ನಿತ್ಯಾನಂದ ಸ್ವಾಮಿ ನಿಧನ: ಶಂಕೆಗಳ ಮಧ್ಯೆ ವೈರಲ್ ಸುದ್ದಿ

ನವದೆಹಲಿ: ಭಾರತದಿಂದ 2019ರಲ್ಲಿ ಪಲಾಯನಗೈದು ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಎಂಬ ಸಾರ್ವಭೌಮ ರಾಷ್ಟ್ರ ಸ್ಥಾಪಿಸಿರುವುದಾಗಿ ಘೋಷಿಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ನಿಧನ ಹೊಂದಿದ್ದಾನೆ ಎನ್ನುವ ನಿಧನದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸ್ವಯಂ ಘೋಷಿತ ಆಧ್ಯಾತ್ಮಿಕ ಗುರು ನಿತ್ಯಾನಂದ ಸ್ವಾಮಿಯವರ ನಿತ್ಯಾನಂದ ಎರಡು ದಿನಗಳ ಹಿಂದೆ ನಿಧನರಾದರು ಎಂದು ಅವರ ಸೋದರಳಿಯ ಸುಂದರೇಶ್ವರನ್ ವೀಡಿಯೊದಲ್ಲಿ ಬಹಿರಂಗಪಡಿಸಿದ್ದಾರೆ. ಅವರು ತಮ್ಮ ಜೀವನದುದ್ದಕ್ಕೂ ಹಿಂದೂ ಧರ್ಮಕ್ಕಾಗಿ ಶ್ರಮಿಸಿದರು, ಸ್ಮರಿಸಿದರು. ನಿತ್ಯಾನಂದರು ತಮ್ಮ ಆಧ್ಯಾತ್ಮಿಕ ಸಂದೇಶಗಳಿಂದ ಅನೇಕ ಭಕ್ತರ ಮೆಚ್ಚುಗೆಯನ್ನು ಗಳಿಸಿದರು, ಇಂದು ನಮ್ಮನ್ನು ಅಗಲಿದ್ದಾರೆ ಎನ್ನಲಾಗಿದೆ. ಈ ಕುರಿತಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಸಾವಿನ ಕುರಿತಾಗಿ ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲ.
ನಿತ್ಯಾನಂದ ಕೆಲವು ದಿನಗಳ ಹಿಂದೆ, ಅವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಕೋಮಾದಲ್ಲಿದ್ದಾರೆ ಎಂಬ ವರದಿಗಳು ಬಂದಿದ್ದವು.. ಆದರೆ ಅವರು ಈ ವದಂತಿಗಳಿಗೆ ಅಂತ್ಯ ಹಾಡಲು ವೀಡಿಯೊ ಮೂಲಕ ಉಪನ್ಯಾಸಗಳನ್ನು ನೀಡಲು ಪ್ರಾರಂಭಿಸಿದರು. ಆದರೆ, ಈಗ ಅವರು ಮತ್ತೆ ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ವಿವಿಧ ಮೊಕದ್ದಮೆಗಳಿಂದ ತಪ್ಪಿಸಿಕೊಳ್ಳಲು ನಿತ್ಯಾನಂದ ಈ ರೀತಿ ಸುಳ್ಳು ಮಾಹಿತಿಯನ್ನು ಹರಡಿರಬಹುದು ಎಂದು ಹೇಳಲಾಗುತ್ತಿದೆ.
ನಿತ್ಯಾನಂದ ಸ್ವಾಮಿ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಜನಿಸಿದರು. ಅದಾದ ನಂತರ, ಅವರು ಕರ್ನಾಟಕದ ಬೀದರ್ಗೆ ಸ್ಥಳಾಂತರಗೊಂಡರು. ಲೈಂಗಿಕತೆ ಮತ್ತು ವಂಚನೆ ಆರೋಪಗಳಿಗೆ ಸಂಬಂಧಿಸಿದ ವಿವಿಧ ಪ್ರಕರಣಗಳಿಂದಾಗಿ ನಿತ್ಯಾನಂದ 2019 ರಲ್ಲಿ ಭಾರತದಿಂದ ಪಲಾಯನ ಮಾಡಿದ ನಂತರ, ಅವರು ಹೊಸ ದೇಶವನ್ನು ರಚಿಸಿರುವುದಾಗಿ ಘೋಷಿಸಿದ. ಅದಕ್ಕೆ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಶ್” ಎಂದು ಹೆಸರಿಸಲಾಯಿತು.
ಈ ದೇಶ ಎಲ್ಲಿದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಕೆಲವರು ಇದು ಈಕ್ವೆಡಾರ್ ಬಳಿಯ ದ್ವೀಪ ಎಂದು ಹೇಳಿದರೆ, ಇನ್ನು ಕೆಲವರು ಇದು ನಿತ್ಯಾನಂದನ ಒಂದು ಕಲ್ಪನೆ ಎಂದು ಹೇಳುತ್ತಾರೆ. ಅಂತಾರಾಷ್ಟ್ರೀಯವಾಗಿ ಯಾವುದೇ ದೇಶ ಅಥವಾ ಸಂಸ್ಥೆ ಕೈಲಾಸವನ್ನು ಗುರುತಿಸುವುದಿಲ್ಲ.
ನಿತ್ಯಾನಂದನ ಅನುಯಾಯಿಗಳು 2023ರಲ್ಲಿ ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ್ದರು ಮತ್ತು ಹಿಂದೂ ವಿರೋಧಿ ಶಕ್ತಿಗಳು ತಮಗೆ ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿದರು. ಈ ಸಭೆಯು ಕೇವಲ ಸಾರ್ವಜನಿಕ ಕಾರ್ಯಕ್ರಮವಾಗಿದ್ದು, ಇದನ್ನು ಕೈಲಾಸದ ಅನುಮೋದನೆ ಎಂದು ಪರಿಗಣಿಸಬಾರದು ಎಂದು ವಿಶ್ವಸಂಸ್ಥೆ ಸ್ಪಷ್ಟಪಡಿಸಿದೆ. ವಿವಾದಗಳಿಂದಲೇ ದೀರ್ಘಕಾಲ ಸುದ್ದಿಯಲ್ಲಿರುವ ನಿತ್ಯಾನಂದ, ತಮ್ಮ ಕೊನೆಯ ದಿನಗಳನ್ನು ಎಲ್ಲಿ ಕಳೆದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈಗ ಅವರ ಸಾವಿನ ಸುದ್ದಿ ನಿಜವೇ? ಅಥವಾ ಇನ್ನೊಂದು ಸುಳ್ಳು ಸುದ್ದಿಯೇ ಎಂದು ತಿಳಿಯಬೇಕಿದೆ.
