ಕನ್ವರ್ ಯಾತ್ರೆ ವೇಳೆ ಹಿಂದೂಗಳ ಪವಿತ್ರ ಕಲಶದ ಮೇಲೆ ಉಗುಲಿದ ಮುಸ್ಲಿಂ ವ್ಯಕ್ತಿ

ಲಖನೌ:ಉತ್ತರ ಪ್ರದೇಶದ (Uttar Pradesh) ಮುಜಾಫರ್ನಗರ (Muzaffarnagar) ಜಿಲ್ಲೆಯ ಪುರ್ಕಾಜಿ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆಯುತ್ತಿರುವ ಕನ್ವರ್ ಯಾತ್ರೆಯ (Kanwar Yatra) ವೇಳೆ ಗಲಾಟೆ ನಡೆದಿದೆ. ಓರ್ವ ಯುವಕ ಕನ್ವರ್ (ಗಂಗೆಯ ಪವಿತ್ರ ನೀರನ್ನು ಒಯ್ಯುವ ಅಲಂಕೃತ ಬಿದಿರಿನ ರಚನೆ) ಮೇಲೆ ಉಗುಳಿದ ಆರೋಪ ಕೇಳಿಬಂದಿದ್ದು, ಈ ಘಟನೆಯಿಂದ ಆಕ್ರೋಶಗೊಂಡ ಯಾತ್ರಿಕರು ಪ್ರತಿಭಟನೆ ನಡೆಸಿದ್ದಾರೆ.

ಪೊಲೀಸರ ಪ್ರಕಾರ, ದೆಹಲಿಯ ಮುಸ್ಕಾನ್ ಎಂಬ ಯಾತ್ರಿಕ ಮಹಿಳೆ ವಿಶ್ರಾಂತಿಗಾಗಿ ತಾತ್ಕಾಲಿಕವಾಗಿ ನಿಂತಿದ್ದಾಗ ಈ ಘಟನೆ ಸಂಭವಿಸಿದೆ. ಅವರು 31 ಲೀಟರ್ ಗಂಗೆಯ ಪವಿತ್ರ ನೀರಿನ ಕನ್ವರ್ನನ್ನು ಹೊತ್ತಿದ್ದರು. ಅವರ ಸಹೋದರ ಆನ್ಶುಲ್ ಶರ್ಮಾ 101 ಲೀಟರ್ ಕನ್ವರ್ ಒಯ್ಯುತ್ತಿದ್ದರು. ಇವರು ಹರಿದ್ವಾರದಿಂದ ಕಾಲ್ನಡಿಗೆಯಲ್ಲಿ ಇತರ ಯಾತ್ರಿಕರೊಂದಿಗೆ ವಾಪಸಾಗುತ್ತಿದ್ದಾಗ, ಪುರ್ಕಾಜಿಯಲ್ಲಿ ಈ ಘಟನೆ ನಡೆದಿದೆ.

ಆರೋಪಿಯನ್ನು ಉಸ್ಮಾನ್ ಎಂದು ಗುರುತಿಸಲಾಗಿದ್ದು, ಘಟನೆಯ ನಂತರ ತಕ್ಷಣವೇ ಆತನನ್ನು ವಶಕ್ಕೆ ಪಡೆಯಲಾಗಿದೆ. ಕೋಪಗೊಂಡ ಯಾತ್ರಿಕರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ಆರಂಭಿಸಿದರು. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ, ಹಲವು ಗಂಟೆಗಳ ಬಳಿಕ ಪರಿಸ್ಥಿತಿಯನ್ನು ಶಾಂತಗೊಳಿಸಿದರು.
ಕನ್ವರ್ ಯಾತ್ರೆಯು ವಾರ್ಷಿಕ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಭಕ್ತರು ಗಂಗೆಯ ಪವಿತ್ರ ನೀರನ್ನು ಶಿವಾಲಯಗಳಿಗೆ ಸಮರ್ಪಿಸುತ್ತಾರೆ. ಈ ಸಮಯದಲ್ಲಿ ಲಕ್ಷಾಂತರ ಜನರು ಕಾಲ್ನಡಿಗೆಯಲ್ಲಿ ಭಾಗವಹಿಸುತ್ತಾರೆ. ಹೀಗೆ ಬರುವವರಿಗೆ ರಸ್ತೆಯಲ್ಲಿ ಕಟ್ಟುನಿಟ್ಟಾದ ಭದ್ರತೆಯನ್ನು ಒದಗಿಸಲಾಗುತ್ತದೆ.
