ಅಣ್ಣನ ಮಗುವಿನ ಕೊಲೆ ಮಾಡಿದ ಮಾನಸಿಕ ಅಸ್ವಸ್ಥ ಚಿಕ್ಕಪ್ಪ: ತಲೆಯನ್ನು ಕೆರೆಗೆ ಎಸೆದು ಪರಾರಿಯಾದ ಆರೋಪಿಯ ಬಂಧನ

ಚೆನ್ನೈ :ಮಾನಸಿಕ ಅಸ್ವಸ್ಥನೋರ್ವ ತನ್ನ ಅಣ್ಣನ ಪುಟ್ಟ ಮಗುವನ್ನು ಕೊಂದು, ತುಂಡು ತುಂಡು ಮಾಡಿ ತಲೆಯನ್ನು ಕೆರೆಗೆ ಎಸೆದ ಘಟನೆ ತಮಿಳುನಾಡಿನಲ್ಲಿ ಡೆದಿದೆ.
ತಮಿಳುನಾಡಿನ ಎಮನೇಶ್ವರಂನಲ್ಲಿ ಎರಡೂವರೆ ವರ್ಷದ ಬಾಲಕಿಯನ್ನು ಕೊಲೆ ಮಾಡಲಾಗಿದೆ. ಬಳಿಕ ಬಾಲಕಿಯ ತಲೆಯನ್ನು ಕತ್ತರಿಸಿ ಕೆರೆಗೆ ಎಸೆದಿದ್ದ ರಾಕ್ಷಸ ಚಿಕ್ಕಪ್ಪನನ್ನು ಬಂಧಿಸಲಾಗಿದೆ.
ಆದರೆ, ಕೊಲೆ ಮಾಡಿದ ಆರೋಪಿ ಸಂಜಯ್ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.
ಹಿತ್ತಲಿಗೆ ಕರೆದೊಯ್ದು ಕೊಂದ ಕ್ರೂರಿ
ದೇಸಿಂಗು ರಾಜ ಮತ್ತು ಡೈಸಿ ದಂಪತಿಯ ಪುತ್ರಿ ಲೆಮೋರಿಯಾ, ತನ್ನ ಚಿಕ್ಕಪ್ಪ ಸಂಜಯ್ ಜೊತೆ ಮನೆಯಲ್ಲಿ ಆಟವಾಡುತ್ತಿದ್ದಳು. ಮೊದಲೇ ಮಾನಸಿಕ ಅಸ್ವಸ್ಥನಾಗಿದ್ದ ಸಂಜಯ್, ಲೆಮೋರಿಯಾಳನ್ನು ಹಿತ್ತಲಿಗೆ ಎಳೆದುಕೊಂಡು ಹೋಗಿ, ಚಾಕು ತೆಗೆದುಕೊಂಡು ತಲೆಯನ್ನೇ ಕಡಿದಿದ್ದಾನೆ. ಮಗುವನ್ನು ಕೊಂದ ನಂತರ ಭಯಬಿದ್ದ ಸಂಜಯ್ ಕತ್ತರಿಸಿದ ತಲೆಯನ್ನು ಕೆರೆಯಲ್ಲಿ ಎಸೆದುಬಂದಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಎಮನೇಶ್ವರಂ ಪೊಲೀಸರು ಮಾಹಿತಿ ಪಡೆದು, ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ದೇಹ ಮತ್ತು ತಲೆ ಎರಡನ್ನೂ ಹೊರತೆಗೆಸಿದ್ದಾರೆ. ಬಾಲಕಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಮಕುಡಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಸಂಜಯ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.