ಅನ್ಯಕೋಮಿನ ಯುವಕನಿಂದ ಹಿಂದೂ ಅಪ್ರಾಪ್ತೆಯ ಅಪಹರಣ –ಬಲಾತ್ಕಾರ ಆರೋಪ

ದೇವರಿಯ (ಉತ್ತರ ಪ್ರದೇಶ) – ಜಿಲ್ಲೆಯಲ್ಲಿನ ಲಾರ್ ಉಪನಗರದಲ್ಲಿ ಓರ್ವ ಮುಸಲ್ಮಾನ ಯುವಕನು ಇತ್ತೀಚಿಗೆ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿ ಬಲತ್ಕಾರ ಮಾಡಿದನು. ಸಂತ್ರಸ್ತ ಹುಡುಗಿಯ ಕುಟುಂಬದವರು ಆರೋಪಿಯ ಮನೆಗೆ ತಲುಪಿದಾಗ ಅವರ ಮೇಲೂ ಹಲ್ಲೆ ಮಾಡಲಾಯಿತು.

ಸಂತ್ರಸ್ತ ಹುಡುಗಿಯ ತಾಯಿಯು ಆರೋಪಿಯ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಪೊಲೀಸರು ಬೇಕೌಫ ಸಾರಿಕ್ ಎಂಬವನ ಜೊತೆಗೆ ೪ ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಸಂತ್ರಸ್ತ ಹುಡುಗಿಯನ್ನು ಆಸ್ಪತ್ರೆಗೆ ತಪಾಸಣೆಗಾಗಿ ಸೇರಿಸಿದರು. ಆ ಬಳಿಕ ಹುಡುಗಿಗೆ ಕೌನ್ಸಿಲಿಂಗ್ ಗಾಗಿ ದೇವರಿಯಾದಲ್ಲಿನ ‘ಒನ್ ಸ್ಟಾಪ್ ಸೆಂಟರ್ ‘ ಗೆ ಕಳುಹಿಸಲಾಯಿತು. ಪೊಲೀಸರು ಸಾರಿಕ್ ನನ್ನು ವಶಕ್ಕೆ ಪಡೆದಿದ್ದು ಈ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.