ಅಂತರ್ಜಾತಿ ವಿವಾಹಕ್ಕೆ ವಿರೋಧ: ಮಗಳಿಗೂ ಅಳಿಯನಿಗೂ ಮಾವನಿಂದ ಚಾಕು ಹಲ್ಲೆ

ಕಾರವಾರ : ಮಾವನೇ ಅಳಿಯ ಮತ್ತು ಮಗಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಶಿರಸಿ ತಾಲೂಕಿನ ಬದನಗೋಡ ಪಂಚಾಯತ ರಂಗಾಪುರದಲ್ಲಿ ನಡೆದಿದೆ. ಅಂತರ್ಜಾತಿ ವಿವಾಹ ಕಾರಣವಾಗಿ ಸ್ವಂತ ಮಗಳು ಹಾಗೂ ಅಳಿಯನ ಮೇಲೆ ಶಂಕರ್ ಕಮ್ಮಾರ್ ಎಂಬಾತ ಚಾಕು ಹಾಕಿದ ಘಟನೆ ನಡೆದಿದೆ. ನಂತರ ಶಂಕರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ .
ಮಗಳು ಹಾಗೂ ಅಳಿಯ ಮನೋಜ ಕಮಾಟಿ ಎಂಬುವರರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅದೇ ಸರ್ಕಾರಿ ಆಸ್ಪತ್ರೆಗೆ ಶಂಕರ್ ಕಮ್ಮಾರ ಸಹ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಪಿಐ ಶಂಕರ ವರ್ಮಾ ಸ್ಥಳಕ್ಕೆ ಭೇಟಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಡಿವೈಎಸ್ಪಿ ಗಣೇಶ್ ತನಿಖೆಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.