Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಮೋ ಭಾರತ್ ಕರ್ನಾಟಕದಲ್ಲಿ ಸಂಚಾರ ಕ್ರಾಂತಿ ಆರಂಭಿಸಲ್ಲಿದೆಯಾ?

Spread the love

ಕರ್ನಾಟಕ ಜನರಿಗೆ ಮತ್ತೊಂದು ಗುಡ್‌ನ್ಯೂಸ್ ಸಮೀಪದಲ್ಲೇ ಇದೆ. ಅದೇನೆಂದರೆ ಭಾರತೀಯ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯಾದ, ‘ನಮೋ ಭಾರತ್’ ಈಗ ಕರ್ನಾಟಕಕ್ಕೂ ವಿಸ್ತರಿಸಲು ತಯಾರಿ ನಡೆಯುತ್ತಿದೆ. ಬೆಂಗಳೂರು ನಗರ ದಟ್ಟಣೆ ಹಾಗೂ ಉಪನಗರಗಳಿಗೆ ಸಂಪರ್ಕ ಸುಧಾರಿಸುವ ನಿಟ್ಟಿನಲ್ಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ (NCRTC) ಈ ಚಿಂತನೆ ನಡೆಸುತ್ತಿದೆ.

NCRTC ಪ್ರಸ್ತಾಪಿಸಿದ ನಾಲ್ಕು ಕಾರಿಡಾರ್‌ಗಳು ಬೆಂಗಳೂರಿನಿಂದ ಹುಟ್ಟುವ ಪ್ರಮುಖ ಮಾರ್ಗಗಳನ್ನು ಒಳಗೊಂಡಿದ್ದು, ಸಾರ್ವಜನಿಕ ಸಂಚಾರದ ಗುಣಮಟ್ಟವನ್ನುವಾಗಿ ಸುಧಾರಿಸಬಹುದು.

ಪ್ರಸ್ತಾವಿತ ನಾಮೋ ಭಾರತ್ ಮಾರ್ಗಗಳು:

ಬೆಂಗಳೂರು-ಹೊಸಕೋಟೆ-ಕೋಲಾರ (65 ಕಿಮೀ)

ಬೆಂಗಳೂರು-ಮೈಸೂರು (145 ಕಿಮೀ)

ಬೆಂಗಳೂರು-ತುಮಕೂರು (60 ಕಿಮೀ)

ಬೆಂಗಳೂರು-ಹೊಸೂರು-ಕೃಷ್ಣಗಿರಿ-ಧರ್ಮಪುರಿ (138 ಕಿಮೀ)

ಇವುಗಳಲ್ಲಿ ಕೊನೆಯ ಮಾರ್ಗ ತಮಿಳುನಾಡು ರಾಜ್ಯವನ್ನೂ ಸಂಪರ್ಕಿಸುತ್ತದೆ.

ತಾಂತ್ರಿಕ ವಿಶಿಷ್ಟತೆ ಮತ್ತು ಉದ್ದೇಶಗಳು:

ಇನ್ನು ಈ ‘ನಮೋ ಭಾರತ್’ ವಿಶೇಷತೆ ಏನೆಂದರೆ, ಇದು ಒಂದು ಗಂಟೆಗೆ 160 ಕಿಮೀ ಚಲಿಸುವ ರೈಲು ಆಗಿದೆ. ಇದೊಂದು ಆಧುನಿಕ RRTS ವ್ಯವಸ್ಥೆಯಾಗಿದ್ದು, ಪ್ರಾದೇಶಿಕ ನಗರಗಳನ್ನು ವೇಗವಾಗಿ ಸಂಪರ್ಕಿಸುವ ಮಹತ್ವದ ಸಂಚಾರ ಮಾರ್ಗವಾಗಿದೆ. NCRTC ಈ ಯೋಜನೆಯ ಮೊದಲ ಹಂತವನ್ನು ದೆಹಲಿ-ಮೀರತ್ ಮಾರ್ಗದಲ್ಲಿ ಅಕ್ಟೋಬರ್ 2023ರಲ್ಲಿ ಆರಂಭಿಸಿದೆ. 82 ಕಿಮೀ ದೂರದ ಈ ಮಾರ್ಗದಲ್ಲಿ ಈಗಾಗಲೇ 55 ಕಿಮೀ ಕಾರ್ಯನಿರ್ವಹಿಸುತ್ತಿದೆ.

NCRTC ನ ಪ್ರಸ್ತಾವ ಮತ್ತು ಕರ್ನಾಟಕ ಸರ್ಕಾರದ ಪ್ರತಿಕ್ರಿಯೆ:

ಕರ್ನಾಟಕ ಸರ್ಕಾರಕ್ಕೆ ಕಳುಹಿಸಿರುವ ಪತ್ರದಲ್ಲಿ NCRTC, ಬೆಂಗಳೂರು ಮೂಲದ ಕಾರಿಡಾರ್‌ಗಳ DPR (ವಿವರವಾದ ಯೋಜನಾ ವರದಿ) ತಯಾರಿಸಲು ಸಿದ್ಧವಿದೆ ಎಂದು ತಿಳಿಸಿದೆ. NCRTC ಅಧಿಕಾರಿಗಳು ಶೀಘ್ರದಲ್ಲೇ ಬೆಂಗಳೂರಿಗೆ ಭೇಟಿ ನೀಡಿ ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವನೆ ನೀಡಲಿದ್ದಾರೆ.

ಪತ್ರದಲ್ಲಿ NCRTC ಈ ಯೋಜನೆಗೆ ದೆಹಲಿ-ಮೀರತ್ ಮಾದರಿಯ ಹೂಡಿಕೆ ಮಾದರಿಯನ್ನು ಅನುಸರಿಸಬಹುದು ಎಂದಿದೆ: 60% ಹೂಡಿಕೆ ಬಹುಪಕ್ಷೀಯ ಸಂಸ್ಥೆಗಳಿಂದ, 20% ಭಾರತ ಸರ್ಕಾರದಿಂದ ಮತ್ತು 20% ರಾಜ್ಯ ಸರ್ಕಾರದಿಂದ ಎನ್ನಲಾಗಿದೆ.

ಆಧುನಿಕ ತಂತ್ರಜ್ಞಾನ ಸಂಯೋಜನೆ:

ಈ RRTS ವ್ಯವಸ್ಥೆ ಸುಧಾರಿತ ಸಿಗ್ನಲಿಂಗ್, ಎಲ್ಲ ಹವಾಮಾನಗಳಲ್ಲಿ ಸಂಚಾರ, ವಿಶೇಷ ವಿಅಡಕ್ಟ್/ಸುರಂಗಗಳು ಮತ್ತು ವೇಗದ ಪ್ಲಾಟ್‌ಫಾರ್ಮ್ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. NCRTC ಪತ್ರದಲ್ಲಿ “ಕರ್ನಾಟಕವು ತನ್ನ ಬಲವಾದ ಜಿಡಿಪಿ, ಕೈಗಾರಿಕಾ ಅಭಿವೃದ್ಧಿ, ಪ್ರವಾಸೋದ್ಯಮ ಶಕ್ತಿಯಿಂದ ನಮೋ ಭಾರತ್ ಯೋಜನೆಯಿಂದ ಹೆಚ್ಚು ಪ್ರಯೋಜನ ಪಡೆಯುತ್ತದೆ” ಎಂದು ನಂಬಿಕೆ ವ್ಯಕ್ತಪಡಿಸಲಾಗಿದೆ.

TOD ಮಾದರಿಯಲ್ಲಿ ಅಭಿವೃದ್ಧಿ:

NCRTC, ಈ ಕಾರಿಡಾರ್‌ಗಳ ಸುತ್ತಲೂ ಸಾರಿಗೆ ಆಧಾರಿತ ಅಭಿವೃದ್ಧಿ (TOD) ಮಾದರಿಯಲ್ಲಿ ಅಭಿವೃದ್ಧಿಯನ್ನು ನಡೆಸಲು ಸೂಚಿಸಿದೆ. ಈ ಮಾದರಿಯು ಉಪನಗರಗಳಲ್ಲಿ ಹತ್ತಿರದ ವಸತಿ, ವ್ಯಾಪಾರಿಕ ಸ್ಥಳಗಳು ಹಾಗೂ ಉದ್ಯೋಗ ಕೇಂದ್ರಗಳ ಸೃಷ್ಟಿಯನ್ನು ಉತ್ತೇಜಿಸುತ್ತದೆ. ಕೋಲಾರ, ಮೈಸೂರು, ತುಮಕೂರು, ಹೊಸೂರು ಮುಂತಾದ ನಗರಗಳಲ್ಲಿ ಈ ಯೋಜನೆಯಿಂದ ಆರ್ಥಿಕ ಚಟುವಟಿಕೆಗಳು ಉತ್ತೇಜಿತವಾಗಬಹುದು.

ಮೆಟ್ರೋ ಮತ್ತು ಉಪನಗರ ಯೋಜನೆಗಳ ಹಿನ್ನಲೆ:

ಇದಕ್ಕಿಂತ ಮುಂಚೆ BMRCL ಮಾದವರ-ತುಮಕೂರು, ಕೆಆರ್ ಪುರ-ದೇವನಹಳ್ಳಿ, ಚಲ್ಲಘಟ್ಟ-ಬಿಡದಿ, ಸಿಲ್ಕ್ ಇನ್‌ಸ್ಟಿಟ್ಯೂಟ್-ಹಾರೋಹಳ್ಳಿ ಮುಂತಾದ ಮಾರ್ಗಗಳ ಮೆಟ್ರೋ ವಿಸ್ತರಣೆಯ ಪ್ರಸ್ತಾಪ ಸಲ್ಲಿಸಿದ್ದೆ. ಇನ್ನು ತಮಿಳುನಾಡು ಸರ್ಕಾರ, ಬೊಮ್ಮಸಂದ್ರ-ಹೊಸೂರು 23 ಕಿಮೀ ಅಂತರರಾಜ್ಯ ಮೆಟ್ರೋ ಮಾರ್ಗದ ಅನುಮೋದನೆಗಾಗಿ ಒತ್ತಾಯಿಸುತ್ತಿದ್ದು, ಆದರೆ ಕರ್ನಾಟಕ ಸರ್ಕಾರ ವೆಚ್ಚದ ಭಾರದಿಂದ ಹಿಂಜರಿಯುತ್ತಿದೆ.

ಮೆಟ್ರೋ ರೈಲುಗಳು ಕಡಿಮೆ ಆಸನ ಸಾಮರ್ಥ್ಯ ಹಾಗೂ ಆಪ್ತ ನಿಲ್ದಾಣಗಳಿಂದ ಮಾತ್ರ ಗಮ್ಯಸ್ಥಾನಕ್ಕೆ ತಲುಪಬಲ್ಲದು. ಉಪನಗರಗಳಿಗೆ RRTS ಅಥವಾ ಉಪನಗರ ರೈಲು ಹೆಚ್ಚು ಕಾರ್ಯಕ್ಷಮವಾಗಬಹುದು ಎಂಬುದು ತಜ್ಞರ ಅಭಿಪ್ರಾಯ. ಆದರೆ, ರಾಜಕೀಯವಾಗಿ ಮೆಟ್ರೋ ಯೋಜನೆಗಳು ಹೆಚ್ಚು ಆದ್ಯತೆ ಪಡೆಯುತ್ತಿವೆ ಎಂಬ ಟೀಕೆಗಳೂ ಇವೆ.

ಕೆ-ರೈಡ್ ಹಾಗೂ NHSRCL ಯೋಜನೆಗಳು:

ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (K-RIDE) ಚಿಕ್ಕಬಳ್ಳಾಪುರ, ತುಮಕೂರು, ಹೊಸೂರು ಹಾಗೂ ಮಾಗಡಿ ಮಾರ್ಗಗಳಲ್ಲಿನ 452 ಕಿಮೀ ಉಪನಗರ ರೈಲು ಯೋಜನೆ ತಯಾರಿಸಿತ್ತು. ಆದರೆ ನೈಋತ್ಯ ರೈಲ್ವೆ ಇದನ್ನು ತಿರಸ್ಕರಿಸಿ ಈಗಾಗಲೇ ಅನುಮೋದಿತ 148 ಕಿಮೀ ಹಂತ-1 ಯೋಜನೆಗಳನ್ನೇ ಮುಂದುವರೆಸುವಂತೆ ಸೂಚಿಸಿದೆ.

ಇನ್ನೊಂದು ಮಹತ್ವದ ಪ್ರಸ್ತಾವನೆಯು ಚೆನ್ನೈ-ಮೈಸೂರು ನಡುವೆ 435 ಕಿಮೀ ಹೈ-ಸ್ಪೀಡ್ ರೈಲು ಮಾರ್ಗ, ಇದನ್ನು NHSRCL ಜಾರಿಗೆ ತರುತ್ತಿದ್ದು, 2051ರೊಳಗೆ ಪೂರ್ಣಗೊಳಿಸುವ ಗುರಿಯಿದೆ.

NCRTC ಪ್ರಸ್ತಾಪಿಸಿರುವ ಈ ನಾಮೋ ಭಾರತ್ ಕಾರಿಡಾರ್ ಯೋಜನೆಗಳು ಕರ್ನಾಟಕದ ಸಮಗ್ರ ಸಂಚಾರದ ಭವಿಷ್ಯವನ್ನು ಬದಲಾಯಿಸಬಹುದು. ಇದು ಬಿಗಿಯಾದ ಬೆಂಗಳೂರು ನಗರ ದತ್ತಣೆಯಿಂದ ಹೊರಬರಲು, ಉಪನಗರ ಪ್ರದೇಶಗಳಲ್ಲಿ ವಾಸ, ಉದ್ಯೋಗ ಹಾಗೂ ಕೈಗಾರಿಕಾ ಬೆಳವಣಿಗೆಗೆ ಅನುವು ಮಾಡಿಕೊಡಬಹುದು. ಯೋಜನೆಗಳು ಅನುಮೋದನೆ ಪಡೆಯುತ್ತಿದ್ದಂತೆ, ಕರ್ನಾಟಕ ದೇಶದಲ್ಲಿ ಹೈ-ಸ್ಪೀಡ್ ಪ್ರಾದೇಶಿಕ ರೈಲು ವ್ಯವಸ್ಥೆ ಜಾರಿಗೆ ತರುವ ಮೊದಲ ರಾಜ್ಯಗಳಲ್ಲಿ ಒಂದಾಗಲಿದೆ.


Spread the love
Share:

administrator

Leave a Reply

Your email address will not be published. Required fields are marked *