Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಂತೂರ್ ಜಂಕ್ಷನ್ ನಲ್ಲಿ ಟ್ರಾಫಿಕ್ ಒತ್ತಡ ನಿರ್ವಹಣೆಗೆ ಹೊಸ ಕಾರ್ಯ

Spread the love

ಮಂಗಳೂರು : ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಒಂದಾದ ನಂತೂರಿನಲ್ಲಿ ಪ್ರತಿನಿತ್ಯ ಟ್ರಾಫಿಕ್‌ ಬ್ಲಾಕ್‌ನದ್ದೇ ಸುದ್ದಿ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ಹೊತ್ತು ವಾಹನ ಸವಾರರು ಭಾರಿ ತ್ರಾಸ ಪಡಬೇಕಾಗಿದೆ. ಈ ಮಧ್ಯೆ ನಂತೂರಿನ ಒತ್ತಡ ಕಡಿಮೆಗೊಳಿಸಲು ಫ್ರಿ ಲೆಫ್ಟ್‌ ಸಂಚಾರಕ್ಕೆ ಮುಕ್ತಗೊಳಿಸಲು ಕಾಮಗಾರಿ ನಡೆಯುತ್ತಿದೆ.

ಬಿಕರ್ನಕಟ್ಟೆಯಿಂದ – ಪಂಪ್‌ವೆಲ್‌ ರಸ್ತೆ, ಪದುವಾ ಕಡೆಯಿಂದ – ಬಿಕರ್ನಕಟ್ಟೆ, ಪಂಪ್‌ವೆಲ್‌ನಿಂದ – ಮಲ್ಲಿಕಟ್ಟೆಯತ್ತ ಫ್ರೀ ಲೆಫ್ಟ್‌ ಮಾಡಲು ಉದ್ದೇಶಿಸಲಾಗಿದ್ದು, ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಪಂಪ್‌ವೆಲ್‌ನಿಂದ ಮಲ್ಲಿಕಟ್ಟೆ ರಸ್ತೆ ಕಾಮಗಾರಿ ಬಾಕಿಯಿದೆ. ಮಲ್ಲಿಕಟ್ಟೆಯಿಂದ-ಕೆಪಿಟಿ ಕಡೆಗೆ ಸಂಚಾರಕ್ಕೆ ಯಾವುದೇ ಸಮಸ್ಯೆಯಿಲ್ಲ.

ಸಂಸದರ ಆಗ್ರಹ

ನಂತೂರಿನ ಟ್ರಾಫಿಕ್‌ ಒತ್ತಡ ಕಡಿಮೆಗೊಳಿಸಲು ಸಂಸದ ಕ್ಯಾ.ಬ್ರಿಜೇಶ್‌ ಚೌಟ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಆಗ್ರಹ ಮಾಡಿದ್ದರು. ಈ ನಿಟ್ಟಿನಲ್ಲಿಯೇ ಫ್ರಿ ಲೆಫ್ಟ್‌ ಮೂಲಕ ಒತ್ತಡ ಕಡಿಮೆಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಮುಗ್ರೋಡಿ ಕನ್‌ಸ್ಟ್ರಕ್ಷನ್‌ ಈ ಕಾಮಗಾರಿ ನಡೆಸುತ್ತಿದೆ.
ನಂತೂರು ಸಿಗ್ನಲ್‌ ಕಂಬಗಳು ಮಾಯ!

ನಂತೂರು ಜಂಕ್ಷನ್‌ನಲ್ಲಿ ಟ್ರಾಫಿಕ್‌ ಒತ್ತಡವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಮಹಾನಗರ ಪಾಲಿಕೆ ಲಕ್ಷಾಂತರ ರೂ. ಖರ್ಚು ಮಾಡಿ ಸಿಗ್ನಲ್‌ ಅಳವಡಿಕೆ ಮಾಡಲಾಗಿತ್ತು. ಆದರೆ ಈ ಸಿಗ್ನಲ್‌ ನಂತೂರಿನಂತಹ ಜಂಕ್ಷನ್‌ಗೆ ಅವೈಜ್ಞಾನಿಕವಾದ ಕಾರಣ ಸಿಗ್ನಲ್‌ ಅಳವಡಿಕೆ ಮಾಡಿದ ನಂತರ ಟ್ರಾಫಿಕ್‌ ಬ್ಲಾಕ್‌ ಎರಡು ಪಟ್ಟು ಜಾಸ್ತಿಯಾಯಿತು. ಪ್ರಾಯೋಗಿಕ ನೆಲೆಯಲ್ಲಿ ಎರಡೆರಡು ಬಾರಿ ಸಿಗ್ನಲ್‌ ಆರಂಭಿಸಿ ಬಳಿಕ ಸಾರ್ವಜನಿಕರಿಂದ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಟ್ರಾಫಿಕ್‌ ಸಿಗ್ನಲ್‌ ಸ್ಥಗಿತಗೊಳಿಸಲಾಗಿತ್ತು. ಇದೀಗ ಚತುಷ್ಪಥ ಕಾಮಗಾರಿ, ಫ್ರೀ ಲೆಫ್ಟ್‌ ಹಿನ್ನೆಲೆಯಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಅಳವಡಿಸಲಾದ ಸಿಗ್ನಲ್‌ಗಳನ್ನೇ ತೆರವು ಮಾಡಲಾಗಿದೆ.
ಹೆದ್ದಾರಿ ಬದಿಯ ಅಪಾಯಕಾರಿ ಒಣ ಮರಗಳ ತೆರವು

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರಿಯ ಶಾಂತಿಯಿಂದ ಅಡ್ಡಹೊಳೆವರೆಗೆ ಹೆದ್ದಾರಿ ಬದಿಯ ಅಪಾಯಕಾರಿಯಾಗಿ ಬಾಗಿದ್ದ ಒಣಗಿದ ಮರಗಳನ್ನು ಕೊನೆಗೂ ತೆರವು ಮಾಡಲಾಗಿದೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮೇ 13ರಂದು ಪ್ರಕಟವಾದ ‘ಪೆರಿಯಶಾಂತಿ- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣ, ಅಪಾಯಕಾರಿ ಮರಗಳಿಂದ ಅಪಘಾತ ಭೀತಿ’ ಎಂಬ ಸುದ್ದಿಗೆ ತ್ವರಿತಗತಿಯಲ್ಲಿ ಸ್ಪಂದನೆ ಸಿಕ್ಕಿದೆ.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ಸ್ಪಂದನೆಯಿಂದ ಹೆದ್ದಾರಿ ಬದಿಯಲ್ಲಿಅಪಾಯಕಾರಿ ಸ್ಥಿತಿಯಲ್ಲಿದ್ದ ಒಣ ಮರಗಳು ತೆರವುಗೊಂಡಿವೆ.ಇದರಿಂದ ವಾಹನ ಸವಾರರು ಸಾರ್ವಜನಿಕರು ಭಯವಿಲ್ಲದೆ ಸಂಚರಿಸುವಂತಾಗಿದೆ. ಪೆರಿಯಶಾಂತಿಯ ಬಳಿ ಇರುವ ವಾಲ್ತಾಜೆ ಎಂಬಲ್ಲಿನ ಹೆದ್ದಾರಿ ಬದಿಯಲ್ಲಿಉದ್ದಕ್ಕೂ ಸಾಕಷ್ಟು ಸಂಖ್ಯೆಯ ಒಣಗಿದ ಮರಗಳಿವೆ. ಕೆಲವು ಮರಗಳು ತೀವ್ರವಾಗಿ ಹೆದ್ದಾರಿಗೆ ಬಾಗಿದ ಸ್ಥಿತಿಯಲ್ಲಿದ್ದು, ಬಲವಾದ ಗಾಳಿ ಬಂತೆಂದರೆ ನೇರವಾಗಿ ರಸ್ತೆಗೆ ಸ್ಥಿತಿಯಲ್ಲಿದ್ದು, ಬಲವಾದ ಗಾಳಿ ಬಂತೆಂದರೆ ನೇರವಾಗಿ ರಸ್ತೆಗೆ ಬಿದ್ದು ಅಪಾಯವನ್ನುಂಟು ಮಾಡುವ ಸ್ಥಿತಿಯಲ್ಲಿ ಇದ್ದವು.

ಕಳೆದ ವರ್ಷ ಮಳೆಗಾಲದ ಸಂದರ್ಭ ಇದೇ ರೀತಿಯ ಪರಿಸ್ಥಿತಿಯಲ್ಲಿ ಮರಗಳು ವಾಹನಗಳ ಮೇಲೆ ಬಿದ್ದು ಅಪಘಾತಗಳು ಸಂಭವಿಸಿವೆ. ಮರಗಳು ಇರುವುದನ್ನು ಕಂಡು ಕೂಡ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ಅಪಾಯದ ಪರಿಸ್ಥಿತಿಯ ಬಗ್ಗೆ ಸ್ಥಳೀಯರು ಹಲವು ಬಾರಿ ಉನ್ನತಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸೂಕ್ತ ಕ್ರಮಗಳನ್ನು ಇದುವರೆಗೆ ಕೈಗೊಳ್ಳಲಾಗಿಲ್ಲಎಂಬ ಸಾರ್ವಜನಿಕರ ಅಭಿಪ್ರಾಯದೊಂದಿಗೆ ಪತ್ರಿಕೆಯಲ್ಲಿ ವರದಿಯನ್ನು ಪ್ರಕಟಗೊಳಿಸಲಾಗಿತ್ತು.


Spread the love
Share:

administrator

Leave a Reply

Your email address will not be published. Required fields are marked *