ರಸ್ತೆ ಇಲ್ಲದ ಗ್ರಾಮಕ್ಕೆ 10 ವರ್ಷಗಳಿಂದ ಕನ್ಯೆ ಕೊಡ್ತಿಲ್ಲ-ಯುವಕರ ವೇದನೆ

ಉತ್ತರ ಕನ್ನಡ: ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದಿದ್ದಕ್ಕೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಚ್ಚಳ್ಳಿ ಊರಿನ ಯುವಕರಿಗೆ ಕನ್ಯೆ ಕೊಡುತ್ತಿಲ್ಲ. ದಟ್ಟ ಕಾಡಿನ ಮಧ್ಯದಲ್ಲೇ ಸುಮಾರು 4 ಕಿಮೀ ಬಂಡೆಕಲ್ಲು ಮತ್ತು ಮಣ್ಣಿನ ರಸ್ತೆಯಲ್ಲೇ ನಡೆದುಕೊಂಡು ಈ ಗ್ರಾಮಕ್ಕೆ ಹೋಗಬೇಕು.


ಹೀಗಾಗಿ, ಈ ಗ್ರಾಮದ ಯುವಕರಿಗೆ ಕಳೆದ 10 ವರ್ಷಗಳಿಂದ ಯಾರೂ ಕನ್ಯೆ ಕೊಡುತ್ತಿಲ್ಲ. ಅಲ್ಲದೆ, ಗ್ರಾಮದಲ್ಲಿ ಯಾರಾದರೂ ರೋಗದಿಂದ ಬಳಲುತ್ತಿದ್ದರೆ ಅವರನ್ನು ಜೋಳಗೆಯಲ್ಲಿ ಹೆಗಲ ಮೇಲೆ ಹೊತ್ತೊಯ್ಯವ ದುಸ್ಥಿತಿ ಇದೆ.

ಇನ್ನೂವರೆಗೂ ಕಟ್ಟಿಗೆಗೆ ಕಂಬಳ ಕಟ್ಟಿ ಜೊಳಿಗೆಯಲ್ಲಿ ರೋಗಿಯನ್ನು ಹೊತ್ತೊಯ್ಯುತ್ತಿದ್ದಾರೆ. ಇನ್ನು, ಮಚ್ಚಳ್ಳಿ ಗ್ರಾಮದವರೆಗೂ ಸರ್ಕಾರದ ಯಾವುದೇ ಮೂಲಭೂತ ಸೌಕರ್ಯ ತಲುಪಿಲ್ಲ. ರಸ್ತೆ, ಆಸ್ಪತ್ರೆ, ಶಾಲೆ ಸೇರಿದಂತೆ ಯಾವುದೇ ಕನಿಷ್ಟ ಮೂಲಭೂತ ಸೌಕರ್ಯ ಕೂಡ ಈ ಗ್ರಾಮಕ್ಕೆ ದೊರೆತಿಲ್ಲ.
