ಕ್ಷುಲ್ಲಕ ಕಾರಣಕ್ಕೆ ಮನನೊಂದು ನವವಿವಾಹಿತೆ ಆತ್ಮಹತ್ಯೆ

ಬೆಂಗಳೂರು : ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕ್ಷುಲ್ಲಕ ವಿಚಾರಕ್ಕೆ ಮನನೊಂದು ಐಶ್ವರ್ಯ (22) ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಶಾಮ ಭಟ್ಟರ ಪಾಳ್ಯದಲ್ಲಿ ನಡೆದಿದೆ


ಏಳು ತಿಂಗಳ ಹಿಂದೆ ಲಕ್ಷ್ಮಿ ನಾರಾಯಣನ ಐಶ್ವರ್ಯ ಮದುವೆಯಾಗಿದ್ದಳು. ತಂಗಿಯ ಬರ್ತಡೇಗೆ ಕರೆದೋಯ್ಯಲಿಲ್ಲ ಎಂದು ಐಶ್ವರ್ಯ ನೊಂದಿದ್ದಾಳೆ . ಈಗ ಹಣವಿಲ್ಲ ಮುಂದಿನ ವರ್ಷ ಕರೆದುಕೊಂಡು ಹೋಗುತ್ತೇನೆ ಅಂತ ಪತಿ ಹೇಳಿದ್ದರು ಇದೇ ವಿಚಾರಕ್ಕೆ ಮನನೊಂದು ಐಶ್ವರ್ಯ ಆತ್ಮಹತ್ಯೆ ಶರಣಾಗಿದ್ದಾಳೆ.ಸ್ಥಳಕ್ಕೆ ಮಾದನಾಯಕನಹಳ್ಳಿ ಪೋಲಿಸಿರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.