Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಹಲ್ಗಾಮ್ ದಾಳಿಗೆ ಎನ್‌ಐಎ ತನಿಖೆ: ಚೀನಾದ ಸ್ಯಾಟಲೈಟ್ ಫೋನ್ ಕಳ್ಳಸಾಗಣೆ ಅನುಮಾನ

Spread the love

ನವದೆಹಲಿ:ಜಮ್ಮು-ಕಾಶ್ಮೀರದ ಪಹಲ್ಗಾಮ್​​​ನಲ್ಲಿ ಪಾಕ್ ಪೋಷಿತ ಉಗ್ರರು ನಡೆಸಿದ ಗುಂಡಿನ ದಾಳಿ ನಂತರ ಭಾರತವು ಉಗ್ರರ ಮತ್ತು ಪಾಕ್​​ಗೆ ತಕ್ಕ ಪಾಠ ಕಲಿಸುವುದಾಗಿ ಈಗಾಗಲೇ ಯುದ್ಧಕ್ಕೆ ಸರ್ವ ಸನ್ನದ್ಧವಾಗಿದೆ.
ಭಾರತದ ಸೇನಾ ವ್ಯವಸ್ಥೆ ಹೈ ಅಲರ್ಟ್​ ಆಗಿದ್ದು, ಪಾಕ್​​​ ಮೇಲೆ ಯಾವಾಗ ಬೇಕಾದರೂ ದಾಳಿ ಮಾಡಿ ಪ್ರತೀಕಾರ ತೀರಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

ಭಾರತ-ಪಾಕ್ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣವಾಗಿರುವ ಬೆನ್ನಲ್ಲೇ ಹೆದರಿರುವ ಪಾಕ್​ ನ​​​​​​​ ಕೆಲ ಸಚಿವರು ಮಾತ್ರವಲ್ಲ ಖದ್ದು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಸಹ ತಮ್ಮ-ತಮ್ಮ ಕುಟುಂಬದವರನ್ನು ವಿದೇಶಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಭಾರತ ತಮ್ಮನ್ನೆಲ್ಲಾ ಉಡೀಸ್ ಮಾಡಬಹುದು ಎಂದು ಹೆದರಿಕೊಂಡಿರುವ ಪಾಕ್​​​​ನ ಪ್ರಮುಖ ನಾಯಕರು ಒಬ್ಬೊಬ್ಬರೇ ಪರಾರಿಯಾಗುತ್ತಿದ್ದಾರೆ. ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಸಹ ತನ್ನ ಕುಟುಂಬವನ್ನು ಸೌದಿ ಅರೇಬಿಯಾಗೆ ಕಳುಹಿಸಿದರೆ, ಭುಟ್ಟೋ ಜರ್ದಾರಿ ಕೆನಡಾಗೆ ಪಲಾಯಾನ ಮಾಡಿದ್ದಾನೆ ಎಂತಲೂ ಹೇಳಲಾಗುತ್ತಿದೆ. ಸದ್ಯ ನಾಪತ್ತೆಯಾಗಿರುವ ಅಸಿಮ್ ಮುನೀರ್​​ ರಾವಲ್ಪಿಂಡಿಯ ಬಂಕರ್‌ನಲ್ಲಿ ಅಡಗಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಸಿಮ್​ ಮುನೀರ್​​​​ಗೂ ಭಾರತಕ್ಕೂ ಏನು ನಂಟು?

ಕೆಲದಿನಗಳ ಹಿಂದೆಯಷ್ಟೇ ಅಸಿಮ್​ ಕಾಶ್ಮೀರವು ಪಾಕ್​​​​ನ ಜೀವನಾಡಿ ಎಂದಿದ್ದ. ಈ ಹೇಳಿಕೆಯ ಕೆಲವೇ ದಿನಗಳಲ್ಲಿ ಪಹಲ್ಗಾಮ್​​​​ನಲ್ಲಿ ಉಗ್ರರ ದಾಳಿ ನಡೆದಿದೆ. ಇನ್ನು ಅಸಿಮ್​​​​​​​​​ಗೆ ಭಾರತಕ್ಕೆ ಏನು ನಂಟು ಎಂದು ನೋಡುವುದಾದರೆ, ಅಸಿಮ್ ಪೂರ್ವಜರು ಪಂಜಾಬ್​​​ನ ಜಲಂಧರ್​​​ನವರು 1947ರಲ್ಲಿ ಭಾರತದಿಂದ ಪಾಕ್​ ವಿಭಜನೆಯಾದಾಗ, ಆಗ ಅಸಿಮ್ ಕುಟುಂಬ ಪಾಕ್​​​ನ ರಾವಲ್ಪಿಂಡಿಲ್ಲಿಯೇ ನೆಲೆಸಿತು.


Spread the love
Share:

administrator

Leave a Reply

Your email address will not be published. Required fields are marked *