ಕಬಾಲಿ ನಿರ್ಮಾಪಕನ ನಿಗೂಢ ಸಾವು! ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಪಣಜಿ: ಗೋವಾದ ಸಿಯೋಲಿಮ್ ಎಂಬ ಗ್ರಾಮದ ಮನೆ ಒಂದರಲ್ಲಿ ತೆಲುಗು ಚಿತ್ರ ನಿರ್ಮಾಪಕ ಸುಂಕರ ಕೃಷ್ಣ ಪ್ರಸಾದ್ ಚೌಧರಿ (44) ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ ಯಾಗಿದೆ.
ರಜನೀಕಾಂತ್ರ “ಕಬಾಲಿ’ ಸಿನೆಮಾವನ್ನು ಚೌಧರಿ ನಿರ್ಮಿದ್ದರು. ಎಸ್ಪಿ ಅಕ್ಷತ್ ಕೌಶಲ್ “ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ’ ಎಂದಿದ್ದಾರೆ. 2023ರಲ್ಲಿ ಮಾದಕ ವಸ್ತು ಪ್ರಕರಣವೊಂದರ ಸಂಬಂಧಿಸಿ ಚೌಧರಿ ಬಂಧನಕ್ಕೊಳಗಾಗಿದ್ದರು.