Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಿಂದೂ ಸಮಾಜದ ಧಾರ್ಮಿಕ ಶ್ರದ್ಧೆ, ನಂಬಿಕೆಯ ವಿರುದ್ಧ ಕೇಂದ್ರ ಸರ್ಕಾರದ ಅವೈಜ್ಞಾನಿಕ ವಿದ್ಯುತ್ ಪ್ರಸರಣ ಯೋಜನೆಗೆ ಆಕ್ರೋಶ ವ್ಯಕ್ತಪಡಿಸಿ ಬೃಹತ್ ಪ್ರತಿಭಟನೆ: ಹಿಂದೂ ಮಹಾಸಭಾ ಕರ್ನಾಟಕದ ಸಂಪೂರ್ಣ ಬೆಂಬಲ

Spread the love

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ 400 ಕೆ.ವಿ. ವಿದ್ಯುತ್ ಪ್ರಸರಣ ಯೋಜನೆಯ ವಿರುದ್ಧ ಇಂದು (ಗುರುವಾರ, 09-10-2025 ರಂದು ಬೆಳಿಗ್ಗೆ 10 ಗಂಟೆಗೆ) ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಉಮಿಯಮಠದ ಬಳಿ ಬೃಹತ್ ಪ್ರತಿಭಟನೆ ಆರಂಭಗೊಂಡಿದೆ. ಈ ಹೋರಾಟವನ್ನು ಸನಾತನ ಹಿಂದೂ ಧರ್ಮ ಪ್ರಾಥಮಿಕ ನೊಂದಣಿಸಾಲ ಸಂರಕ್ಷಣಾ ಹೋರಾಟ ಸಮಿತಿಯು ಮುನ್ನಡೆಸುತ್ತಿದ್ದು, ವಿಟ್ಲ, ದ.ಕ., ಮತ್ತು ಉಡುಪಿ ಜಿಲ್ಲೆಗಳ ಹಲವು ಧಾರ್ಮಿಕ, ಡಾ. ಎಲ್.ಕೆ. ಸುವರ್ಣ ಇವರ ನೇತೃತ್ವದ ಹಿಂದೂ ಮಹಾಸಭಾ ಕರ್ನಾಟಕ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ ಹಾಗೂ ರೈತ ಸಂಘಟನೆಗಳ ಸಹಯೋಗ ದೊರೆತಿದೆ. ಪ್ರಸ್ತಾವಿತ ವಿದ್ಯುತ್ ಮಾರ್ಗವು ಸುಮಾರು 20ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ರೈತ ಕುಟುಂಬಗಳ ಜೀವನೋಪಾಯಕ್ಕೆ ಧಕ್ಕೆ ತಂದಿದ್ದು, 1000ಕ್ಕೂ ಹೆಚ್ಚು ಕೃಷಿ ನಿವೇಶನಗಳು, ಮನೆಗಳು, ಮತ್ತು ಸಾಂಪ್ರದಾಯಿಕ ದೇಗುಲಗಳು ಹಾನಿಗೊಳಗಾಗುವ ಭೀತಿ ಎದುರಾಗಿದೆ. ಕಂಪನಿಯು ಕಾನೂನುಬಾಹಿರವಾಗಿ ದಬ್ಬಾಳಿಕೆ ನಡೆಸಿ ಕಾಮಗಾರಿ ಮುಂದುವರಿಸಲು ಯತ್ನಿಸುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದು, ರೈತ ಸಮುದಾಯ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ 400 ಕೆ.ವಿ. ವಿದ್ಯುತ್ ಪ್ರಸರಣ ಯೋಜನೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಸಮಿತಿಯು ಆಗ್ರಹಿಸಿದೆ. ಪ್ರತಿಭಟನಾ ಸ್ಥಳವಾದ ಶ್ರೀ ಮಂಜುನಾಥ ಭಟ್ ಪಾದಮುತ್ತಾಯದ ಧಾರ್ಮಿಕ ಮಂಟಪದ ಬಳಿ ಸಾವಿರಾರು ಜನರು ಸೇರಿದ್ದು, ಯೋಜನೆ ರದ್ದಾಗುವವರೆಗೂ ಹೋರಾಟ ಮುಂದುವರಿಸುವ ದೃಢ ಸಂಕಲ್ಪ ವ್ಯಕ್ತಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *