ಅಂಬೇಡ್ಕರ್ ಮತ್ತು ಜೈ ಭೀಮ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್: ಕೇಸ್ ದಾಖಲು

ದಾವಣಗೆರೆ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದಕ್ಕೆ ಸಂಬಂಧಿಸಿದಂತೆ ಚನ್ನಗಿರಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಫೆಬ್ರವರಿ 21ರಂದು ಚನ್ನಗಿರಿ ಟೌನ್ ನ ವಾಸಿಯಾದ ಕುಬೇಂದ್ರಸ್ವಾಮಿ ಎಂಬುವವರು ಚನ್ನಗಿರಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರು.
ಫೆ. 1ರಿಂದ 21ರ ಮಧ್ಯದ ಅವಧಿಯಲ್ಲಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ನ thekingofkarnataka ಹಾಗೂ dj_troll ಎಂಬ ಖಾತೆಗಳಲ್ಲಿ ಯಾರೋ ಐಡಿ ಬಳಕೆದಾರರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಸಂಬಂಧಿಸಿದಂತೆ ಅವರ ಜೀವನ ಶೈಲಿಯನ್ನು ಅವರ ಉನ್ನತ ದರ್ಜೆಯ ಡಿಗ್ರಿಗಳನ್ನು, ಮೀಸಲಾತಿಯ ಬಗ್ಗೆ ಮತ್ತು ಜೈ ಭೀಮ್ ಎನ್ನುವ ಪದದ ಬಗ್ಗೆ ಅತೀ ಕೆಟ್ಟದಾಗಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಆದ್ದರಿಂದ ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಭಿಮಾನಿಗಳಲ್ಲಿಯೂ ಅನುಯಾಯಿಗಳಲ್ಲಿಯೂ ಮತ್ತು ಭಾರತೀಯರಿಗೆ ಮಾನಸಿಕವಾಗಿ ಧಕ್ಕೆ ಉಂಟಾಗಿರುತ್ತದೆ.