Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೊಸ ವೇತನ ನಿಯಮದಿಂದ ಹೋಟೆಲ್ ಉದ್ಯಮದ ಮೇಲೆ ಭಾರೀ ಒತ್ತಡ: ಆಹಾರದ ಬೆಲೆ ಏರಿಕೆಯಾಗುವ ಲಕ್ಷಣ

Spread the love

ಬೆಂಗಳೂರು : ರಾಜ್ಯ ಸರ್ಕಾರದ ಕನಿಷ್ಠ ವೇತನ ವೆಚ್ಚಳದ ಪ್ರಸ್ತಾವನೆಯು ಕಾರ್ಮಿಕರ ಮುಖದ ಮೇಲೆ ನಗು ತರಿಸಿರಬಹುದು. ಆದರೆ ಈ ಪರಿಯ ವೇತನ ಹೆಚ್ಚಳವು ಬೇರೆ ವಲಯಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಅದರಲ್ಲೂ ಹೋಟೆಲ್ ಉದ್ಯಮಕ್ಕೆ ಇದು ದೊಡ್ಡ ಮಟ್ಟದ ಶಾಕ್ ನೀಡುತ್ತದೆ ಎಂದು ಹೋಟೆಲ್ ಮಾಲೀಕರ ಸಂಘ, ಆತಂಕ ವ್ಯಕ್ತಪಡಿಸಿದೆ.

ಏಪ್ರಿಲ್ 11ರಂದು ಹೊರಬಂದ ಕರಡು ಅಧಿಸೂಚನೆಯ ಪ್ರಕಾರ, ವಿವಿಧ ವರ್ಗದ ಕಾರ್ಮಿಕರಿಗೆ ಶೇಕಡಾ 50ರಷ್ಟು ವೇತನ ಹೆಚ್ಚಳ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಆಹಾರ ಬೆಲೆಗಳಲ್ಲಿ ಶೇಕಡಾ 20-30ರಷ್ಟು ಏರಿಕೆಯಾಗಬಹುದು. ಅದನ್ನು ತಪ್ಪಿಸಬಹುದಾದ ಪರಿಸ್ಥಿತಿ ಕಂಡುಬಂದಿಲ್ಲ ಎಂದು ಹೋಟೆಲ್ ಮಾಲೀಕರು ಎಚ್ಚರಿಕೆ ನೀಡಿದ್ದಾರೆ. ಇದರಿಂದ ನೇರವಾಗಿ ಸಾಮಾನ್ಯ ವರ್ಗದವರಿಗೇ ಬಿಸಿ ತಟ್ಟುವಂತಾಗಿದೆ.

ಕರಡು ಅಧಿಸೂಚನೆಗೆ ತೀವ್ರ ವಿರೋಧ:

ಕರಡು ಅಧಿಸೂಚನೆಗೆ ತವ್ರ ವಿರೋಧ ಕೇಳಿಬರುತ್ತಿದೆ. ಅದರಲ್ಲೂ ಮೂರು ಪ್ರಮುಖ ವಲಯಗಳು ಎಲ್ಲಾ ನಾಲ್ಕು ವರ್ಗಗಳ ಕಾರ್ಮಿಕನ್ನು..ಅಂದರೆ, ಹೆಚ್ಚು ಕೌಶಲ್ಯಪೂರ್ಣ, ಕೌಶಲ್ಯಪೂರ್ಣ, ಅರೆ-ಕೌಶಲ್ಯಪೂರ್ಣ ಹಾಗೂ ಕೌಶಲ್ಯರಹಿತ ಕಾರ್ಮಿಕರನ್ನು ಒಳಗೊಂಡಿದೆ. ಕೈಗಾರಿಕಾ ಕ್ಷೇತ್ರಗಳು ಈಗ ತಮ್ಮ ಆಕ್ಷೇಪಣೆಗಳನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ.

ಅಡುಗೆಯವರಿಗಲ್ಲ, ಸಹಾಯಕರಿಗೆ ತೊಂದರೆ:

ಹೋಟೆಲ್ ಮಾಲೀಕರ ಪ್ರಕಾರ, ಅಡುಗೆಯವರೆ, ದೋಸೆ ಮಾಸ್ಟರ್‌, ಕಾಫಿ ತಯಾರಕರಂತಹ ಉದ್ಯೋಗಿಗಳಿಗೆ ಈಗಾಗಲೇ ಕನಿಷ್ಠ ವೇತನಕ್ಕಿಂತ ಹೆಚ್ಚು ಸಂಬಳ ನೀಡಲಾಗುತ್ತಿದೆ. ಆದರೆ, ತೊಳೆಯುವ ಹುಡುಗರು, ಸಹಾಯಕರು, ಹೌಸ್‌ಕೀಪಿಂಗ್ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಸೇವೆಮೂಲಕ ಪೂರೈಸುವ ಕಾರ್ಮಿಕರೇ ಕೆಲಸದ ಬಹುಪಾಲು ಹೊಂದಿದ್ದು, ಈ ವರ್ಗಗಳಿಗೆ ಶೇಕಡಾ 50ರಷ್ಟು ತನಕ ವೇತನ ಹೆಚ್ಚಳ ಪ್ರಸ್ತಾವಿಸಲಾಗಿದೆ. ಬೆಂಗಳೂರು ಹೋಟೆಲ್‌ಗಳ ಸಂಸ್ಥೆಯ ಅಂಕಿಯ ಪ್ರಕಾರ, ಕೌಶಲ್ಯರಹಿತ ಕಾರ್ಮಿಕರಿಗೆ ಶೇಕಡಾ 48% ಹಾಗೂ ಅರೆ-ಕೌಶಲ್ಯಪೂರ್ಣ ಕೆಲಸಗಾರರಿಗೆ ಶೇಕಡಾ 52% ವರೆಗೆ ವೇತನ ಏರಿಕೆ ಸಾಧ್ಯವಿದೆ.

ಹೋಟೆಲ್ ಉದ್ಯಮದ 70% ಸಿಬ್ಬಂದಿಗೆ ನೇರ ಪರಿಣಾಮ:

ಬೆಂಗಳೂರು ಹೋಟೆಲ್‌ಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಮಾತನಾಡುತ್ತಾ, ಹೆಚ್ಚು ಕೌಶಲ್ಯಪೂರ್ಣ ಕಾರ್ಮಿಕರಿಗೆ ಈಗಾಗಲೇ 40,000 ರೂ. ವೇತನ ನೀಡಲಾಗುತ್ತಿದೆ. ಈ ಪ್ರಸ್ತಾಪದ ಪರಿಣಾಮ ಅವರೆಲ್ಲರಿಗಿಂತ ಕಡಿಮೆಯೇ ಇದೆ. ಆದರೆ, ಶೇಕಡಾ 70ರಷ್ಟು ಉದ್ಯೋಗಿಗಳನ್ನು ಹೊಂದಿರುವ ಅರೆ-ಕೌಶಲ್ಯಪೂರ್ಣ ಮತ್ತು ಕೌಶಲ್ಯರಹಿತ ವರ್ಗಗಳಿಗೆ ಇದು ತುಂಬಾ ಭಾರೀ ಹೊರೆ ಎಂದು ಹೇಳಿದರು.

ಸಣ್ಣ ಹೋಟೆಲ್‌ಗಳ ಭವಿಷ್ಯ ಬಡವಾಗುವ ಭೀತಿ:

ಕರ್ನಾಟಕ ರಾಜ್ಯ ಹೋಟೆಲ್ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ, “ಬೆಲೆ ಏರಿಕೆಯಾಗುತ್ತಿರುವ ಹಾಲು, ಕಾಫಿ ಪುಡಿ, ಅಕ್ಕಿ, ದಿನಸಿ ಮೊದಲಾದ ವೆಚ್ಚಗಳ ನಡುವೆ ವೇತನ ಹೆಚ್ಚಳದ ಹೊರೆ ನಮ್ಮ ಪ್ರಗತಿಯ ಮೇಲೆ ಹೊಡೆತ ನೀಡಲಿದೆ. ಇದರಿಂದಾಗಿ ನಾವು ಶೇಕಡಾ 20-30ರಷ್ಟು ಆಹಾರದ ಬೆಲೆಯನ್ನು ಹೆಚ್ಚಿಸಲು ಒತ್ತಾಯಿತವಾಗುತ್ತೇವೆ ಎಂದರು. ಸಣ್ಣ ಹೋಟೆಲ್‌ಗಳು ಈಗಾಗಲೇ ಲಾಭಪಡೆಯದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ವೇತನ ಹೆಚ್ಚಳದ ಹೊರೆಯನ್ನು ಹೊರುವ ಸಾಮರ್ಥ್ಯವಿಲ್ಲ. ದೊಡ್ಡ ಹೋಟೆಲ್‌ಗಳು ಬೆಲೆ ಏರಿಸಿ ನಿರಾಳವಾಗಬಹುದು, ಆದರೆ ಮಧ್ಯಮ ವರ್ಗಕ್ಕೆ ಕೈಗೆಟುಕುವ ಆಯ್ಕೆಯಾದ ದರ್ಶಿನಿ ರೀತಿಯ ಸಣ್ಣ ಹೋಟೆಲ್‌ಗಳು ಗ್ರಾಹಕರನ್ನು ಕಳೆದುಕೊಳ್ಳಬಹುದು ಎಂಬ ಆತಂಕವಿದೆ. ಕೆಲವರು ಈಗಲೇ ಬೀದಿ ಆಹಾರದತ್ತ ಮುಖಮಾಡುತ್ತಿದ್ದಾರೆ. ಇದರೊಂದಿಗೆ, ಹೋಟೆಲ್ ಉದ್ಯಮಕ್ಕೆ ಸರ್ಕಾರದಿಂದ ಬೆಂಬಲ ಪ್ಯಾಕೇಜ್ ಅಗತ್ಯವಿದೆ ಎಂಬುದು ಉದ್ಯಮಿಗಳ ಒತ್ತಾಯವಾಗಿದೆ.

ಕೆಲ ಉದ್ಯಮಿಗಳು ಇತ್ತೀಚಿನ ವೇತನ ಪ್ರಸ್ತಾವನೆಯ ಲೆಕ್ಕಾಚಾರವನ್ನೂ ಪ್ರಶ್ನಿಸುತ್ತಿದ್ದಾರೆ. ಏಕೆಂದರೆ, ಕೆಲವರೆಗೂ ಈ ವೇತನ ಏರಿಕೆ ಇಎಸ್‌ಐ (ನೌಕರ ರಾಜ್ಯ ವಿಮಾ) ಯುಧ್ಯೋಗಿಗಳ ಗರಿಷ್ಠ ಮಿತಿಗಿಂತ ಹೆಚ್ಚಾಗಬಹುದು. ಇದರಿಂದ ಈ ಕಾರ್ಮಿಕರು ಆರೋಗ್ಯವಿಮೆ ಸೌಲಭ್ಯವನ್ನು ಕಳೆದುಕೊಳ್ಳಬಹುದು ಎಂಬ ಆತಂಕವೂ ಇದೆ. ಇಎಸ್‌ಐ ಗರಿಷ್ಠ ಮಿತಿಯನ್ನು ಕೂಡ ಪರಿಷ್ಕರಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೇ ಕಾರ್ಮಿಕರ ದೃಷ್ಟಿಯಿಂದ ಈ ವೇತನ ಪರಿಷ್ಕರಣೆ ನಿರೀಕ್ಷಿತ ಬೆಳವಣಿಗೆ. ಆದರೂ, ದರ್ಶಿನಿ ಹೋಟೆಲ್‌ಗಳು ಕ್ಲೀನರ್‌ಗಳಿಗೆ 23,000 ರೂಪಾಯಿ ಪಾವತಿಸುವುದು ಕಷ್ಟಕರ. ಸ್ಟಾರ್ ಹೋಟೆಲ್‌ಗಳಿಗೆ ಇದು ದೊಡ್ಡ ಬಾಧೆಯಾಗದು. ಹೀಗಾಗಿ ಹೋಟೆಲ್ ಉದ್ಯಮದೊಳಗೆ ವ್ಯತ್ಯಾಸದ ಆಧಾರದ ಮೇಲೆ ಗ್ರೇಡಿಂಗ್ ವ್ಯವಸ್ಥೆ ತರಬೇಕು ಎನ್ನಲಾಗಿದೆ.

ಇಲ್ಲಿಯವರೆಗೆ ಆತಿಥ್ಯ ಕ್ಷೇತ್ರವು ಕೋವಿಡ್‌ನಿಂದ ಸ್ವಲ್ಪತೊಂದರೆಯಿಂದ ಹೊರಬಂದಿದ್ದರೂ, ವೇತನ ಹೆಚ್ಚಳದ ಈ ಬಂಡವಾಳ ಒತ್ತಡವು ಪುನಃ ಮಾರುಕಟ್ಟೆ ಸ್ಥಿತಿಗತಿಗಳನ್ನು ಕುಗ್ಗಿಸಬಹುದೆಂಬ ಭೀತಿ ಎದುರಾಗಿದೆ. ಬೃಹತ್ ಹೋಟೆಲ್ ಸಂಸ್ಥೆಗಳು ಈ ಪ್ರಸ್ತಾವಿತ ಶ್ರಮ ವೆಚ್ಚವನ್ನು ಬೇರೆಯಡೆ ಸರಿಸಬಹುದಾದರೂ, ದಿನಗೂಲಿ ನಂಬಿಕೊಂಡಿರುವ, ನಷ್ಟದ ಅಂಚಿನಲ್ಲಿ ನಿಂತಿರುವ ಸಣ್ಣ ಮತ್ತು ಮಧ್ಯಮ ಹೋಟೆಲ್‌ಗಳಿಗೆ ಇದು ತೀವ್ರ ಹೊರೆ.

ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆ ಹೇಗೆ ಎಳೆಯುವುದು ಎಂಬುದರ ಬಗ್ಗೆ ಬಹುತೇಕ ಹೋಟೆಲ್ ಮಾಲೀಕರಲ್ಲಿ ಇನ್ನೂ ಸ್ಪಷ್ಟತೆ ಇಲ್ಲ. ಕೆಲವು ಮಂದಿ ವೇತನ ಹೆಚ್ಚಳವನ್ನು ಹಿತಕರವಾಗಿ ಸ್ವೀಕರಿಸುತ್ತಿರುವುದಾದರೂ, ಸರ್ಕಾರ ಇದಕ್ಕೆ ಪರ್ಯಾಯವೊಂದನ್ನು ಅಥವಾ ಸಹಾಯ ಪ್ಯಾಕೇಜ್‌ನ್ನು ನೀಡದಿದ್ದರೆ, ಉದ್ಯಮದಲ್ಲಿ ಕೆಲಸದ ಅವಕಾಶಗಳ ಕಗ್ಗತ್ತಲಿಗೆ ಕಾರಣವಾಗಬಹುದು ಎಂಬ ಆತಂಕವೂ ಇದೆ.


Spread the love
Share:

administrator

Leave a Reply

Your email address will not be published. Required fields are marked *