೋರ್ಡ್ ( Travancore Devaswom Board ) ಸದಸ್ಯರು, ಅಂಗಿಯನ್ನು ತೆಗೆಯದೇ ದೇವಸ್ಥಾನದ ಆವರಣಕ್ಕೆ ಬಂದು, ದೇವರ ದರ್ಶನ ಪಡೆಯಬೇಕು ಎಂದಿದ್ದರೆ ಅದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

ಅಂಗಿ ತೆಗೆದು ದರ್ಶನ ಪಡೆಯುವ ಪದ್ದತಿಯನ್ನು ತೆಗೆದು ಹಾಕಬೇಕು ಎನ್ನುವ ಒತ್ತಾಯವನ್ನು ಸಂಯುಕ್ತ ಸಮರ ಸಮಿತಿಯ ಸದಸ್ಯರು ಪ್ರತಿಭಟನೆಯನ್ನು ನಡೆಸಿದರು. ಭಾನುವಾರ (ಮಾ. 23) ನಡೆದ ಈ ಪ್ರತಿಭಟನೆಗೆ, ದೇವಸ್ಥಾನದ ಆಡಳಿತ ಮಂಡಳಿ, ಭಕ್ತರು, ಪೊಲೀಸರು ಅಡ್ಡಿಪಡಿಸದ ಹಿನ್ನಲೆಯಲ್ಲಿ ಇದು ಶಾಂತಯುತವಾಗಿ ನಡೆಯಿತು.

ಪುರುಷರು ಅಂಗಿ ಬನಿಯನ್ ತೆಗೆದು ದೇವಾಲಯದೊಳಗೆ ಪ್ರವೇಶಿಸಬೇಕು ಎನ್ನುವ ನಿಯಮವನ್ನು ರಾಜ್ಯದ (ಕೇರಳ) ಎಲ್ಲಾ ದೇವಾಲಯಗಳಿಂದ ತೆಗೆದು ಹಾಕಬೇಕು ಎಂದು ಸಮಿತಿಯ ಸದಸ್ಯರು ಒತ್ತಾಯಿಸಿದ್ದಾರೆ. ಇದೊಂದು ಸಾಮಾಜಿಕ ಪಿಡುಗು ಎಂದು ಪ್ರತಿಭಟನಾಕಾರರು ಘೋಷಣೆಯನ್ನು ಕೂಗಿದ್ದಾರೆ.
ಸಮಾಜ ಸುಧಾರಕರಾದ ಬ್ರಹ್ಮಶ್ರೀ ನಾರಾಯಾಣಗುರುಗಳು ಸ್ಥಾಪಿಸಿದ ಶಿವಗಿರಿ ಮಠದ ಮುಖ್ಯಸ್ಥರಾದ ಸ್ವಾಮಿ ಸಚ್ಚಿದಾನಂದ ಅವರು ವಸ್ತ್ರಸಂಹಿತೆಯನ್ನು ದೇಶದ ಯಾವುದೇ ದೇವಾಲಯಗಳಲ್ಲಿ ಪಾಲಿಸಬಾರದು ಇದನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದರು. ಪುರುಷರು, ಜನಿವಾರ ಧರಿಸಿದ್ದಾರೆಯೇ ಎನ್ನುವುದನ್ನು ಪರೀಕ್ಷಿಸಲು ಈ ಪದ್ದತಿಯನ್ನು ಜಾರಿಗೆ ತರಲಾಗಿತ್ತು ಎಂದು ಅವರು ಹೇಳಿದ್ದರು.
SNDP ಸಂಯುಕ್ತ ಸಮರ ಸಮಿತಿಯು ಕೇರಳದಲ್ಲಿ ಸಕ್ರಿಯವಾಗಿರುವ ಒಂದು ಸಂಘಟನೆಯಾಗಿದೆ. ಎಳವ ಸಮುದಾಯವನ್ನು ಪ್ರತಿನಿಧಿಸುವ ಈ ಸಂಘಟನೆಯ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಈ ಸಂಸ್ಥೆ, ರಾಜ್ಯದ ವಿವಿಧ ದೇವಾಲಯಗಳಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದೆ.

ಶಬರಿಮಲೆ ದೇವಾಲಯ, ಮಂಡಲ ಮತ್ತು ಮಕರವಿಳಕ್ಕು ಸೀಸನ್ ನಲ್ಲಿ ಭಾರೀ ಆದಾಯವನ್ನು ಗಳಿಸಿದರೆ. ಭಕ್ತರ ಅನುಕೂಲಕ್ಕಾಗಿ ಸಾಕಷ್ಟು ಕ್ರಮಗಳನ್ನು ಕೇರಳ ಸರ್ಕಾರವೂ ಈ ಬಾರಿ ಮಾಡಿತ್ತು. ಕಳೆದ ಐದು ವರ್ಷಕ್ಕೆ ಹೋಲಿಸಿದರೆ, ದೇವಾಲಯದ ಆದಾಯವು 86 ಕೋಟಿ ಹೆಚ್ಚಿನ ಗಳಿಕೆಯನ್ನು ಕಂಡಿದೆ.
ಸಂಯುಕ್ತ ಸಮರ ಸಮಿತಿಯ ಪ್ರತಿಭಟನೆಯು, ರಾಜ್ಯದ ದೇವಾಲಯಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುವ ಡ್ರೆಸ್ ಕೋಡ್ ಅನ್ನು ಹಿಂದಕ್ಕೆ ಪಡೆಯಬೇಕೇ ಎನ್ನುವ ಚರ್ಚೆಗೆ ನಾಂದಿ ಹಾಡಿದೆ. ಜೊತೆಗೆ, ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಪದ್ದತಿಗೆ ಬ್ರೇಕ್ ಹಾಕುವುದು ಎಷ್ಟು ಸರಿ ಎನ್ನುವ ಕೂಗೂ ಜೋರಾಗಿದೆ.


Spread the love
Share:

administrator

Leave a Reply

Your email address will not be published. Required fields are marked *