ಪಹಲ್ಗಾಮ್ ದಾಳಿಗೆ ಎನ್ಐಎ ತನಿಖೆ: ಚೀನಾದ ಸ್ಯಾಟಲೈಟ್ ಫೋನ್ ಕಳ್ಳಸಾಗಣೆ ಅನುಮಾನ

ನವದೆಹಲಿ:ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕ್ ಪೋಷಿತ ಉಗ್ರರು ನಡೆಸಿದ ಗುಂಡಿನ ದಾಳಿ ನಂತರ ಭಾರತವು ಉಗ್ರರ ಮತ್ತು ಪಾಕ್ಗೆ ತಕ್ಕ ಪಾಠ ಕಲಿಸುವುದಾಗಿ ಈಗಾಗಲೇ ಯುದ್ಧಕ್ಕೆ ಸರ್ವ ಸನ್ನದ್ಧವಾಗಿದೆ.
ಭಾರತದ ಸೇನಾ ವ್ಯವಸ್ಥೆ ಹೈ ಅಲರ್ಟ್ ಆಗಿದ್ದು, ಪಾಕ್ ಮೇಲೆ ಯಾವಾಗ ಬೇಕಾದರೂ ದಾಳಿ ಮಾಡಿ ಪ್ರತೀಕಾರ ತೀರಿಸಿಕೊಳ್ಳಬಹುದು ಎನ್ನಲಾಗುತ್ತಿದೆ.
ಭಾರತ-ಪಾಕ್ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣವಾಗಿರುವ ಬೆನ್ನಲ್ಲೇ ಹೆದರಿರುವ ಪಾಕ್ ನ ಕೆಲ ಸಚಿವರು ಮಾತ್ರವಲ್ಲ ಖದ್ದು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಸಹ ತಮ್ಮ-ತಮ್ಮ ಕುಟುಂಬದವರನ್ನು ವಿದೇಶಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾರತ ತಮ್ಮನ್ನೆಲ್ಲಾ ಉಡೀಸ್ ಮಾಡಬಹುದು ಎಂದು ಹೆದರಿಕೊಂಡಿರುವ ಪಾಕ್ನ ಪ್ರಮುಖ ನಾಯಕರು ಒಬ್ಬೊಬ್ಬರೇ ಪರಾರಿಯಾಗುತ್ತಿದ್ದಾರೆ. ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಸಹ ತನ್ನ ಕುಟುಂಬವನ್ನು ಸೌದಿ ಅರೇಬಿಯಾಗೆ ಕಳುಹಿಸಿದರೆ, ಭುಟ್ಟೋ ಜರ್ದಾರಿ ಕೆನಡಾಗೆ ಪಲಾಯಾನ ಮಾಡಿದ್ದಾನೆ ಎಂತಲೂ ಹೇಳಲಾಗುತ್ತಿದೆ. ಸದ್ಯ ನಾಪತ್ತೆಯಾಗಿರುವ ಅಸಿಮ್ ಮುನೀರ್ ರಾವಲ್ಪಿಂಡಿಯ ಬಂಕರ್ನಲ್ಲಿ ಅಡಗಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಸಿಮ್ ಮುನೀರ್ಗೂ ಭಾರತಕ್ಕೂ ಏನು ನಂಟು?
ಕೆಲದಿನಗಳ ಹಿಂದೆಯಷ್ಟೇ ಅಸಿಮ್ ಕಾಶ್ಮೀರವು ಪಾಕ್ನ ಜೀವನಾಡಿ ಎಂದಿದ್ದ. ಈ ಹೇಳಿಕೆಯ ಕೆಲವೇ ದಿನಗಳಲ್ಲಿ ಪಹಲ್ಗಾಮ್ನಲ್ಲಿ ಉಗ್ರರ ದಾಳಿ ನಡೆದಿದೆ. ಇನ್ನು ಅಸಿಮ್ಗೆ ಭಾರತಕ್ಕೆ ಏನು ನಂಟು ಎಂದು ನೋಡುವುದಾದರೆ, ಅಸಿಮ್ ಪೂರ್ವಜರು ಪಂಜಾಬ್ನ ಜಲಂಧರ್ನವರು 1947ರಲ್ಲಿ ಭಾರತದಿಂದ ಪಾಕ್ ವಿಭಜನೆಯಾದಾಗ, ಆಗ ಅಸಿಮ್ ಕುಟುಂಬ ಪಾಕ್ನ ರಾವಲ್ಪಿಂಡಿಲ್ಲಿಯೇ ನೆಲೆಸಿತು.